AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ದೇವರಹಿಪ್ಪರಗಿ ಪಟ್ಟಣದಲ್ಲಿ ಬಂಪರ್ ಡ್ರಾ ಹೆಸರಿನಲ್ಲಿ ಮೋಸ

ಬಂಪರ್ ಡ್ರಾ ಹೆಸರಿನಲ್ಲಿ ಮನಿಯಾರ್ ಎಂಟರ್ ಪ್ರೈಸಿಸ್ ವಂಚನೆ ಎಸಗಿದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಇಂದು ಡ್ರಾ ನಡೆಸುವುದಾಗಿ ಹೇಳಿದ ಹಿನ್ನೆಲೆ ಸಾವಿರಾರು ಜನರು ಆಗಮಿಸಿದ್ದರು. ಆದರೆ, ಆಯೋಜಕರು ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿದ್ದು, ಜನರು ಆತಂಕದಲ್ಲಿದ್ದಾರೆ.

ವಿಜಯಪುರ: ದೇವರಹಿಪ್ಪರಗಿ ಪಟ್ಟಣದಲ್ಲಿ ಬಂಪರ್ ಡ್ರಾ ಹೆಸರಿನಲ್ಲಿ ಮೋಸ
ಬಂಬರ್ ಡ್ರಾ ಹೆಸರಿನಲ್ಲಿ ವಂಚನೆ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Aug 15, 2023 | 5:27 PM

Share

ವಿಜಯಪುರ, ಆಗಸ್ಟ್ 15: ಬಂಪರ್ ಡ್ರಾ ಹೆಸರಿನಲ್ಲಿ ಜನರಿಗೆ ವಂಚಿಸಿದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಒಂದು ಬಂಪರ್ ಡ್ರಾ (Bumper draw) ಲಾಟರಿ ಟಿಕೆಟ್​ಗೆ 600 ರೂಪಾಯಿಯಂತೆ ಹಣ ಪಡೆದಿರುವ ಬಂಪರ್ ಡ್ರಾ ಆಯೋಜಕರು, ಇಂದು ಡ್ರಾ ಮಾಡುವಾಗಿ ಹೇಳಿದ್ದರು. ಅದರಂತೆ ಸಾವಿರಾರು ಜನರು ಜಮಾಯಿಸಿದ್ದರೂ, ಆಯೋಜನರು ಜನರ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.

ಬಂಪರ್ ಡ್ರಾ ಹೆಸರಿನಲ್ಲಿ ಮನಿಯಾರ ಎಂಟರ್ ಪ್ರೈಸಿಸ್ ಒಟ್ಟು 100 ಬಹುಮಾನಗಳನ್ನು ನೀಡುವುದಾಗಿ ಹೇಳಿ ಜನರಿಂದ 600 ರೂಪಾಯಿಯಂತೆ ಹಣ ಪಡೆದಿದ್ದಾರೆ. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದಾರೆ.

ಡ್ರಾದಲ್ಲಿ, ಒಂದು ಎರ್ಟಿಗಾ ಕಾರ್, ಒಂದು ಸಿಎನ್​ಜಿ ಆಟೋ, ಒಂದು ಟಂಟಂ, ಒಂದು ರಾಯಕಲ್ ಎನ್ ಫೀಲ್ಡ್ ಬೈಕ್, 2 ಹೋಂಡಾ ಶೈನ್ ಬೈಕ್, 2 ಸ್ಲ್ಪೇಂಡರ್ ಬೈಕ್, 10 ಹೆಚ್​​ಎಫ್ ಡೀಲಕ್ಸ್, 2 ಟಿವಿಎಸ್ ಎಕ್ಸೆಲ್ , 2 ಟಿವಿಉಎಸ್ ಬೈಕ್, 2 ಎಲೆಕ್ಟ್ರಿಕ್ ಬೈಕ್, 20 ಪ್ರಿಜ್, 20 ಎಲ್ಇಡಿ ಟಿವಿ, 20 ಕೂಲರ್, 10 ಗ್ರಾಂ 3 ಗೋಲ್ಡ್ ಬಿಸ್ಕಟ್, ವಿವೋ ಮೊಬೈಲ್ 10, 3 ಸೈಕಲ್ ಬಹುಮಾಮನ ನೀಡುವುದಾಗಿ ಭರವಸೆ ನೀಡಿದೆ.

ಬಹುಮಾನಗಳ ಆಸೆ ತೋರಿಸಿದ ಆಯೋಜಕರಾದ ಶಹನವಾಜ್, ಇಸ್ಮಾಯಿಲ್, ಅಬ್ದುಲ್ ರಜಾಕ್, ಗೌಸ್ ಮೋದೀನ್ ಹಾಗೂ ಮೊಹಮ್ಮದ ಮುಸ್ತಫಾ, ದೇವರಹಿಪ್ಪರಗಿ ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 6000 ಕ್ಕೂ ಆಧಿಕ ಲಾಟರಿ ಟಿಕೆಟ್ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರ: ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ; ಬಸನಗೌಡ ಪಾಟೀಲ್​ ಯತ್ನಾಳ್​ ಭವಿಷ್ಯ

ಇಂದು ಲಾಟರಿ ಡ್ರಾ ಮಾಡಲಾಗುತ್ತದೆ ಎಂದು ಬಂಪರ್ ಡ್ರಾ ಆಯೋಜಕರು ಜನರಿಗೆ ಹೇಳಿದ್ದಾರೆ. ಅದರಂತೆ ಟಿಕೆಟ್ ಖರೀದಿಸಿದ ಸಾವಿರಾರು ಜನರು ದೇವರಹಿಪ್ಪರಗಿ ಪಟ್ಟಣಕ್ಕೆ ಬಂದಿದ್ದರೂ ಮನಿಯಾರ್ ಎಂಟರ್ ಪ್ರೈಸಿಸ್​​ನವರು ಯಾವುದೇ ಲಾಟರಿ ಡ್ರಾ ಮಾಡಿಲ್ಲ.

ಇದರಿಂದ ಆತಂಕಕ್ಕೊಳಗಾದ ಜನರು, ಆಯೋಜಕರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಂಪರ್ ಡ್ರಾ ಹೆಸರಿನಲ್ಲಿ ಮೋಸವಾಗಿದೆ ಎಂದು ದೂರು ನೀಡಿದರೂ ದೇವರಹಿಪ್ಪರಗಿ ಪೊಲೀಸ್ ಠಾಣೆಯ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲಾ ಎಂದು ಜನರು ಆರೋಪಿಸುತ್ತಿದ್ದಾರೆ.

ಬಂಪರ್ ಡ್ರಾ ಹೆಸರಿನ ಲಾಟರಿ ಮಾರಾಟ ಮಾಡಿ ಇದೀಗಾ ಬಹುಮಾನ ನೀಡದೇ ಮೋಸ ಮಾಡಿದ್ದಾರೆಂದು ಆರೋಪಿಸುತ್ತಿರು ಜನರು ಪೊಲೀಸ್ ಠಾಣೆ ಬಳಿ ಜಮಾಯಿಸಿ, ಮನಿಯಾರ್ ಎಂಟರ್ ಪ್ರೈಸಿಸ್ ಮಾಲೀಕರ ಹಾಗೂ ಇತರರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಠಾಣೆಯ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ