AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ‌: ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಡಿಸಿ, ಎಸ್ಪಿ, ನ್ಯಾಯಾಧೀಶರು

ಕೂಡಿ ಬಂದ ಕಂಕಣ ಭಾಗ್ಯ - ಉಡುಪಿ‌ಯಲ್ಲಿ ನಿನ್ನೆ ಬುಧವಾರ ನಡೆದ ಅಪರೂಪದ ಮದುವೆಗೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸಾಕ್ಷಿಯಾದರು. ಸರ್ಕಾರದ 20 ಸಾವಿರ ರೂ ಅನುದಾನ ಹಾಗೂ ದಾನಿಗಳ‌ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.

ಉಡುಪಿ‌: ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಡಿಸಿ, ಎಸ್ಪಿ, ನ್ಯಾಯಾಧೀಶರು
ಉಡುಪಿ‌ - ಕೂಡಿ ಬಂದ ಕಂಕಣ ಭಾಗ್ಯ -ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Dec 21, 2023 | 10:40 AM

Share

ಖುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯ ಅನ್ನೋ ಮಾತಿದೆ. ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕ ಇನ್ನೆಲ್ಲೋ ಅನಾಥಳಾಗಿ ನಾಲ್ಕು ಗೋಡೆಗಳ ನಡುವೆ ಬೆಳೆದ ಯುವತಿ. ಈಗ ಸತಿ-ಪತಿಗಳಾಗಿ ಒಂದಾಗಿದ್ದಾರೆ. ಈ ಅಪರೂಪದ ಕಂಕಣ ಭಾಗ್ಯದ ಆ ಸುಂದರ ಕ್ಷಣ ಝಲಕ್ ಇಲ್ಲಿದೆ.

ಮನುಷ್ಯರು ಎಷ್ಟೇ ದೂರವಿದ್ದರು ಕೂಡ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು ಎಲ್ಲೋ ಇದ್ದ ಇಬ್ಬರು ಒಂದಾಗಲು ಕಾರಣವಂತೂ ಇದ್ದೆ ಇರುತ್ತೆ. ಹೀಗೆ ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕರು ಈಗ ಅನಾಥ ಯುವತಿಯರಿಗೆ ಬಾಳನ್ನ ನೀಡಿ ಹಸನಾಗಿಸಿದ್ದಾರೆ‌. ಹೌದು ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ವಧು ಸಿಗದ ಹಿನ್ನೆಲೆಯಲ್ಲಿ ಅನಾಥ ಹೆಣ್ಣು ಮಕ್ಕಳ ಪಾಲನೆ ಮಾಡುವ ಸ್ಟೇಟ್ ಹೋಂ ಸಂಪರ್ಕಿಸಿ ವಧುವನ್ನ ಅರಸಿ ಕೈಹಿಡಿದಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉಡುಪಿ‌ ನಗರದ ನಿಟ್ಟೂರು ಭಾಗದಲ್ಲಿರುವ ರಾಜ್ಯ ಮಹಿಳಾ ನಿಲಯ.

ಹೌದು, ರಾಜ್ಯ ಮಹಿಳಾ‌ ನಿಲಯ ನಿನ್ನೆ ಬುಧವಾರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.‌ ಹಿಂದಿನ ದಿನ ಮಂಗಳವಾರ ಮೆಹೆಂದಿ, ಅರಿಶಿನ ಶಾಸ್ತ್ರ ನಡೆದರೆ ಬುಧವಾರ ಮದುವೆಯ ಧಾರ್ಮಿಕ ವಿಧಿ ವಿಧಾನಗಳು ನಡೆದವು. ೧೧:೨೦ ರ‌ ಶುಭ ಮುಹೂರ್ತದಲ್ಲಿ ಶೀಲಾ ಹಾಗೂ ಕುಮಾರಿ ಈ ಇಬ್ಬರು ಅನಾಥ ಯುವತಿಯರ ಕಂಕಣ ಭಾಗ್ಯ ಕೂಡಿ ಬಂದು ಕೂಡು ಕುಟುಂಬವನ್ನ ಸೇರಿದ್ದಾರೆ.

ಅರ್ಚಕ ವೃತ್ತಿ ಮಾಡುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ವಧು ಕುಮಾರಿಯ ಕೈಹಿಡಿದರೆ, ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಶೀಲಾ ಎಂಬ ಯುವತಿಯನ್ನ ವಿವಾಹ ಮಾಡಿಕೊಂಡಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಾಕ್ಷಿಯಾದರು. ವರನ ಕುಟುಂಬಸ್ಥರು, ದಾನಿಗಳು ಕೂಡ ವಧು ವರರನ್ನ ಹರಸಿ ಉಡುಗೊರೆ ನೀಡುವ ಮೂಲಕ ಹಾರೈಸಿದ್ರು. ಸರ್ಕಾರದ ೨೦ ಸಾವಿರ ರೂ ಅನುದಾನ ಹಾಗೂ ದಾನಿಗಳ‌ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:39 am, Thu, 21 December 23

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!