AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಕ್ಕೆಯಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ನಿರ್ಮಾಣವಾಗಿದೆ ಕಾಂಪೌಂಡ್

ಮಂಗಳೂರು: ಎಲ್ಲಿ ನೋಡಿದ್ರೂ.. ಯಾರ ಕೈಯಲ್ಲಿ ನೋಡಿದ್ರೂ ಪ್ಲಾಸ್ಟಿಕ್​ ಬಾಟಲ್​​ಗಳದ್ದೇ ಹಾವಳಿ.. ಕಂಡ ಕಂಡಲ್ಲಿ ಕಾಣೋದು ಪ್ಲಾಸ್ಟಿಕ್ ಬಾಟಲಿಗಳೇ ಕಣ್ಣಿಗೆ ಬೀಳ್ತವೆ.. ಆದ್ರೆ.. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ಲಾಸ್ಟಿಕ್​​ ಬಾಟಲ್​​​ನಲ್ಲೇ ಕಾಂಪೌಂಡ್​ ಅರಳಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಂದ್ರೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸೋ ಸುಕ್ಷೇತ್ರ. ಅದ್ರಲ್ಲೂ ವಿಶೇಷ ದಿನಗಳಲ್ಲಂತೂ ಭಕ್ತರ ದಂಡೇ ಹರಿದು ಬರುತ್ತೆ. ಈ ಪುಣ್ಯಕ್ಷೇತ್ರಕ್ಕೆ ಬರೋ ಪ್ರವಾಸಿಗರು ಬರಿಗೈಲಿ ಏನ್ ಬರ್ತಾರಾ.. ಪ್ಲಾಸ್ಟಿಕ್ ಬಾಟಲ್​ಗಳನ್ನ ತಂದು […]

ಕುಕ್ಕೆಯಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ನಿರ್ಮಾಣವಾಗಿದೆ ಕಾಂಪೌಂಡ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 12, 2019 | 8:33 AM

Share

ಮಂಗಳೂರು: ಎಲ್ಲಿ ನೋಡಿದ್ರೂ.. ಯಾರ ಕೈಯಲ್ಲಿ ನೋಡಿದ್ರೂ ಪ್ಲಾಸ್ಟಿಕ್​ ಬಾಟಲ್​​ಗಳದ್ದೇ ಹಾವಳಿ.. ಕಂಡ ಕಂಡಲ್ಲಿ ಕಾಣೋದು ಪ್ಲಾಸ್ಟಿಕ್ ಬಾಟಲಿಗಳೇ ಕಣ್ಣಿಗೆ ಬೀಳ್ತವೆ.. ಆದ್ರೆ.. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ಲಾಸ್ಟಿಕ್​​ ಬಾಟಲ್​​​ನಲ್ಲೇ ಕಾಂಪೌಂಡ್​ ಅರಳಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಂದ್ರೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸೋ ಸುಕ್ಷೇತ್ರ. ಅದ್ರಲ್ಲೂ ವಿಶೇಷ ದಿನಗಳಲ್ಲಂತೂ ಭಕ್ತರ ದಂಡೇ ಹರಿದು ಬರುತ್ತೆ. ಈ ಪುಣ್ಯಕ್ಷೇತ್ರಕ್ಕೆ ಬರೋ ಪ್ರವಾಸಿಗರು ಬರಿಗೈಲಿ ಏನ್ ಬರ್ತಾರಾ.. ಪ್ಲಾಸ್ಟಿಕ್ ಬಾಟಲ್​ಗಳನ್ನ ತಂದು ಎಲ್ಲೆಂದರಲ್ಲಿ ಬಿಸಾಡಿ ಹೋಗ್ತಿದ್ರು. ಇದೀಗ ದೇಶಾದ್ಯಂತ ಪ್ಲಾಸ್ಟಿಕ್‌ ನಿಷೇಧ ಚರ್ಚೆಯಲ್ಲಿರೋವಾಗ್ಲೇ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​​ನವರು ಪ್ಲಾಸ್ಟಿಕ್ ಬಾಟಲ್​ಗಳ ಪುನರ್‌ ಬಳಕೆ ಮಾಡಿದ್ದಾರೆ. ದೇಗುಲದ ಬಳಿಯೇ ತ್ಯಾಜ್ಯ ಘಟಕ ಸ್ಥಾಪಿಸಿ ವೇಸ್ಟ್​ ಆಗಿರೋ ಪ್ಲಾಸ್ಟಿಕ್ ಬಾಟಲ್​ಗಳಿಂದಲೇ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ.

ಇನ್ನು, ಸಂಗ್ರಹವಾದ ಒಂದು ಲೀಟರ್‌ನ ಪ್ಲಾಸ್ಟಿಕ್‌ ಬಾಟಲಿಗಳಿಗೆ ಮರಳು, ಸಣ್ಣ ಜಲ್ಲಿ ತುಂಬಲಾಗುತ್ತದೆ. ಸಿಮೆಂಟ್‌ ಮಿಶ್ರಣ ಉಪಯೋಗಿಸಿ ಇಟ್ಟಿಗೆಯಂತೆಯೇ ಜೋಡಿಸಿ ಗೋಡೆ ನಿರ್ಮಿಸಲಾಗುತ್ತಿದೆ. ಇಂಜಾಡಿ ಬಳಿ ಇರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್​ನ ತ್ಯಾಜ್ಯ ಘಟಕದಲ್ಲಿ 4 ಅಡಿ ಎತ್ತರ ಮತ್ತು 20 ಮೀ. ಉದ್ದದ ಗೋಡೆಗೆ 2,500 ಬಾಟಲ್​ಗಳನ್ನು ಬಳಸಲಾಗಿದೆ.

ಪ್ರತೀ 20 ಮೀ. ಬಳಿಕ ಒಂದರಂತೆ ಕಲ್ಲಿನ ಆಧಾರಸ್ತಂಭ ನಿರ್ಮಿಸಿದ್ದಾರೆ. ನುರಿತ ಮೇಸ್ತ್ರಿ ಸಹಾಯದಿಂದ ಘನತ್ಯಾಜ್ಯ ಘಟಕದ ಸಿಬ್ಬಂದಿಯೇ ಕಾಮಗಾರಿ ಮಾಡಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿದೇಶದಲ್ಲಿ ಪ್ಲಾಸ್ಟಿಕ್​ ಬಾಟಲ್​ಗಳನ್ನ ಮರುಬಳಕೆ ಮಾಡಿ ಹೊಸ ಕಾರ್ಯ ಮಾಡಿರೋದು ನೋಡ್ತಿದ್ವಿ. ಆದ್ರೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗ ಮಾಡಲಾಗಿದೆ. ಎಸೆಯೋ ಬಾಟಲ್​ಗಳಿಂದ ಹೀಗೂ ಮಾಡ್ಬೋದು ಅನ್ನೋದನ್ನ ಇಲ್ಲಿಯವರು ತೋರಿಸಿ ಕೊಟ್ಟಿದ್ದಾರೆ.

Published On - 8:32 am, Thu, 12 December 19

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ