AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ, ಶಿವಮೊಗ್ಗದಲ್ಲಿ ದೇವಿ ಜಾತ್ರೆ: ಬಬಲೇಶ್ವರದಲ್ಲಿ ದೇವರಿಗೆ ಮದ್ಯ ಸಮರ್ಪಣೆ

ಕಣ್ಣು ಹಾಯಿಸಿದ ಕಡೆಯಲ್ಲಾ ಜನಸಾಗರ. ಜನಸಾಗರದ ನಡುವೆ ದೇವಿಯ ಅದ್ಧೂರಿ ಮೆರವಣಿಗೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ವೈಭವ. ಮತ್ತೊಂದ್ಕಡೆ ಅಲಂಕಾರಗೊಂಡು ಕಂಗೊಳಿಸುತ್ತಿರುವ ಮಾರಿಕಾಂಬೆ. ತಾಯಿ ದರ್ಶನ ಪಡೆಯುತ್ತಾ, ಭಕ್ತಿಯಿಂದ ಹರಕೆ ತೀರಿಸುತ್ತಿರುವ ಭಕ್ತಸಾಗರ. ಇದೆಲ್ಲದರ ನಡುವೆ ಗಮನ ಸೆಳೆಯುತ್ತಿರುವ ದೇವರಿಗೆ ಮದ್ಯ ನೈವೈದ್ಯ ಮಾಡುತ್ತಿರುವ ದೃಶ್ಯ. ಹಾವೇರಿ: ಅಂದಹಾಗೇ ಹಾವೇರಿ ನಗರದಲ್ಲಿ 115 ವರ್ಷಗಳಿಂದ ಗ್ರಾಮದೇವಿಯ ಜಾತ್ರೆ ಆಗಿರ್ಲಿಲ್ಲ. ಆದ್ರೆ ಈ ವರ್ಷ ನಗರದಲ್ಲಿ ಗ್ರಾಮದೇವಿ ಜಾತ್ರೆಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ನಗರದ ಗ್ರಾಮದೇವಿ ಆಗಿರೋ […]

ಹಾವೇರಿ, ಶಿವಮೊಗ್ಗದಲ್ಲಿ ದೇವಿ ಜಾತ್ರೆ: ಬಬಲೇಶ್ವರದಲ್ಲಿ ದೇವರಿಗೆ ಮದ್ಯ ಸಮರ್ಪಣೆ
ಸಾಧು ಶ್ರೀನಾಥ್​
|

Updated on: Feb 28, 2020 | 8:14 PM

Share

ಕಣ್ಣು ಹಾಯಿಸಿದ ಕಡೆಯಲ್ಲಾ ಜನಸಾಗರ. ಜನಸಾಗರದ ನಡುವೆ ದೇವಿಯ ಅದ್ಧೂರಿ ಮೆರವಣಿಗೆ. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ವೈಭವ. ಮತ್ತೊಂದ್ಕಡೆ ಅಲಂಕಾರಗೊಂಡು ಕಂಗೊಳಿಸುತ್ತಿರುವ ಮಾರಿಕಾಂಬೆ. ತಾಯಿ ದರ್ಶನ ಪಡೆಯುತ್ತಾ, ಭಕ್ತಿಯಿಂದ ಹರಕೆ ತೀರಿಸುತ್ತಿರುವ ಭಕ್ತಸಾಗರ. ಇದೆಲ್ಲದರ ನಡುವೆ ಗಮನ ಸೆಳೆಯುತ್ತಿರುವ ದೇವರಿಗೆ ಮದ್ಯ ನೈವೈದ್ಯ ಮಾಡುತ್ತಿರುವ ದೃಶ್ಯ.

ಹಾವೇರಿ: ಅಂದಹಾಗೇ ಹಾವೇರಿ ನಗರದಲ್ಲಿ 115 ವರ್ಷಗಳಿಂದ ಗ್ರಾಮದೇವಿಯ ಜಾತ್ರೆ ಆಗಿರ್ಲಿಲ್ಲ. ಆದ್ರೆ ಈ ವರ್ಷ ನಗರದಲ್ಲಿ ಗ್ರಾಮದೇವಿ ಜಾತ್ರೆಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಯ್ತು. ನಗರದ ಗ್ರಾಮದೇವಿ ಆಗಿರೋ ದ್ಯಾಮವ್ವದೇವಿ ದೇವಸ್ಥಾನದಿಂದ ನಗರದಲ್ಲಿ ಸಂಭ್ರಮ ಸಡಗರದಿಂದ ಮೆರವಣಿಗೆ ನಡೆಸಲಾಯ್ತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಹೆಜ್ಜೆ ಹಾಕಿದ್ರೆ, ತಮಟೆ, ಡೊಳ್ಳು ಕುಣಿತ, ಬೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮತ್ತಷ್ಟು ರಂಗು ನೀಡಿದ್ವು.

ಶಿವಮೊಗ್ಗ: ಇದರಂತೆ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಕೂಡ ಸಡಗರ ಸಂಭ್ರಮದಿಂದ ನಡೆಯುತ್ತಿದೆ. 5 ದಿನಗಳ ಕಾಲದ ಜಾತ್ರಾ ಮಹೋತ್ಸವದಲ್ಲಿ, ನಿನ್ನೆ ಭಕ್ತರು ತಾಯಿಗೆ ವಿವಿಧ ಹರಿಕೆ ತಿರಿಸಿದ್ರು. ಜನ ಸಾಗರ ನಡುವೆ ಮಕ್ಕಳು ಮಹಿಳೆಯರು ಪುರುಷರು ಯುವಕ ಯುವತಿಯರು ದೇವಿಗೆ ಹರಿಕೆಯನ್ನು ತೀರಿಸಿದ್ರು.. ಕೆಲವರು ಮೈಗೆ ಬೇವಿನ ಸೊಪ್ಪು ಸುತ್ತಿಕೊಂಡು ದೇವಿಗೆ ಪ್ರದಕ್ಷಿಣೆ ಹಾಕಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ, ಮತ್ತೆ ಕೆಲ ಭಕ್ತರು ದೇವಿಗೆ ಕೋಳಿಯನ್ನು ಹರಿಕೆಯಾಗಿ ನೀಡಿದ್ರು.

ವಿಜಯಪುರ: ಹಾವೇರಿ ಮತ್ತು ಶಿವಮೊಗ್ಗದಲ್ಲಿ ದೇವಿಯ ಜಾತ್ರೆ ನಡೆದ್ರೆ, ವಿಜಯಪುರದಲ್ಲಿ ನಡೆದು ಜಾತ್ರೆ ಸಾಕಷ್ಟು ವಿಭಿನ್ನತೆಯಿಂದ ಕೂಡಿತ್ತು. ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಸದಾಶಿವ ಮುತ್ಯಾರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಬಬಲಾದಿಯ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ದೇವರಿಗೆ ಭಕ್ತರು ಮದ್ಯವನ್ನು ಸಮರ್ಪಣೆ ಮಾಡುತ್ತಾರೆ. ಮಠದಲ್ಲಿರುವ ಸಾಲು ಸಾಲು ದೇವರ ಮೂರ್ತಿಗಳಿಗೆ ಮದ್ಯ ಹಾಕಿ ಭಕ್ತಿ ಮೆರೆದ್ರು.

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​