AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಪ್ಪರಿ ಹಳ್ಳ ಸೇತುವೆಯಲ್ಲೀಗ ನಿತ್ಯ ನರಕ, ಜಿಲ್ಲಾಡಳಿತಕ್ಕೋ ದಿವ್ಯ ನಿರ್ಲಕ್ಷ್ಯ

ಧಾರವಾಡ: ಎಲ್ಲೋ ಮಳೆಯಾಗಿದ್ದಕ್ಕೆ ಮತ್ತಿನ್ನೆಲ್ಲೋ ಪ್ರವಾಹ. ಕನಸು ಮನಸ್ಸಲ್ಲೂ ಊಹಿಸದ ಜಲಾಘಾತ. ಕಳೆದ ಆಗಸ್ಟ್​ನಲ್ಲಿ ವರುಣ ನೀಡಿದ್ದ ಏಟಿಗೆ ಇಂದಿಗೂ ಸಾವಿರಾರು ಮಂದಿ ಕಣ್ಣೀರಿಡ್ತಿದ್ದಾರೆ. ಜತೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದ್ರೆ ಅಧಿಕಾರಿಗಳು ಮಾತ್ರ ಆ ಕ್ಷಣಕ್ಕೆ ತ್ಯಾಪೆ ಹಚ್ಚೂ ಕೆಲಸ ಮಾಡಿ ಸೈಲೆಂಟ್ ಆಗಿದ್ದಾರೆ. ದೊಡ್ಡ ದೊಡ್ಡ ವೆಹಿಕಲ್ಲೇ ಬರ್ಲಿ. ಸಣ್ಣ ಪುಟ್ಟ ಗಾಡಿಗಳೇ ಆಗ್ಲಿ. ಈ ರೋಡಿಗಿಳಿದ್ಮೇಲೆ ಬ್ಯಾಲೆನ್ಸ್ ಮಾಡ್ಬೇಕು. ಸ್ಪೀಡ್ ಗೀಡ್ ಎಲ್ಲಾ ಬಿಟ್ಟಾಕ್ಬೇಕು. ಡ್ಯಾನ್ಸ್ ಮಾಡ್ಕೊಂಡೇ ರಸ್ತೆ ದಾಟ್ಬೇಕು. ಸ್ವಲ್ಪ […]

ತುಪ್ಪರಿ ಹಳ್ಳ ಸೇತುವೆಯಲ್ಲೀಗ ನಿತ್ಯ ನರಕ,  ಜಿಲ್ಲಾಡಳಿತಕ್ಕೋ ದಿವ್ಯ ನಿರ್ಲಕ್ಷ್ಯ
ಸಾಧು ಶ್ರೀನಾಥ್​
|

Updated on:Dec 23, 2019 | 10:09 AM

Share

ಧಾರವಾಡ: ಎಲ್ಲೋ ಮಳೆಯಾಗಿದ್ದಕ್ಕೆ ಮತ್ತಿನ್ನೆಲ್ಲೋ ಪ್ರವಾಹ. ಕನಸು ಮನಸ್ಸಲ್ಲೂ ಊಹಿಸದ ಜಲಾಘಾತ. ಕಳೆದ ಆಗಸ್ಟ್​ನಲ್ಲಿ ವರುಣ ನೀಡಿದ್ದ ಏಟಿಗೆ ಇಂದಿಗೂ ಸಾವಿರಾರು ಮಂದಿ ಕಣ್ಣೀರಿಡ್ತಿದ್ದಾರೆ. ಜತೆಗೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದ್ರೆ ಅಧಿಕಾರಿಗಳು ಮಾತ್ರ ಆ ಕ್ಷಣಕ್ಕೆ ತ್ಯಾಪೆ ಹಚ್ಚೂ ಕೆಲಸ ಮಾಡಿ ಸೈಲೆಂಟ್ ಆಗಿದ್ದಾರೆ.

ದೊಡ್ಡ ದೊಡ್ಡ ವೆಹಿಕಲ್ಲೇ ಬರ್ಲಿ. ಸಣ್ಣ ಪುಟ್ಟ ಗಾಡಿಗಳೇ ಆಗ್ಲಿ. ಈ ರೋಡಿಗಿಳಿದ್ಮೇಲೆ ಬ್ಯಾಲೆನ್ಸ್ ಮಾಡ್ಬೇಕು. ಸ್ಪೀಡ್ ಗೀಡ್ ಎಲ್ಲಾ ಬಿಟ್ಟಾಕ್ಬೇಕು. ಡ್ಯಾನ್ಸ್ ಮಾಡ್ಕೊಂಡೇ ರಸ್ತೆ ದಾಟ್ಬೇಕು. ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಈ ಲಾರಿಗಳ ಸರ್ಕಸ್ ಅಂತೂ ಇನ್ನೂ ಡೇಂಜರ್.

ತುಂಬಿ ಬಂದ ತುಪ್ಪರಿ ಹಳ್ಳದಲ್ಲಿ ಕೊಚ್ಚಿಹೋಯ್ತು ಸೇತುವೆ: ಪ್ರಳಯಾಂತಕ ಪ್ರವಾಹ ಮಾಡಿದ ಎಡವಟ್ಟು ಅಷ್ಟಿಷ್ಟಲ್ಲ. ನೆರೆ ಬಂದು ಮೂರು ತಿಂಗಳು ಕಳೆದ್ರೂ ಅದ್ರಿಂದ ಆದ ಅನಾಹುತಗಳು ಮಾತ್ರ ಕರಿನೆರಳಂತೆ ಕಾಡ್ತಿವೆ. ಅದ್ರಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯ ಈ ಸೇತುವೆಯೇ ಸಾಕ್ಷಿ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ತುಪ್ಪರಿ ಹಳ್ಳ ಉಕ್ಕಿ ಬಂದಿದ್ರಿಂದ ಸೇತುವೆ ಕೊಚ್ಚಿ ಹೋಗಿತ್ತು.

ಇದ್ರಿಂದಾಗಿ ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಕಡಿತವಾಗಿತ್ತು. ಬೆಳಗಾವಿ ಜಿಲ್ಲೆಗೆ ತೆರಳಲು ಬೇರೆ ದಾರಿಯಿದ್ರೂ ಈ ದಾರಿ ಮೂಲಕ ಬಾಗಲಕೋಟೆ ಜಿಲ್ಲೆ ಹಾಗೂ ಅಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಬಹುದು. ಹೀಗಾಗಿ ಪ್ರತಿನಿತ್ಯ ಇಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ಕೊಚ್ಚಿಹೋದ ಸೇತುವೆಯನ್ನ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು ಬಿಟ್ರೆ ಸಂಪೂರ್ಣ ದುರಸ್ತಿ ಮಾಡಿಲ್ಲ. ಇದ್ರಿಂದಾಗಿ ವಾಹನ ಸವಾರರು ಹಾಗೂ ಸ್ಥಳೀಯರು ಪರದಾಡುವಂತಾಗಿದೆ.

ಇನ್ನು ಪ್ರವಾಹದಲ್ಲಿ ಸೇತುವೆಯ ಎರಡೂ ಭಾಗ ಕಿತ್ತು ಹೋಗಿತ್ತು. ಅಂದಿನಿಂದ ಅನೇಕ ದಿನಗಳವರೆಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು.‌ ಇದೇ ಕಾರಣಕ್ಕೆ ಜಿಲ್ಲಾಡಳಿತ ಸೇತುವೆ ಪಕ್ಕದಲ್ಲಿಯೇ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಿತ್ತು. ಅದ್ರೆ ಮಣ್ಣಿನಿಂದ ಮಾಡಿದ್ದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಮಣ್ಣಿನ ರಸ್ತೆ ಆಗಿರೋದ್ರಿಂದ ಗುಂಡಿಗಳು ಬಿದ್ದಿದ್ದು ವಾಹನಗಳು ಓಡಾಡೋದೇ ಕಷ್ಟವಾಗಿದೆ. ಅಲ್ದೇ ಮಣ್ಣಿನ ರೋಡ್ ಬೇರೆ ಆಗಿರೋದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಧೂಳು ಕೂಡ ಏಳುತ್ತಿದೆ.

Published On - 6:58 am, Mon, 23 December 19

ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
ಬೆಂಗಳೂರಿನಲ್ಲಿ ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!