AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊನ್ನಾವರಕ್ಕೂ ಬಂದಿದ್ದರು ರಾಮ-ಸೀತಾ; ಇಲ್ಲಿನ ರಾಮತೀರ್ಥದಲ್ಲಿದೆ ಅನೇಕ ಔಷಧಿ ಗುಣ

ದೇವತೆಗಳು ಶ್ರೀರಾಮನಿಗೆ ಶಿವಭಕ್ತನಾದ ರಾವಣನ ಹತ್ಯೆಯ ಪಾಪ ಪರಿಹಾರಕ್ಕಾಗಿ ಶಿವಾಲಯ ನಿರ್ಮಿಸುವಂತೆ ಅಪ್ಪಣೆ ಮಾಡಿದರು. ಶ್ರೀರಾಮನು ಬಾಣಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ. ಇದರಿಂದಾಗಿ ಈ ದೇವಾಲಯ ರಾಮೇಶ್ವರ ಎಂದು ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿರುವ (ರಾಮ)ತೀರ್ಥದಲ್ಲಿ ಸ್ನಾನಗೈದರೆ ಪಾಪ ಕಳೆಯುತ್ತದೆ.

ಹೊನ್ನಾವರಕ್ಕೂ ಬಂದಿದ್ದರು ರಾಮ-ಸೀತಾ; ಇಲ್ಲಿನ ರಾಮತೀರ್ಥದಲ್ಲಿದೆ ಅನೇಕ ಔಷಧಿ ಗುಣ
ರಾಮತೀರ್ಥ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Jan 07, 2024 | 1:28 PM

Share

ಕಾರವಾರ, ಜ.07: ರಾಮಾಯಣದ ಪ್ರಕಾರ, ರಾವಣ ವಧೆಯ ನಂತರ ಅಯೋಧ್ಯಾ (Ayodhya) ಮಾರ್ಗದಲ್ಲಿ ಸಾಗುವ ಶ್ರೀರಾಮ (Lord Rama) ತನ್ನ ಪಾಪ ನಿವೃತ್ತಿಗಾಗಿ ಹಲವೆಡೆ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದನೆಂದು ಉಲ್ಲೇಖವಿದ್ದು, ಇಂತಹ ಸ್ಥಳಗಳಲ್ಲಿ ಒಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀರಾಮತೀರ್ಥ (Sri Rama Tirtha) ಕ್ಷೇತ್ರ ಸಹ ಒಂದು.

ಹಿಂದೆ ತೇತ್ರಾಯುಗದಲ್ಲಿ ಸೀತಾದೇವಿಯನ್ನು ಬಂಧನದಿಂದ ಬಿಡಿಸಿ ತರಲು ಲಂಕೆಗೆ ತೆರಳಿ ದಾನವ ಚಕ್ರವರ್ತಿ ರಾವಣಾದಿಗಳನ್ನು ಸಂಹಾರಗೊಳಿಸಿದ ನಂತರ ಶ್ರೀರಾಮನು ಲಕ್ಷ್ಮಣ, ಸೀತೆ ಹಾಗೂ ಹನುಮಾದಿಗಳ ಸಹಿತ ಅಯೋಧ್ಯೆಗೆ ಹಿಂತಿರುಗುವಾಗ ಈ ಸ್ಥಳಕ್ಕೆ ಬಂದಿದ್ದರು. ಈ ಸ್ಥಳ ಘೋರ ಅರಣ್ಯವಾದ ಕಾರಣ ಬಾಯಾರಿಕೆ ನೀಗಲು ಹನಿ ನೀರೂ ದೊರೆಯಲಿಲ್ಲ. ಆಗ ಶ್ರೀರಾಮ ಮತ್ತು ಲಕ್ಷ್ಮಣ ಎರಡು ದಿವ್ಯ ಬಾಣಗಳನ್ನು ಪ್ರಯೋಗಿಸಿ ಎರಡು ತೀರ್ಥಗಳನ್ನು ಸೃಷ್ಠಿಸಿದರು. ಇದೇ ಮುಂದೆ ರಾಮತೀರ್ಥವೆಂದು ಖ್ಯಾತಿ ಪಡೆಯಿತು.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ತಲಕಾವೇರಿ ನೀರು ರವಾನೆ

ದೇವತೆಗಳು ಶ್ರೀರಾಮನಿಗೆ ಶಿವಭಕ್ತನಾದ ರಾವಣನ ಹತ್ಯೆಯ ಪಾಪ ಪರಿಹಾರಕ್ಕಾಗಿ ಶಿವಾಲಯ ನಿರ್ಮಿಸುವಂತೆ ಅಪ್ಪಣೆ ಮಾಡಿದರು. ಶ್ರೀರಾಮನು ಬಾಣಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ. ಇದರಿಂದಾಗಿ ಈ ದೇವಾಲಯ ರಾಮೇಶ್ವರ ಎಂದು ಕರೆಯಲ್ಪಡುತ್ತಿದೆ. ಈ ಕ್ಷೇತ್ರದಲ್ಲಿರುವ (ರಾಮ)ತೀರ್ಥದಲ್ಲಿ ಸ್ನಾನಗೈದರೆ ಪಾಪ ಕಳೆಯುತ್ತದೆ. ಮಾನಸಿಕ ರೋಗಗಳು ಪರಿಹಾರಗೊಳ್ಳುತ್ತದೆ. ಚರ್ಮ ರೋಗ ಗುಣವಾಗುತ್ತದೆ, ಭಯ ದೂರವಾಗಿ ಬದುಕಿನಲ್ಲಿ ಹೊಸ ಭರವಸೆ ಮತ್ತು ಆತ್ಮ ಸ್ಥೈರ್ಯ ಮೂಡುತ್ತದೆ ಎಂಬ ಪ್ರತೀತಿ ಇದೆ.

Lord Rama and Seetha visit honnavar after killing ravana Honnavar ramalingeswara temple ramatirtha

ತೀರ್ಥದ ಜಲವನ್ನು ಸಂಗ್ರಹಿಸಿ ಮನೆಗೆ ತಂದು ತುರ್ತು ಸಂದರ್ಭದಲ್ಲಿ ಭಕ್ತರು ತೀರ್ಥವಾಗಿ ಬಳಸುವುದು ರೂಢಿಯಲ್ಲಿದೆ. ಅವತಾರ ಪುರುಷರೆಂದೇ ಖ್ಯಾತರಾದ ಭಗವಾನ ಶ್ರೀಧರ ಸ್ವಾಮಿಗಳು ಈ ಸ್ಥಳದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿ ತಮ್ಮ ತಪಶ್ಶಕ್ತಿಯನ್ನು ವೃದ್ಧಿಸಿಕೊಂಡಿದ್ದರು. ಇದನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತಲ ಹಲವು ಸೀಮೆಗಳಲ್ಲಿ ಸಂಚರಿಸಿ ಹತ್ತಾರು ದೇಗುಲಗಳನ್ನು ಪ್ರತಿಷ್ಠಾಪಿಸಿ, ನೂರಾರು ಭಕ್ತರ ಸಮಸ್ಯೆಗಳನ್ನು ನಿವಾರಿಸಿ ಪರಿವ್ರಾಜಕರಾಗಿ ನೆಲೆಸಿದ್ದರು. ದೇವಾಲಯದ ಹಿಂಭಾಗದಲ್ಲಿ ಶ್ರೀಧರ ಸ್ವಾಮಿಗಳಿಂದ ನಿರ್ಮಿತವಾದ ದತ್ತಾತ್ರೇಯ ಮಂದಿರ ಮತ್ತು ಧ್ಯಾನ ಮಂದಿರಗಳಿದ್ದು ಭಕ್ತರು ವಾರಗಟ್ಟಲೆ ನೆಲೆಸಿ ಯೋಗ, ಧ್ಯಾನ ಮತ್ತು ಪೂಜೆಗಳಲ್ಲಿ ಮನಃಶಾಂತಿ ಗಳಿಸಲು ಸಾಧನೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:27 pm, Sun, 7 January 24

Follow Us
Suraj Mahaveer Utture
Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?