Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ‌: ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಡಿಸಿ, ಎಸ್ಪಿ, ನ್ಯಾಯಾಧೀಶರು

ಕೂಡಿ ಬಂದ ಕಂಕಣ ಭಾಗ್ಯ - ಉಡುಪಿ‌ಯಲ್ಲಿ ನಿನ್ನೆ ಬುಧವಾರ ನಡೆದ ಅಪರೂಪದ ಮದುವೆಗೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸಾಕ್ಷಿಯಾದರು. ಸರ್ಕಾರದ 20 ಸಾವಿರ ರೂ ಅನುದಾನ ಹಾಗೂ ದಾನಿಗಳ‌ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.

ಉಡುಪಿ‌: ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಡಿಸಿ, ಎಸ್ಪಿ, ನ್ಯಾಯಾಧೀಶರು
ಉಡುಪಿ‌ - ಕೂಡಿ ಬಂದ ಕಂಕಣ ಭಾಗ್ಯ -ಕೂಡು ಕುಟುಂಬ ಸೇರಿದ ಇಬ್ಬರು ಅನಾಥ ಯುವತಿಯರು
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on:Dec 21, 2023 | 10:40 AM

ಖುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯ ಅನ್ನೋ ಮಾತಿದೆ. ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕ ಇನ್ನೆಲ್ಲೋ ಅನಾಥಳಾಗಿ ನಾಲ್ಕು ಗೋಡೆಗಳ ನಡುವೆ ಬೆಳೆದ ಯುವತಿ. ಈಗ ಸತಿ-ಪತಿಗಳಾಗಿ ಒಂದಾಗಿದ್ದಾರೆ. ಈ ಅಪರೂಪದ ಕಂಕಣ ಭಾಗ್ಯದ ಆ ಸುಂದರ ಕ್ಷಣ ಝಲಕ್ ಇಲ್ಲಿದೆ.

ಮನುಷ್ಯರು ಎಷ್ಟೇ ದೂರವಿದ್ದರು ಕೂಡ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು ಎಲ್ಲೋ ಇದ್ದ ಇಬ್ಬರು ಒಂದಾಗಲು ಕಾರಣವಂತೂ ಇದ್ದೆ ಇರುತ್ತೆ. ಹೀಗೆ ಎಲ್ಲೋ ಕೂಡು ಕುಟುಂಬದಲ್ಲಿ ಬೆಳೆದ ಯುವಕರು ಈಗ ಅನಾಥ ಯುವತಿಯರಿಗೆ ಬಾಳನ್ನ ನೀಡಿ ಹಸನಾಗಿಸಿದ್ದಾರೆ‌. ಹೌದು ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ವಧು ಸಿಗದ ಹಿನ್ನೆಲೆಯಲ್ಲಿ ಅನಾಥ ಹೆಣ್ಣು ಮಕ್ಕಳ ಪಾಲನೆ ಮಾಡುವ ಸ್ಟೇಟ್ ಹೋಂ ಸಂಪರ್ಕಿಸಿ ವಧುವನ್ನ ಅರಸಿ ಕೈಹಿಡಿದಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಉಡುಪಿ‌ ನಗರದ ನಿಟ್ಟೂರು ಭಾಗದಲ್ಲಿರುವ ರಾಜ್ಯ ಮಹಿಳಾ ನಿಲಯ.

ಹೌದು, ರಾಜ್ಯ ಮಹಿಳಾ‌ ನಿಲಯ ನಿನ್ನೆ ಬುಧವಾರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.‌ ಹಿಂದಿನ ದಿನ ಮಂಗಳವಾರ ಮೆಹೆಂದಿ, ಅರಿಶಿನ ಶಾಸ್ತ್ರ ನಡೆದರೆ ಬುಧವಾರ ಮದುವೆಯ ಧಾರ್ಮಿಕ ವಿಧಿ ವಿಧಾನಗಳು ನಡೆದವು. ೧೧:೨೦ ರ‌ ಶುಭ ಮುಹೂರ್ತದಲ್ಲಿ ಶೀಲಾ ಹಾಗೂ ಕುಮಾರಿ ಈ ಇಬ್ಬರು ಅನಾಥ ಯುವತಿಯರ ಕಂಕಣ ಭಾಗ್ಯ ಕೂಡಿ ಬಂದು ಕೂಡು ಕುಟುಂಬವನ್ನ ಸೇರಿದ್ದಾರೆ.

ಅರ್ಚಕ ವೃತ್ತಿ ಮಾಡುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ವಧು ಕುಮಾರಿಯ ಕೈಹಿಡಿದರೆ, ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಶೀಲಾ ಎಂಬ ಯುವತಿಯನ್ನ ವಿವಾಹ ಮಾಡಿಕೊಂಡಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಡಿಸಿ, ಎಸ್ಪಿ, ನ್ಯಾಯಾಧೀಶರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಾಕ್ಷಿಯಾದರು. ವರನ ಕುಟುಂಬಸ್ಥರು, ದಾನಿಗಳು ಕೂಡ ವಧು ವರರನ್ನ ಹರಸಿ ಉಡುಗೊರೆ ನೀಡುವ ಮೂಲಕ ಹಾರೈಸಿದ್ರು. ಸರ್ಕಾರದ ೨೦ ಸಾವಿರ ರೂ ಅನುದಾನ ಹಾಗೂ ದಾನಿಗಳ‌ ಸಹಕಾರದಿಂದ ಮದುವೆ ಸಂಭ್ರಮ ಮನೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:39 am, Thu, 21 December 23

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ