Kundapur: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕುಂದಾಪುರದ ಯುವಕನಿಗೆ ಸಿಡಿಲು ಬಡಿದು ಸಾವು

|

Updated on: Oct 31, 2023 | 10:44 AM

Lightning: ಮೊನ್ನೆ ಭಾನುವಾರ ರಾತ್ರಿ ಮಳೆ ಬರುತ್ತಿದ್ದಾಗ ಮನೆಯ ವರಾಂಡದಲ್ಲಿ ಯುವಕ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಆ ವೇಳೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

Kundapur: ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕುಂದಾಪುರದ ಯುವಕನಿಗೆ ಸಿಡಿಲು ಬಡಿದು ಸಾವು
ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕುಂದಾಪುರ ಯುವಕನಿಗೆ ಸಿಡಿಲು ಬಡಿದು ಸಾವು
Follow us on

ಕುಂದಾಪುರ, ಅಕ್ಟೋಬರ್ 31: ಮೊಬೈಲ್‌ನಲ್ಲಿ (mobile phone) ಮಾತನಾಡುತ್ತಿದ್ದ ಯುವಕನಿಗೆ (youth) ಸಿಡಿಲು (lightning) ಬಡಿದು ಸಾವನ್ನಪ್ಪಿದ ಘಟನೆ ಅವರ್ಸೆ ( Avarse) ಸಮೀಪದ ಕಿರಾಡಿ ಎಂಬಲ್ಲಿ ಮೊನ್ನೆ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಕಿರಾಡಿ ಹಂಚಿನಮನೆ ( Kiradi Hanchinamane) ನಿವಾಸಿಗಳಾದ ಬಾಬಣ್ಣ ಶೆಟ್ಟಿ ಮತ್ತು ಬೇಬಿ ಶೆಟ್ಟಿ ದಂಪತಿಯ ಪುತ್ರ ಪ್ರಮೋದ್ ಶೆಟ್ಟಿ (24) ಎಂದು (Pramod Shetty) ಗುರುತಿಸಲಾಗಿದೆ.

ಮಳೆ ಬರುತ್ತಿದ್ದಾಗ ಮನೆಯ ತೆರೆದ ವರಾಂಡದಲ್ಲಿ ಪ್ರಮೋದ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಆ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಆತನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.

Also Read: Karnataka Weather – ಬೆಂಗಳೂರು ಸೇರಿ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆ

ಪ್ರಮೋದ್ ಆರ್ಥಿಕವಾಗಿ ಬಡ ಕುಟುಂಬದ ಯುವಕ. ವಿದ್ಯಾಭ್ಯಾಸ ಮುಗಿಸಿ ಬ್ರಹ್ಮಾವರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸೌಮ್ಯ ಸ್ವಭಾವದ ಪ್ರಮೋದ್ ಶೆಟ್ಟಿ, ಉತ್ತಮ ವಾಲಿಬಾಲ್ ಆಟಗಾರನಾಗಿದ್ದ. ಆತ ಪೋಷಕರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ