AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳಿನ ರಾಶಿ ಮೇಲೆ ಜಿಗಿದು ಭಕ್ತಿಯ ಪರಾಕಾಷ್ಠೆ ಮೆರೆದ ಜನ

ಕೊಪ್ಪಳ: ನಮ್ಮ ಕಾಲಿಗೆ ಅಪ್ಪಿ ತಪ್ಪಿ ಒಂದು ಮುಳ್ಳು ಚುಚ್ಚಿದ್ರೆ ಸಾಕು ಜೀವ ಹೋದಂಗೆ ಅನ್ಸುತ್ತೆ. ಮುಳ್ಳು ಹೊರಗೆ ತೆಗೆಯೋವರ್ಗೂ ಕಾಲು ಮುಂದಕ್ಕೆ ಇಡೋಕ್ ಆಗಲ್ಲ. ಅಂಥಾದ್ರಲ್ಲಿ ಇಲ್ಲಿ ಮುಳ್ಳಿನ ರಾಶಿ ಮೇಲೆಯೇ ದೊಬ್ಬನೆ ಬೀಳ್ತಾರೆ. ಮೈತುಂಬಾ ಮುಳ್ಳು ಚುಚ್ಚುತ್ತಿದ್ರೂ ಏನೂ ಆಗಿಲ್ಲದಂತೆ ಮಲಗಿರ್ತಾರೆ. ಮೈಮೇಲೆ ಚೂರು ಅರಿವಿಲ್ಲ. ಮುಳ್ಳಿನ ರಾಶಿ ಮೇಲೆ ಧುಮುಕಿದ್ರೂ ನೋವು ಗೊತ್ತಾಗ್ತಿಲ್ಲ. ಈಜಲು ಹಾರಿದವ್ರಂತೆ ಬಿಲ್ಡಿಂಗ್ ಮೇಲಿಂದ ದೊಬ್ಬನೆ ಬೀಳ್ತಾರೆ. ಬರೀ ಮೈಯಲ್ಲೇ ಮುಳ್ಳಿನ ಮೇಲೆ ಹಾಯಾಗಿ ಮಲಗ್ತಾರೆ. ಕಾರ್ತಿಕ ಮಾಸದ […]

ಮುಳ್ಳಿನ ರಾಶಿ ಮೇಲೆ ಜಿಗಿದು ಭಕ್ತಿಯ ಪರಾಕಾಷ್ಠೆ ಮೆರೆದ ಜನ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 01, 2019 | 11:01 AM

Share

ಕೊಪ್ಪಳ: ನಮ್ಮ ಕಾಲಿಗೆ ಅಪ್ಪಿ ತಪ್ಪಿ ಒಂದು ಮುಳ್ಳು ಚುಚ್ಚಿದ್ರೆ ಸಾಕು ಜೀವ ಹೋದಂಗೆ ಅನ್ಸುತ್ತೆ. ಮುಳ್ಳು ಹೊರಗೆ ತೆಗೆಯೋವರ್ಗೂ ಕಾಲು ಮುಂದಕ್ಕೆ ಇಡೋಕ್ ಆಗಲ್ಲ. ಅಂಥಾದ್ರಲ್ಲಿ ಇಲ್ಲಿ ಮುಳ್ಳಿನ ರಾಶಿ ಮೇಲೆಯೇ ದೊಬ್ಬನೆ ಬೀಳ್ತಾರೆ. ಮೈತುಂಬಾ ಮುಳ್ಳು ಚುಚ್ಚುತ್ತಿದ್ರೂ ಏನೂ ಆಗಿಲ್ಲದಂತೆ ಮಲಗಿರ್ತಾರೆ.

ಮೈಮೇಲೆ ಚೂರು ಅರಿವಿಲ್ಲ. ಮುಳ್ಳಿನ ರಾಶಿ ಮೇಲೆ ಧುಮುಕಿದ್ರೂ ನೋವು ಗೊತ್ತಾಗ್ತಿಲ್ಲ. ಈಜಲು ಹಾರಿದವ್ರಂತೆ ಬಿಲ್ಡಿಂಗ್ ಮೇಲಿಂದ ದೊಬ್ಬನೆ ಬೀಳ್ತಾರೆ. ಬರೀ ಮೈಯಲ್ಲೇ ಮುಳ್ಳಿನ ಮೇಲೆ ಹಾಯಾಗಿ ಮಲಗ್ತಾರೆ.

ಕಾರ್ತಿಕ ಮಾಸದ ವೇಳೆ ಮುಳ್ಳು ಹಾರುವ ಆಚರಣೆ:  ಲೇಬಗೇರಿ ಗ್ರಾಮದಲ್ಲಿ ನಡೆದ ಆಂಜನೇಯನ ಕಾರ್ತಿಕೋತ್ಸವದ ಮುಳ್ಳಿನ ಜಾತ್ರೆ. ಪ್ರತಿವರ್ಷ ಕಾರ್ತಿಕಮಾಸದ ವೇಳೆ ಮುಳ್ಳು ಹಾರುವ ಆಚರಣೆ ನಡೆಯುತ್ತೆ. ಅನಾದಿಕಾಲದಿಂದಲೂ ಈ ಸಂಪ್ರದಾಯವನ್ನು ಆಚರಣೆ ಮಾಡ್ತಿದ್ದು, ಇಂದಿಗೂ ಈ ಸಂಪ್ರದಾಯ ಮುಂದುವರಿದಿದೆ. ಮುಳ್ಳಿನ ಮೇಲೆ ಜಿಗಿಯೋದ್ರಿಂದ ಗ್ರಾಮದಲ್ಲಿ ಯಾರಿಗೂ ಏನೂ ಆಗಲ್ಲ ಅನ್ನೋದು ಇವ್ರ ನಂಬಿಕೆ.

ಮುಳ್ಳಿನ ಮೇಲೆ ಜಿಗಿದ್ರೂ ಏನು ಆಗಲ್ಲ:  ಆಂಜನೇಯನ ಕಾರ್ತಿಕೋತ್ಸವದ ದಿನ ಬೆಳಗ್ಗೆ ಗ್ರಾಮದವರು ಕಾಡಿಗೆ ತೆರಳಿ ಮುಳ್ಳಿನ ಗಿಡಗಳನ್ನ ತರ್ತಾರೆ. ನಂತರ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕಿ ಅದರ ಮೇಲೆ ಗ್ರಾಮದ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವ್ರೂ ಕೂಡ ಹಾರುತ್ತಾರೆ. ಹೀಗೆ ಹಾರಿದವರ ಮೈ ಮೇಲೆ ಗಾಯಗಳಾಗಿದ್ರೂ ಸಹ ಅವರಿಗೆ ಏನೂ ಆಗುವುದಿಲ್ಲವಂತೆ. ರಾತ್ರಿ ಮನೆಗೆ ಹೋಗಿ ಕರಿ ಕಂಬಳಿಯ ಮೇಲೆ ಮಲಗಿಕೊಂಡರೆ ಮುಳ್ಳುಗಳೆಲ್ಲ ಹೊರಗೆ ಬರುತ್ತವಂತೆ. ಹೆಣ್ಣು ಮಕ್ಕಳು ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಖುಷಿಯಿಂದ ಭಾಗಿಯಾಗ್ತಾರೆ.

ಹಳ್ಳಿಗಳಲ್ಲಿ ಇಂದಿಗೂ ಸಹ ಅನೇಕ ಆಚರಣೆಗಳು ನಡೆಯುತ್ತವೆ. ಅದ್ರಲ್ಲಿ ಈ ಆಚರಣೆ ಸ್ವಲ್ಪ ಭಿನ್ನ ಅನ್ಸಿದ್ರೂ ಇವ್ರಿಗೆ ನಂಬಿಕೆಯ ಪ್ರಶ್ನೆ. ಹೀಗಾಗಿ ಖುಷಿಯಿಂದಲೇ ಇಂದಿಗೂ ಸಹ ಆಚರಣೆ ಮಾಡ್ತಾ ಮನೆ ಮಕ್ಕಳೆಲ್ಲಾ ಭಾಗಿಯಾಗ್ತಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ