AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಪ್ಪರಿ ಹಳ್ಳ ಸೇತುವೆಯಲ್ಲೀಗ ನಿತ್ಯ ನರಕ, ಜಿಲ್ಲಾಡಳಿತಕ್ಕೋ ದಿವ್ಯ ನಿರ್ಲಕ್ಷ್ಯ

ಧಾರವಾಡ: ಎಲ್ಲೋ ಮಳೆಯಾಗಿದ್ದಕ್ಕೆ ಮತ್ತಿನ್ನೆಲ್ಲೋ ಪ್ರವಾಹ. ಕನಸು ಮನಸ್ಸಲ್ಲೂ ಊಹಿಸದ ಜಲಾಘಾತ. ಕಳೆದ ಆಗಸ್ಟ್​ನಲ್ಲಿ ವರುಣ ನೀಡಿದ್ದ ಏಟಿಗೆ ಇಂದಿಗೂ ಸಾವಿರಾರು ಮಂದಿ ಕಣ್ಣೀರಿಡ್ತಿದ್ದಾರೆ. ಜತೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದ್ರೆ ಅಧಿಕಾರಿಗಳು ಮಾತ್ರ ಆ ಕ್ಷಣಕ್ಕೆ ತ್ಯಾಪೆ ಹಚ್ಚೂ ಕೆಲಸ ಮಾಡಿ ಸೈಲೆಂಟ್ ಆಗಿದ್ದಾರೆ. ದೊಡ್ಡ ದೊಡ್ಡ ವೆಹಿಕಲ್ಲೇ ಬರ್ಲಿ. ಸಣ್ಣ ಪುಟ್ಟ ಗಾಡಿಗಳೇ ಆಗ್ಲಿ. ಈ ರೋಡಿಗಿಳಿದ್ಮೇಲೆ ಬ್ಯಾಲೆನ್ಸ್ ಮಾಡ್ಬೇಕು. ಸ್ಪೀಡ್ ಗೀಡ್ ಎಲ್ಲಾ ಬಿಟ್ಟಾಕ್ಬೇಕು. ಡ್ಯಾನ್ಸ್ ಮಾಡ್ಕೊಂಡೇ ರಸ್ತೆ ದಾಟ್ಬೇಕು. ಸ್ವಲ್ಪ […]

ತುಪ್ಪರಿ ಹಳ್ಳ ಸೇತುವೆಯಲ್ಲೀಗ ನಿತ್ಯ ನರಕ,  ಜಿಲ್ಲಾಡಳಿತಕ್ಕೋ ದಿವ್ಯ ನಿರ್ಲಕ್ಷ್ಯ
ಸಾಧು ಶ್ರೀನಾಥ್​
|

Updated on:Dec 23, 2019 | 10:09 AM

Share

ಧಾರವಾಡ: ಎಲ್ಲೋ ಮಳೆಯಾಗಿದ್ದಕ್ಕೆ ಮತ್ತಿನ್ನೆಲ್ಲೋ ಪ್ರವಾಹ. ಕನಸು ಮನಸ್ಸಲ್ಲೂ ಊಹಿಸದ ಜಲಾಘಾತ. ಕಳೆದ ಆಗಸ್ಟ್​ನಲ್ಲಿ ವರುಣ ನೀಡಿದ್ದ ಏಟಿಗೆ ಇಂದಿಗೂ ಸಾವಿರಾರು ಮಂದಿ ಕಣ್ಣೀರಿಡ್ತಿದ್ದಾರೆ. ಜತೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದ್ರೆ ಅಧಿಕಾರಿಗಳು ಮಾತ್ರ ಆ ಕ್ಷಣಕ್ಕೆ ತ್ಯಾಪೆ ಹಚ್ಚೂ ಕೆಲಸ ಮಾಡಿ ಸೈಲೆಂಟ್ ಆಗಿದ್ದಾರೆ.

ದೊಡ್ಡ ದೊಡ್ಡ ವೆಹಿಕಲ್ಲೇ ಬರ್ಲಿ. ಸಣ್ಣ ಪುಟ್ಟ ಗಾಡಿಗಳೇ ಆಗ್ಲಿ. ಈ ರೋಡಿಗಿಳಿದ್ಮೇಲೆ ಬ್ಯಾಲೆನ್ಸ್ ಮಾಡ್ಬೇಕು. ಸ್ಪೀಡ್ ಗೀಡ್ ಎಲ್ಲಾ ಬಿಟ್ಟಾಕ್ಬೇಕು. ಡ್ಯಾನ್ಸ್ ಮಾಡ್ಕೊಂಡೇ ರಸ್ತೆ ದಾಟ್ಬೇಕು. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಈ ಲಾರಿಗಳ ಸರ್ಕಸ್ ಅಂತೂ ಇನ್ನೂ ಡೇಂಜರ್.

ತುಂಬಿ ಬಂದ ತುಪ್ಪರಿ ಹಳ್ಳದಲ್ಲಿ ಕೊಚ್ಚಿಹೋಯ್ತು ಸೇತುವೆ: ಪ್ರಳಯಾಂತಕ ಪ್ರವಾಹ ಮಾಡಿದ ಎಡವಟ್ಟು ಅಷ್ಟಿಷ್ಟಲ್ಲ. ನೆರೆ ಬಂದು ಮೂರು ತಿಂಗಳು ಕಳೆದ್ರೂ ಅದ್ರಿಂದ ಆದ ಅನಾಹುತಗಳು ಮಾತ್ರ ಕರಿನೆರಳಂತೆ ಕಾಡ್ತಿವೆ. ಅದ್ರಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯ ಈ ಸೇತುವೆಯೇ ಸಾಕ್ಷಿ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ತುಪ್ಪರಿ ಹಳ್ಳ ಉಕ್ಕಿ ಬಂದಿದ್ರಿಂದ ಸೇತುವೆ ಕೊಚ್ಚಿ ಹೋಗಿತ್ತು.

ಇದ್ರಿಂದಾಗಿ ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಕಡಿತವಾಗಿತ್ತು. ಬೆಳಗಾವಿ ಜಿಲ್ಲೆಗೆ ತೆರಳಲು ಬೇರೆ ದಾರಿಯಿದ್ರೂ ಈ ದಾರಿ ಮೂಲಕ ಬಾಗಲಕೋಟೆ ಜಿಲ್ಲೆ ಹಾಗೂ ಅಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಬಹುದು. ಹೀಗಾಗಿ ಪ್ರತಿನಿತ್ಯ ಇಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ಕೊಚ್ಚಿಹೋದ ಸೇತುವೆಯನ್ನ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು ಬಿಟ್ರೆ ಸಂಪೂರ್ಣ ದುರಸ್ತಿ ಮಾಡಿಲ್ಲ. ಇದ್ರಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರು ಪರದಾಡುವಂತಾಗಿದೆ.

ಇನ್ನು ಪ್ರವಾಹದಲ್ಲಿ ಸೇತುವೆಯ ಎರಡೂ ಭಾಗ ಕಿತ್ತು ಹೋಗಿತ್ತು. ಅಂದಿನಿಂದ ಅನೇಕ ದಿನಗಳವರೆಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು.‌ ಇದೇ ಕಾರಣಕ್ಕೆ ಜಿಲ್ಲಾಡಳಿತ ಸೇತುವೆ ಪಕ್ಕದಲ್ಲಿಯೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿತ್ತು. ಅದ್ರೆ ಮಣ್ಣಿನಿಂದ ಮಾಡಿದ್ದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಮಣ್ಣಿನ ರಸ್ತೆ ಆಗಿರೋದ್ರಿಂದ ಗುಂಡಿಗಳು ಬಿದ್ದಿದ್ದು ವಾಹನಗಳು ಓಡಾಡೋದೇ ಕಷ್ಟವಾಗಿದೆ. ಅಲ್ದೇ ಮಣ್ಣಿನ ರೋಡ್ ಬೇರೆ ಆಗಿರೋದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಧೂಳು ಕೂಡ ಏಳುತ್ತಿದೆ.

Published On - 6:58 am, Mon, 23 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ