ವಿಜಯಪುರ: ಮಹಿಳೆ ಜೊತೆ ಬಂದಿದ್ದ ಯುವಕ ಹೊಂಡಕ್ಕೆ ಹಾರಿ ಸಾವಿಗೆ ಶರಣು, ಮಹಿಳೆ ಎಸ್ಕೇಪ್

| Updated By: ಆಯೇಷಾ ಬಾನು

Updated on: Aug 31, 2023 | 2:14 PM

25 ವರ್ಷ ವಯಸ್ಸಿನ ಯುವಕನೋರ್ವ ಇಂದು ಬೆಳಿಗ್ಗೆ(ಆ.31) ಮಹಿಳೆಯೊಂದಿಗೆ ಬಂದು ಹೊಂಡದಲ್ಲಿ ಬಿದ್ದಿದ್ದಾನೆ. ಶರ್ಟ್ ತೆಗೆದು ಹೊಂಡಕ್ಕೆ ಹಾರಲು ಇಬ್ಬರೂ ಮುಂದಾಗಿದ್ದರು. ಮೊದಲು ಯುವಕ ಹೊಂಡದಲ್ಲಿ ಹಾರಿದ್ದಾನೆ. ಯುವಕ ಹೊಂಡದಲ್ಲಿ ಹಾರುತ್ತಿದ್ದಂತೆ ಮಹಿಳೆ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಜಯಪುರ: ಮಹಿಳೆ ಜೊತೆ ಬಂದಿದ್ದ ಯುವಕ ಹೊಂಡಕ್ಕೆ ಹಾರಿ ಸಾವಿಗೆ ಶರಣು, ಮಹಿಳೆ ಎಸ್ಕೇಪ್
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ, ಆ.31: ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮಹಿಳೆಯ ಜೊತೆ ಬಂದಿದ್ದ ಯುವಕ ಪುರಾತನ ಹೊಂಡಕ್ಕೆ ಬಿದ್ದು ಸಾವಿಗೆ ಶರಣಾದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಗಗನ್ ಮಹಲ್ ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಬಳಿ ಇರುವ ಪುರಾತನ ಹೊಂಡಕ್ಕೆ ಬಿದ್ದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಯುವಕ ಹೊಂಡಕ್ಕೆ ಹಾರುತ್ತಿದ್ದಂತೆ ಜೊತೆಗಿದ್ದ ಮಹಿಳೆ ಎಸ್ಕೇಪ್ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಶವವನ್ನು ಮೇಲೆ ಎತ್ತಿ ಗೋಲಗುಮ್ಮಟ ಪೊಲೀಸರ ವಶಕ್ಕೆ ಒಪ್ಪಿಸಿದ್ದು ಪೊಲೀಸರು ಮೃತ ಯುವಕನ ಗುರುತು ಪತ್ತೆಗಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ.

25 ವರ್ಷ ವಯಸ್ಸಿನ ಯುವಕನೋರ್ವ ಇಂದು ಬೆಳಿಗ್ಗೆ(ಆ.31) ಮಹಿಳೆಯೊಂದಿಗೆ ಬಂದು ಹೊಂಡದಲ್ಲಿ ಬಿದ್ದಿದ್ದಾನೆ. ಶರ್ಟ್ ತೆಗೆದು ಹೊಂಡಕ್ಕೆ ಹಾರಲು ಇಬ್ಬರೂ ಮುಂದಾಗಿದ್ದರು. ಮೊದಲು ಯುವಕ ಹೊಂಡದಲ್ಲಿ ಹಾರಿದ್ದಾನೆ. ಯುವಕ ಹೊಂಡದಲ್ಲಿ ಹಾರುತ್ತಿದ್ದಂತೆ ಮಹಿಳೆ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಶವಕ್ಕಾಗಿ ಶೋಧ ನಡೆಸಿ ಮೂರು ಗಂಟೆಗಳ ನಂತರ ಶವ ಮೇಲೆತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ 25 ವರ್ಷ ವಯಸ್ಸಿನವನಾಗಿದ್ದು ಆತನ ಹೆಸರು, ವಿಳಾಸ ಪತ್ತೆಯಾಗಿಲ್ಲ. ಶವವನ್ನು ಗೋಲಗುಮ್ಮಟ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಮಂಗಳೂರಿನಲ್ಲಿ ಪ್ರಸಿದ್ಧ ಕಬಡ್ಡಿ ಆಟಗಾರ ಆತ್ಮಹತ್ಯೆ, ಬೆಂಗಳೂರಿನಲ್ಲಿ ಉದ್ಯಮಿ ಅನುಮಾನಾಸ್ಪದ ಸಾವು

ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಿ ಓರ್ವ ಮೀನುಗಾರ ಸಾವು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಬಂದರು ಸಮೀಪದ ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಿ ಓರ್ವ ಮೀನುಗಾರ ಮೃತಪಟ್ಟ ಘಟನೆ ನಡೆದಿದೆ. ಪ್ರಜ್ವಲ್ ಮಾಬ್ಲ ಖಾರ್ವಿ(19) ಮೃತ ಮೀನುಗಾರ. ಇನ್ನು ರಾಜು ಶೇಷಗಿರಿ ಎಂಬ ಮೀನುಗಾರನನ್ನು ರಕ್ಷಿಸಲಾಗಿದೆ. ಹೊನ್ನಾವರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ