AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ನೀರಿಗಾಗಿ ಹಾಹಾಕಾರ

ಬಾಗಲಕೋಟೆ: ಅನ್ನದಾತರಿಗೆ ಮಾದರಿಯಾಗಬೇಕಿದ್ದ ತೋಟಗಾರಿಗೆ ಇಲಾಖೆಯಲ್ಲಿ ನೀರಿಗೆ ಕೊರತೆ ಎದುರಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಇದೇ ಕಥೆಯಾಗಿದೆ. ರಣಬಿಸಿಲು ನೆತ್ತಿ ಸುಡ್ತಿದೆ. ಭೂಮಿ ಶಾಖಕ್ಕೆ ನೀರು ಪಾತಾಳ ಸೇರಿದೆ. ಗಿಡ, ಬಳ್ಳಿಗಳು ಜೀವ ಜಲಕ್ಕಾಗಿ ಬಾಯಿ ಬಿಡ್ತಿವೆ. ಎಲ್ಲೆಲ್ಲೂ ಒಣಗಿರೋ ಭೂಮಿ. ನೀರಿಲ್ಲದೆ ಬೋರ್​ವೆಲ್​ಗಳು ಖಾಲಿ ಖಾಲಿಯಾಗಿವೆ. ತೋಟಗಾರಿಕೆ ವಿವಿಯಲ್ಲೇ ಜೀವಜಲಕ್ಕೆ ಪರದಾಟ..! ಎಲ್ಲಿ ನೋಡಿದ್ರೂ ಬರಡು ಭೂಮಿಯಂತಾಗಿದೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ. ರಾಜ್ಯದ ಪ್ರತಿಷ್ಟಿತ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಗೆ ಪಡೆದಿರೋ ಈ […]

ಬಾಗಲಕೋಟೆ ತೋಟಗಾರಿಕೆ  ವಿವಿಯಲ್ಲಿ ನೀರಿಗಾಗಿ  ಹಾಹಾಕಾರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 01, 2019 | 11:53 AM

Share

ಬಾಗಲಕೋಟೆ: ಅನ್ನದಾತರಿಗೆ ಮಾದರಿಯಾಗಬೇಕಿದ್ದ ತೋಟಗಾರಿಗೆ ಇಲಾಖೆಯಲ್ಲಿ ನೀರಿಗೆ ಕೊರತೆ ಎದುರಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಇದೇ ಕಥೆಯಾಗಿದೆ. ರಣಬಿಸಿಲು ನೆತ್ತಿ ಸುಡ್ತಿದೆ. ಭೂಮಿ ಶಾಖಕ್ಕೆ ನೀರು ಪಾತಾಳ ಸೇರಿದೆ. ಗಿಡ, ಬಳ್ಳಿಗಳು ಜೀವ ಜಲಕ್ಕಾಗಿ ಬಾಯಿ ಬಿಡ್ತಿವೆ. ಎಲ್ಲೆಲ್ಲೂ ಒಣಗಿರೋ ಭೂಮಿ. ನೀರಿಲ್ಲದೆ ಬೋರ್​ವೆಲ್​ಗಳು ಖಾಲಿ ಖಾಲಿಯಾಗಿವೆ.

ತೋಟಗಾರಿಕೆ ವಿವಿಯಲ್ಲೇ ಜೀವಜಲಕ್ಕೆ ಪರದಾಟ..! ಎಲ್ಲಿ ನೋಡಿದ್ರೂ ಬರಡು ಭೂಮಿಯಂತಾಗಿದೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ. ರಾಜ್ಯದ ಪ್ರತಿಷ್ಟಿತ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಗೆ ಪಡೆದಿರೋ ಈ ವಿವಿಗೆ ಜಲಕ್ಷಾಮ ಎದುರಾಗಿದೆ. ಭಾರಿ ಮಳೆಗೆ, ಪ್ರವಾಹದಿಂದ ಕೃಷ್ಣಾ, ಮಲಪ್ರಭಾ, ಘಟಪ್ರಭಾ 3 ನದಿಗಳು ತುಂಬಿ ತುಳುಕ್ತಿವೆ.

ಆದ್ರೆ, ತೋಟಗಾರಿಗೆ ವಿವಿಯಲ್ಲಿ ಹನಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಇದ್ರಿಂದ ಬೆಳೆಗಳು ಒಣಗಿ, ಸೊರಗಿ ಹೋಗ್ತಿವೆ. ವಿವಿ ಎದುರಿನ ಮೈದಾನದಲ್ಲಿರೋ ಹೋತೋಟ ಬಿಟ್ರೆ ಉಳಿದ ಬೆಳೆಗಳಿಗೆ ನೀರೇ ಇಲ್ಲ. ಹೀಗಾಗಿ ವಿಧ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ ಹಾಗೂ ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲು ವಿವಿಯವರು ಪರದಾಡ್ತಿದ್ದಾರೆ.

ತೋಟಗಾರಿಕೆ ವಿವಿಯಲ್ಲಿ ಫಲಪುಷ್ಪ ಸಸಿಗಳನ್ನು ಬೆಳೆಸೋದಕ್ಕಾಗಿಯೇ ಒಟ್ಟು 15 ಬೋರ್ ವೆಲ್​ಗಳನ್ನ ಕೊರೆಸಲಾಗಿತ್ತು. ಆದರೆ 15 ಬೋರ್​​ಗಳ ಪೈಕಿ 13 ಬೋರ್​​ವೆಲ್​ಗಳಲ್ಲಿ ನೀರೇ ಬರ್ತಿಲ್ಲ. ಕೇವಲ ಎರಡು ಕೊಳವೆ ಬಾವಿಗಳಲ್ಲಿ ಅಳಿದುಳಿದ ನೀರು ಬರ್ತಿದ್ದು, ಅದ್ರಲ್ಲೇ ಗಿಡಗಳಿಗೆ ನೀರು ಹಾಯಿಸ್ತಿದ್ದಾರೆ.

ವಿವಿಯಲ್ಲಿ ನೀರಿನ ಕೊರತೆ ನೀಗಿಸೋಕೆ ಆಲಮಟ್ಟಿ ಹಿನ್ನೀರಿನಿಂದ ಪೈಪ್​ಲೈನ್ ಮೂಲಕ ನೀರು ಹರಿಸೋ ಬೇಡಿಕೆ ಇಡಲಾಗಿತ್ತು. ಅಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಹೆಚ್​ಡಿಕೆ ವಿವಿಗೆ ಭೇಟಿ ನೀಡಿದ್ದ ವೇಳೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸೋ ಭರವಸೆ ನೀಡಿದ್ರು. ಆದ್ರೆ, ಇದೂವರೆಗೂ ಕೊಟ್ಟ ಭರವಸೆ. ಬೇಡಿಕೆ ಇನ್ನೂ ಈಡೇರಿಲ್ಲ.

Published On - 11:51 am, Sun, 1 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ