AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Rules: ವಾಹನಗಳ ನಂಬರ್​ ಪ್ಲೇಟ್​ ಇನ್ಮುಂದೆ ಹೀಗೆ ಇರಬೇಕಂತೆ..ಇಲ್ಲದಿದ್ದರೆ ದಂಡ!; ಫೋಟೋ ಶೇರ್​ ಮಾಡಿದ ಬೆಂಗಳೂರು ಟ್ರಾಫಿಕ್​ ಪೊಲೀಸ್​

ನಾಗರಿಕರೊಬ್ಬರು ಬೆಂಗಳೂರು ಟ್ರಾಫಿಕ್​ ಪೊಲೀಸರ ಟ್ವೀಟ್​ಗೆ ರಿಪ್ಲೈ ಮಾಡಿ, ಸಾರ್ವಜನಿಕರು ನೋಂದಣಿ ಫಲಕದ ಮೇಲೆ ಕನ್ನಡ ಅಕ್ಷರಗಳು, ಅಂಕಿಗಳನ್ನು ಬಳಸಬಹುದೇ? ಇದನ್ನು ಪ್ರಮಾಣಿತ ಎಂದು ಪರಿಗಣಿಸುತ್ತೀರಾ? ದಯವಿಟ್ಟು ಸ್ಪಷ್ಟಪಡಿಸಿ ಎಂದು ಕೇಳಿದ್ದಾರೆ..

Traffic Rules: ವಾಹನಗಳ ನಂಬರ್​ ಪ್ಲೇಟ್​ ಇನ್ಮುಂದೆ ಹೀಗೆ ಇರಬೇಕಂತೆ..ಇಲ್ಲದಿದ್ದರೆ ದಂಡ!; ಫೋಟೋ ಶೇರ್​ ಮಾಡಿದ ಬೆಂಗಳೂರು ಟ್ರಾಫಿಕ್​ ಪೊಲೀಸ್​
ಬೆಂಗಳೂರು ಟ್ರಾಫಿಕ್ ಪೊಲೀಸರು ಶೇರ್​ ಮಾಡಿಕೊಂಡ ಚಿತ್ರ
Lakshmi Hegde
|

Updated on:Mar 25, 2021 | 12:54 PM

Share

ಟ್ರಾಫಿಕ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಚಾರಿ ಪೊಲೀಸರು ಸದಾ ಅರಿವು ಮೂಡಿಸುತ್ತಿರುತ್ತಾರೆ. ಅದರಲ್ಲೂ ಬೆಂಗಳೂರು ಸಿಟಿ ಟ್ರಾಫಿಕ್​ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪದೇಪದೆ ಟ್ರಾಫಿಕ್​ ರೂಲ್ಸ್​ ಬಗ್ಗೆ ಜನಸಾಮಾನ್ಯರನ್ನು ಎಚ್ಚರಿಸುತ್ತಿರುತ್ತಾರೆ.. ಏನೇ ಅಪ್​ಡೇಟ್ಸ್​ ಇದ್ದರೂ ಕೊಡುತ್ತಾರೆ. ಅಲ್ಲಿ ಪ್ರಶ್ನೆ ಕೇಳುವ ಸಾರ್ವಜನಿಕರಿಗೂ ಉತ್ತರ ನೀಡುತ್ತಾರೆ. ಹಾಗೇ, ಬೆಂಗಳೂರು ಸಿಟಿ ಟ್ರಾಫಿಕ್​ ಪೊಲೀಸರು ನಿನ್ನೆ ವಾಹನಗಳ ನಂಬರ್​ಪ್ಲೇಟ್​​ಗೆ ಸಂಬಂಧಪಟ್ಟ ಒಂದು ನಿಯಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಈ ನಿಯಮದ ಪ್ರಕಾರ ನಿಮ್ಮ ವಾಹನಕ್ಕೆ ನಂಬರ್​ ಪ್ಲೇಟ್​ ಇಲ್ಲದೆ ಇದ್ದರೆ, ದಂಡ ಬೀಳುತ್ತದೆ ಎಂಬುದನ್ನೂ ತಿಳಿಸಿದ್ದಾರೆ.

ಕಾರಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಬೆಂಗಳೂರು ಸಿಟಿ ಟ್ರಾಫಿಕ್​ ಪೊಲೀಸರು, ವಾಹನಗಳ ನಂಬರ್​ ಪ್ಲೇಟ್​ ಹಿಂಭಾಗ ಹಾಗೂ ಮುಂಭಾಗಗಳಲ್ಲಿ ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಪೊಲೀಸರು ಈಗ ಹೇಳಿದ ನಿಯಮದ ಪ್ರಕಾರ, ನಿಮ್ಮ ನಾಲ್ಕು ಚಕ್ರದ ವಾಹನದ ಮುಂಭಾಗದ ನಂಬರ್​ ಪ್ಲೇಟ್​ ಆಯತ ಆಕಾರದಲ್ಲಿ ಇದ್ದು, ಒಂದೇ ಸಾಲಿನಲ್ಲಿ ನಂಬರ್ ಇರಬೇಕು. ಹಾಗೇ ಹಿಂಭಾಗದ ನಂಬರ್​ ಪ್ಲೇಟ್​ ಚೌಕ ಆಕಾರದಲ್ಲಿದ್ದು, ಎರಡು ಸಾಲಿನಲ್ಲಿ ನಂಬರ್​ ಇರಬೇಕು. ಇದೇ ಪ್ರಕಾರದಲ್ಲಿ ನಂಬರ್​ ಪ್ಲೇಟ್​ ಅಳವಡಿಸಿಕೊಂಡು, ದಂಡ ತುಂಬುವುದನ್ನು ತಪ್ಪಿಸಿಕೊಳ್ಳಿ ಎಂದು ಬರೆದಿದ್ದಾರೆ. ಹಾಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್​ ಪ್ಲೇಟ್​ಗಳು ಕಡ್ಡಾಯ ಎಂದೂ ತಿಳಿಸಿದ್ದಾರೆ. ಇಷ್ಟು ದಿನ ಬಹುತೇಕ ನಾಲ್ಕು ಚಕ್ರದ ವಾಹನಗಳಿಗೆ ಎರಡೂ ಕಡೆಯಲ್ಲೂ ಒಂದೇ ಲೈನಿನಲ್ಲಿ, ಉದ್ದನೆಯ ನಂಬರ್ ಪ್ಲೇಟ್​ ಇರುತ್ತಿತ್ತು. ಆದರೀಗ ಬೆಂಗಳೂರು ಸಿಟಿ ಟ್ರಾಫಿಕ್​ ಪೊಲೀಸರು ಹೇಳಿರುವ ಪ್ರಕಾರ, ಹಿಂಬದಿಯ ನಂಬರ್​ ಪ್ಲೇಟ್​ ಚೌಕ ಆಕಾರದಲ್ಲಿಯೇ ಇರಬೇಕಿದೆ.

ಕನ್ನಡದಲ್ಲಿ ಇರಬಹುದಾ? ಈ ಹಿಂದೆಯೇ ಹೊರತರಲಾದ ನಿಯಮದ ಪ್ರಕಾರ ಯಾವ ವಾಹನಗಳ ನಂಬರ್​ ಪ್ಲೇಟ್​ಗಳು ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಇರುವಂತಿಲ್ಲ. ಹಾಗೊಮ್ಮೆ ಇದ್ದರೂ ಜತೆಗೆ ಇಂಗ್ಲಿಷ್​ ಅಕ್ಷರಗಳಲ್ಲೂ ನಮೂದಿತವಾಗಿರಲೇಬೇಕು. ಇಲ್ಲದೆ ಇದ್ದರೆ ದಂಡ ಬೀಳುವುದು ಗ್ಯಾರಂಟಿ. ಕಳೆದ ವರ್ಷ ಬೆಂಗಳೂರಿನಲ್ಲಿ ಬೈಕ್​ ಸವಾರನೊಬ್ಬನಿಗೆ ಇದೇ ಕಾರಣಕ್ಕೆ ಪೀಣ್ಯ ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ದರು. ಆ ಸವಾರ ಬೈಕ್​ನ ನಂಬರ್​ ಪ್ಲೇಟ್​​ನಲ್ಲಿ ಅಚ್ಚಕನ್ನಡದಲ್ಲಿ ಅಂಕಿಗಳನ್ನು ಬರೆಸಿಕೊಂಡಿದ್ದರು. ಕನ್ನಡದಲ್ಲಿ ನೋಂದಣಿ ಫಲಕ ಹೊಂದಿದ ಬೈಕ್​ ಸವಾರನಿಗೆ ಫೈನ್​ ಹಾಕಿದ್ದಕ್ಕೆ ವಿರೋಧವೂ ವ್ಯಕ್ತವಾಗಿತ್ತು.

ಇದೀಗ ಮತ್ತೆ ನಾಗರಿಕರೊಬ್ಬರು ಬೆಂಗಳೂರು ಟ್ರಾಫಿಕ್​ ಪೊಲೀಸರ ಟ್ವೀಟ್​ಗೆ ರಿಪ್ಲೈ ಮಾಡಿ, ಸಾರ್ವಜನಿಕರು ನೋಂದಣಿ ಫಲಕದ ಮೇಲೆ ಕನ್ನಡ ಅಕ್ಷರಗಳು, ಅಂಕಿಗಳನ್ನು ಬಳಸಬಹುದೇ? ಇದನ್ನು ಪ್ರಮಾಣಿತ ಎಂದು ಪರಿಗಣಿಸುತ್ತೀರಾ? ದಯವಿಟ್ಟು ಸ್ಪಷ್ಟಪಡಿಸಿ ಎಂದು ಹೇಳಿದ್ದಾರೆ.. ಹಾಗೇ ಇನ್ನೊಬ್ಬರು ಟ್ವೀಟ್​ ಮಾಡಿ, ನಾವು ಕನ್ನಡ ಮತ್ತು ಇಂಗ್ಲಿಷ್​ ಎರಡೂ ಅಕ್ಷರ, ಅಂಕಿಗಳನ್ನು ಬಳಸಬಹುದಾ ಎಂದು ಪ್ರಶ್ನಿಸಿದ್ದಾರೆ. ಇವರಿಬ್ಬರಿಗೂ ಪ್ರತಿಕ್ರಿಯೆ ನೀಡಿರುವ ಟ್ರಾಫಿಕ್​ ಪೊಲೀಸರು, ಬಳಸಬಹುದು ಎಂದಿದ್ದಾರೆ. ಅಂದರೆ ಇನ್ನು ಮುಂದೆ ಕನ್ನಡದಲ್ಲಿ ಮಾತ್ರ ಅಂಕಿ-ಅಕ್ಷರಗಳು ಇದ್ದರೂ ಮಾನ್ಯ ಮಾಡುತ್ತಾರಾ? ಅಥವಾ ಮೊದಲಿನಿಂತೆ ಕನ್ನಡದಲ್ಲಿ ನಂಬರ್​ ಪ್ಲೇಟ್ ಹಾಕಿಸಿಕೊಂಡರೆ, ಅದರಲ್ಲಿ ಇಂಗ್ಲಿಷ್ ಅಕ್ಷರ-ಅಂಕಿಗಳನ್ನು ನಮೂದಿಸುವುದು ಕಡ್ಡಾಯವಾ ಎಂದು ಸ್ಪಷ್ಟವಾಗಿಲ್ಲ.

Bengalore City Traffic Police reply

Published On - 12:49 pm, Thu, 25 March 21

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ