ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ; ಭಕ್ತರಿಂದ ಹರಹರ ಮಹಾದೇವ ಘೋಷಣೆ
70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ಧೇಶ್ವರ ಮಹಾದೇವನ ದೇಗುಲವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿದೆ. ಇಂದು 7 ದಶಕಗಳ ಬಳಿಕ ಈ ದೇವಾಲಯದ ಬೀಗ ತೆರೆದು ಅವಶೇಷಗಳನ್ನು ತೆಗೆದು ದೇವಾಲಯದ ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.
ವಾರಾಣಸಿ: 70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ದೇಶ್ವರ ಮಹಾದೇವನ ದೇವಸ್ಥಾನವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿತ್ತು. ಇಂದು ಈ ದೇವಾಲಯದ ಬೀಗ ತೆರೆದು ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ ಆಡಳಿತ ಮಂಡಳಿ ಮಕರ ಸಂಕ್ರಾಂತಿಯ ನಂತರ ದೇವಾಲಯವನ್ನು ಶುದ್ಧೀಕರಿಸಿ ಪ್ರಾಣ ಪ್ರತಿಷ್ಠೆ ಮಾಡಿ ನಿತ್ಯ ಪೂಜೆ ಆರಂಭಿಸಲಾಗುವುದು ಎಂದು ಘೋಷಿಸಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

