AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೇ ಇಲಾಖೆಯಲ್ಲಿ ಉದ್ಯೋಗದ ಆಮಿಷ: 15 ಯುವಕರಿಗೆ ಒಟ್ಟು 1.50 ಕೋಟಿ ಮಕ್ಮಲ್​​ ಟೋಪಿ

ವಿಜಯಪುರದಲ್ಲಿ ರೈಲ್ವೇ ಉದ್ಯೋಗದ ಆಮಿಷವೊಡ್ಡಿ 15 ನಿರುದ್ಯೋಗಿ ಯುವಕರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಟಿಸಿ, ಸಿ ಮತ್ತು ಡಿ ದರ್ಜೆ ಹಾಗೂ ಸ್ಟೇಷನ್ ಮಾಸ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ, ಆರೋಪಿಗಳು ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದರು. ನಕಲಿ ತರಬೇತಿಯನ್ನೂ ಏರ್ಪಡಿಸಿದ್ದಾರೆ. ಐದು ವರ್ಷಗಳ ಹಿಂದೆಯೇ ಹಣ ನೀಡಿದ್ದ ಯುವಕರು ಈಗ ನ್ಯಾಯಕ್ಕಾಗಿ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

ರೈಲ್ವೇ ಇಲಾಖೆಯಲ್ಲಿ ಉದ್ಯೋಗದ ಆಮಿಷ: 15 ಯುವಕರಿಗೆ ಒಟ್ಟು 1.50 ಕೋಟಿ ಮಕ್ಮಲ್​​ ಟೋಪಿ
ಸಾಂದರ್ಭಿಕ ಚಿತ್ರ
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Dec 03, 2025 | 3:37 PM

Share

ವಿಜಯಪುರ, ಡಿಸೆಂಬರ್​​ 03: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿದೆ. ಇದಕ್ಕೆ ಸರಿ ಹೊಂದುವ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ರೆಲ್ವೇ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆಂದು ಜಿಲ್ಲೆಯ ಸುಮಾರು 15 ಜನ ಯುವಕರಿಗೆ ಒಟ್ಟು 1.50 ಕೋಟಿ ರೂ. ಮಕ್ಮಲ್​​ ಟೋಪಿ ಹಾಕಿರೋದು ಬೆಳಕಿಗೆ ಬಂದಿದೆ.

ರೆಲ್ವೇ ಇಲಾಖೆಯಲ್ಲಿ ಟಿಸಿ, ಸಿ ದರ್ಜೆ, ಡಿ ದರ್ಜೆ ನೌಕರಿಗಳನ್ನು ಕೊಡಿಸೋದಾಗಿ ಯುವಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಮಹಾದೇವ ರಾಠೋಡ್ ಹಾಗೂ ಹನುಮಂತಗೌಡ ಪಾಟೀಲ್ ಎಂಬುವವರು ಇದೇ ಗ್ರಾಮದ ಯುವಕರು ಸೇರಿ ಹಲವರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಕಳೆದ 2021ರಲ್ಲಿ ಆರೋಪಿಗಳು ರೆಲ್ವೇ ಇಲಾಖೆಯ ಸ್ಟೇಷನ್ ಮಾಸ್ಟರ್, ಸಿ ಹಾಗೂ ಡಿ ದರ್ಜೆ ನೌಕರಿಗೆ ನೇರ ನೇಮಕ ಮಾಡಿಸಿಕೊಡುತ್ತೇವೆಂದು ಯುವಕರನ್ನು ನಂಬಿಸಿದ್ದಾರೆ. ಇವರನ್ನು ನಂಬಿದ ಉದ್ಯೋಗಾಕಾಂಕ್ಷಿಗಳು ಸಾಲಶೂಲ ಮಾಡಿ ಇವರ ಕೈಗೆ ಒಟ್ಟು 1.50 ಕೋಟಿ ಹಣ ಸುರಿದಿದ್ದಾರೆ. ನಂತರ ನಕಲಿ ಇಮೇಲ್ ಖಾತೆಯ ಮೂಲಕ ರೆಲ್ವೇ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಆದೇಶವನ್ನು ಕಳುಹಿಸಿ ಆರೋಪಿಗಳು ಯಾಮಾರಿಸಿದ್ಧಾರೆ.ಕೆಲವರನ್ನು ಮುಂಬೈ ರೆಲ್ವೇ ನಿಲ್ದಾಣದಲ್ಲಿ ತರಬೇತಿಗೆ ಕರೆಯಿಸಿ ನಕಲಿ ಅಧಿಕಾರಿಗಳ ಮೂಲಕ 20 ದಿನಗಳ ಕಾಲ ತರಬೇತಿಯನ್ನೂ ಕೊಡಿಸಿದ್ದಾರೆ. ಆಮೇಲೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ ಹೋಗಿದ್ದಾರೆ. ಈ ವೇಳೆಯೇ ತಾವು ಮೋಸ ಹೋಗಿದ್ದು ಯುವಕರ ಅರಿವಿಗೆ ಬಂದಿದೆ.

ಇದನ್ನೂ ಓದಿ: ತಳ್ಳುವ ಗಾಡಿ ತಂದು ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಗ್ಯಾಂಗ್​!

ಕಳೆದ 2021ರಲ್ಲಿಯೇ ಉದ್ಯೋಗ ಬಯಸಿದ್ದ ಯುವಕರು ಹಣ ನೀಡಿ ಯಾಮಾರಿದ್ದು, ದುಡ್ಡೂ ಇಲ್ಲ ಇತ್ತ ಕೆಲಸವೂ ಸಿಗದೆ ಕಂಗಾಲಾಗಿದ್ದಾರೆ. ಇದೇ ವಿಚಾರವಾಗಿ ಆರೋಪಿ ಮಹಾದೇವ ರಾಠೋಡ್​​ಗೆ ಪ್ರಶ್ನೆ ಮಾಡಿದಾಗಲೂ ನಾನು ಮೋಸ ಮಾಡಿಲ್ಲ ಎಂದೇ ವಾದಿಸಿರೋ ಆತ, ಯುವಕರನ್ನು ದೆಹಲಿ, ವಾರಣಾಸಿ, ಹೈದರಾಬಾದ್​​ ಎಂದು ಓಡಾಡಿಸಿದ್ದಾನೆ. ರೈಲ್ವೇ ಇಲಾಖೆಯ ಡಿ ದರ್ಜೆ ಕೆಲಸಕ್ಕೆ 12 ಲಕ್ಷ ರೂ., ಸಿ ದರ್ಜೆಗೆ 18ರಿಂದ 20 ಲಕ್ಷ ರೂ. ಮತ್ತು ಸ್ಟೇಷನ್ ಮಾಸ್ಟರ್ ಪೋಸ್ಟ್​​ಗೆ 25 ಲಕ್ಷ ಹಣ ನೀಡಿದ್ದ ಯುವಕರೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಹಣ ನೀಡಿ ಐದು ವರ್ಷಗಳಾದರೂ ಕೆಲಸ ಸಿಗದ ಹಿನ್ನಲೆ ಯುವಕರೀಗ ದೂರು ದಾಖಲಿಸಲು ಮುಂದಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು