AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!

ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು‌. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಎಂದಿದ್ದಾರೆ

ಎಷ್ಟೋ ಕಡೆ ಒಬ್ಬರೇ ಶಿಕ್ಷಕ-ಐದಾರು ತರ‘ಗತಿ’ಯಿದೆ, ಆದರೆ ಇಲ್ಲಿ ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಡುತ್ತಿದ್ದಾರೆ!
ಒಂದೇ ಕುರ್ಚಿಗೆ ಇಬ್ಬರು ಡಿಡಿಪಿಐ ಕಿತ್ತಾಟ!
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​|

Updated on:Jun 09, 2023 | 11:34 AM

Share

ಎಷ್ಟೋ ಕಡೆ ಒಬ್ಬರೇ ಶಿಕ್ಷಕ. ಒಂದೇ ಕೊಠಡಿ. ಐದು ತರಗತಿಗಳು! ಎಂಬಂತಹ ಪರಿಸ್ಥಿತಿಯಿದೆ. ಆದರೆ ಆಯಕಟ್ಟಿನ ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳು ಕಿತ್ತಾಡಿಕೊಂಡ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ‌ ನಡೆದಿದೆ. ಒಬ್ಬರು‌ ಅಧಿಕಾರಿ ಪ್ರಮೋಷನ್ ಆಗಿ ಡಿಡಿಪಿಐ ದಿಂದ ಜೆಡಿ ಆಗಿ ಹೋಗಬೇಕು, ಇನ್ನೊಬ್ಬರು ಬಿಇಒ ದಿಂದ ಪ್ರಮೋಷನ್ ಆಗಿ ಡಿಡಿಪಿಐ (DDPI) ಆಗಬೇಕು. ಆದರೆ ಇಬ್ಬರಿಗೂ ಸರ್ಕಾರ ಸರಿಯಾಗಿ ದಿನಾಂಕ ತಿಳಿಸದೇ ಪೋಸ್ಟಿಂಗ್ ಸೂಚಿಸಿದ್ದೇ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.’ ವಿಜಯಪುರ (Vijayapura) ನಗರದ ಡಿಡಿಪಿಐ ಕಚೇರಿಯಲ್ಲಿ ಇಂದು ಭಾರೀ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದಕ್ಕೆ ಪ್ರಮುಖ ಕಾರಣ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಜಟಾಪಟಿ ನಡೆಸಿದ್ದು. ಹೌದು ವಿಜಯಪುರ ಡಿಡಿಪಿಐ ಆಗಿದ್ದ ಉಮೇಶ ಶಿರಹಟ್ಟಿ ಮಠ ಅವರಿಗೆ ಸರ್ಕಾರ ಜಾಯಿಂಟ್​ ಡೈರೆಕ್ಟರ್​​ (ಜೆಡಿ) ಆಗಿ ಪ್ರಮೋಷನ್ ನೀಡಿ ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಅದೇ ತರಹ ಕೂಡ್ಲಿಗಿ ಬಿಇಒ ಆಗಿದ್ದ ಯುವರಾಜ ನಾಯಕ ಅವರಿಗೆ ಡಿಡಿಪಿಐ ಆಗಿ ಪ್ರಮೋಷನ್ ಮಾಡಿ ವಿಜಯಪುರ ವರ್ಗಾವಣೆ ಮಾಡಿದ್ದಾರೆ.

ಆದರೆ ಇವರಿಗೆ ಎಂದಿನಿಂದ ಚಾರ್ಜ್​​ ತೆಗೆದುಕೊಳ್ಳಬೇಕು ಎಂದು ದಿನಾಂಕ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಇಂದು ವಿಜಯಪುರ ಡಿಡಿಪಿಐ ಕಚೇರಿಗೆ ಯುವರಾಜ್ ನಾಯಕ ಡಿಡಿಪಿಐ ಆಗಿ ಅಧಿಕಾರ ಪಡೆಯಲು ಬಂದಿದ್ದರು‌. ಆದರೆ ಅದಕ್ಕೂ ಮುಂಚೆಯೆ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ಇನ್ನೂ ಜೂನ್ 30 ರ ವರೆಗೂ ತಾನು ಡಿಡಿಪಿಐ ಆಗಿ ಇಲ್ಲಿ ಇರುವೆ ಜುಲೈ 1 ನೇ ತಾರಿಖಿಗೆ ತಾನು ಜೆಡಿ ಆಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡುವ ಕಾರಣ ಅಲ್ಲಿಯ ವರೆಗೂ ಹುದ್ದೆ ಖಾಲಿ ಇಲ್ಲ‌, ಅಲ್ಲಿಯವರೆಗೂ ನಾನೇ ವಿಜಯಪುರ ಡಿಡಿಪಿಐ ಎಂದು ಹೇಳಿದ್ದೇ ಜಟಾಪಟಿಗೆ ಕಾರಣವಾಗಿದೆ.

Also Read: ಇಡೀ ಶಾಲೆಗೆ ಒಬ್ಬ ಶಿಕ್ಷಕ-ಒಂದೇ ಕೊಠಡಿ-ಐದು ತರಗತಿ- 9 ಮಕ್ಕಳು! ಯಾರಿಗೆ ಹೇಗೆ ಯಾವಾಗ ಪಾಠ ಮಾಡಬಹುದು ಊಹೆ ನಿಮಗೇ ಬಿಟ್ಟಿದ್ದು!

ಸದ್ಯ ಬೆಂಗಳೂರಿನಲ್ಲಿ ಜೆಡಿ ಆಗಿರುವ ಅಧಿಕಾರಿ ಜೂನ್ 30 ಕ್ಕೆ ವಯೋ ನಿವೃತ್ತಿ ಹೊಂದಲಿದ್ದಾರೆ. ಆ ಬಳಿಕ ಆ ಸ್ಥಾನ ಖಾಲಿಯಾಗಲಿದೆ. ಬಳಿಕ ಜುಲೈ 1 ರಂದು ಉಮೇಶ ಶಿರಹಟ್ಟಿ ಮಠ ಅವರು ಜೆಡಿಯಾಗಿ ಅಧಿಕಾರಿ ಸ್ವೀಕಾರ ಮಾಡುವರು. ಅಲ್ಲಿಯವರೆಗೆ ನಾನೇ ವಿಜಯಪುರ ಡಿಡಿಪಿಐ ಎಂಬುದು ಉಮೇಶ ಶಿರಹಟ್ಟಿ ಮಠ ಅವರ ಮಾತು, ಇನ್ನೊಂದೆಡೆ ಯುವರಾಜ ನಾಯಕ ತಮ್ಮ‌ ಬೆಂಬಲಿಗರೊಂದಿಗೆ ಇಂದು ಡಿಡಿಪಿಐ ಆಗಿ ಅಧಿಕಾರ ಸ್ವೀಕಾರ ಮಾಡಲು ಬಂದಿದ್ದರು. ಅವರಿಗೆ ಅಧಿಕಾರ ಸಿಗದ ಕಾರಣ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ಕಾರ ಸೂಚಿಸಿದಂತೆ ನಾನು ಇಂದು ಅಧಿಕಾರ ಸ್ವೀಕರಿಸಲು ಬಂದಿದ್ದೆ, ಈ ವಿಚಾರವಾಗಿ ನಾನು ಸರ್ಕಾರಕ್ಕೆ‌ ಮನವಿ ಮಾಡುವೆ ಎಂದು‌ ಹೇಳಿ ಯುವರಾಜ‌ ನಾಯಕ ತಮ್ಮ‌ ಬೆಂಬಲಿಗರೊಂದಿಗೆ ವಾಪಸ್ ತೆರಳಿದರು.

ಇನ್ನು ಸರ್ಕಾರ ತನ್ನ ಆದೇಶದಲ್ಲಿ ಉಮೇಶ ಶಿರಹಟ್ಟಿಮಠ ಅವರ ಮುಂಬಡ್ತಿಯಿಂದ ತೆರವಾದ ಸ್ಥಾನ‌ ಅಂತಾ ಸ್ಪಷ್ಟವಾಗಿ‌ ನಮೂದು ಮಾಡಿದೆ. ಆದರೆ ಯುವರಾಜ ನಾಯಕ ಅವರಿಗೆ ಮಾತ್ರ ಕುರ್ಚಿಯನ್ನು ಬೇಗ ಹಿಡಿದುಕೊಳ್ಳಲು ವಿಜಯಪುರಕ್ಕೆ ಆಗಮಿಸಿ‌ ಈಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹೋಗಿದ್ದಾರೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ ಕೆಲಹೊತ್ತು ವಿಜಯಪುರ ಡಿಡಿಪಿಐ ಕಚೇರಿಯಲ್ಲಿ ಗೊಂದಲ ಸೃಷ್ಟಿ ಮಾಡಿತ್ತು.

ವಿಜಯಪುರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Fri, 9 June 23

ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ