ಬ್ಯಾಟ್​ ಕಂಪೆನಿ ಕೋಟಿ ಕೋಟಿ ಡೀಲ್ ಕುದುರಿಸಿದ ಬಾಬರ್ ಆಝಂ

Babar Azam: ಬಾಬರ್ ಆಝಂ ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್​ನಲ್ಲಿದ್ದರು. ಆದರೀಗ ಬ್ಯಾಟ್ ಬದಲಾಗುತ್ತಿದ್ದಂತೆ ಅದೃಷ್ಟ ಕೂಡ ಬದಲಾಗಿದೆ. ಸೌತ್ ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಬಾಬರ್ ಆಝಂ ಮಿಂಚಿದ್ದಾರೆ. ಈ ಅರ್ಧಶತಕಗಳೊಂದಿಗೆ ಫಾರ್ಮ್​ಗೆ ಮರಳಿರುವ ಬಾಬರ್ ಮುಂಬರುವ ದಿನಗಳಲ್ಲಿ ಕೋಟಿ ಎಣಿಸಲಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 09, 2025 | 2:03 PM

ಪಾಕಿಸ್ತಾನ್ ತಂಡದ ಮಾಜಿ ನಾಯಕ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊಸ ಬ್ಯಾಟ್​ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯಿದ್ದ ಗ್ರೇ ನಿಕಲ್ಸ್ ಕಂಪೆನಿ ಜತೆಗಿನ ಒಪ್ಪಂದ ಕೊನೆಗೊಳಿಸಿರುವ ಬಾಬರ್ ಇದೀಗ ಪಾಕಿಸ್ತಾನದ ಸಿಎ ಸ್ಪೋರ್ಟ್ಸ್ ಕಂಪೆನಿ ಜೊತೆ ಹೊಸ ಡೀಲ್ ಕುದುರಿಸಿಕೊಂಡಿದ್ದಾರೆ.

ಪಾಕಿಸ್ತಾನ್ ತಂಡದ ಮಾಜಿ ನಾಯಕ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊಸ ಬ್ಯಾಟ್​ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯಿದ್ದ ಗ್ರೇ ನಿಕಲ್ಸ್ ಕಂಪೆನಿ ಜತೆಗಿನ ಒಪ್ಪಂದ ಕೊನೆಗೊಳಿಸಿರುವ ಬಾಬರ್ ಇದೀಗ ಪಾಕಿಸ್ತಾನದ ಸಿಎ ಸ್ಪೋರ್ಟ್ಸ್ ಕಂಪೆನಿ ಜೊತೆ ಹೊಸ ಡೀಲ್ ಕುದುರಿಸಿಕೊಂಡಿದ್ದಾರೆ.

1 / 5
ಪಾಕ್ ಮಾಧ್ಯಮ ವರದಿಗಳ ಪ್ರಕಾರ, ಸಿಎ ಸ್ಪೋರ್ಟ್ಸ್‌ನಿಂದ ಬಾಬರ್ ಪ್ರತಿ ವರ್ಷ 7 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಅವರು ಇಂಗ್ಲೆಂಡ್​ನ ಗ್ರೇ ನಿಕೋಲ್ಸ್ ಜೊತೆ ಸುಮಾರು 5 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದರು.

ಪಾಕ್ ಮಾಧ್ಯಮ ವರದಿಗಳ ಪ್ರಕಾರ, ಸಿಎ ಸ್ಪೋರ್ಟ್ಸ್‌ನಿಂದ ಬಾಬರ್ ಪ್ರತಿ ವರ್ಷ 7 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಹಿಂದೆ ಅವರು ಇಂಗ್ಲೆಂಡ್​ನ ಗ್ರೇ ನಿಕೋಲ್ಸ್ ಜೊತೆ ಸುಮಾರು 5 ಕೋಟಿ ಪಾಕಿಸ್ತಾನಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದರು.

2 / 5
ಇದೀಗ ತಮ್ಮ ಬ್ಯಾಟ್ ಮೇಲೆ ಸಿಎ ಸ್ಪೋರ್ಟ್ಸ್ ಸ್ಟಿಕ್ಕರ್ ಹಾಕಿಕೊಳ್ಳಲು ಬಾಬರ್ ಆಝಂ 7 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅರ್ಧಶತಕ ಮತ್ತು ಶತಕಗಳಿಗೂ ಹೆಚ್ಚುವರಿ ಮೊತ್ತ ಪಡೆಯಲಿದ್ದಾರೆ. ಅಂದರೆ ಬಾಬರ್ ಅರ್ಧಶತಕ ಮತ್ತು ಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿ ತೋರಿಸಿದರೆ ಅದಕ್ಕೆ ಬೋನಸ್ ಮೊತ್ತ ನೀಡಲಿದ್ದಾರೆ.

ಇದೀಗ ತಮ್ಮ ಬ್ಯಾಟ್ ಮೇಲೆ ಸಿಎ ಸ್ಪೋರ್ಟ್ಸ್ ಸ್ಟಿಕ್ಕರ್ ಹಾಕಿಕೊಳ್ಳಲು ಬಾಬರ್ ಆಝಂ 7 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅರ್ಧಶತಕ ಮತ್ತು ಶತಕಗಳಿಗೂ ಹೆಚ್ಚುವರಿ ಮೊತ್ತ ಪಡೆಯಲಿದ್ದಾರೆ. ಅಂದರೆ ಬಾಬರ್ ಅರ್ಧಶತಕ ಮತ್ತು ಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿ ತೋರಿಸಿದರೆ ಅದಕ್ಕೆ ಬೋನಸ್ ಮೊತ್ತ ನೀಡಲಿದ್ದಾರೆ.

3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಡೀಲ್ ಬೆನ್ನಲ್ಲೇ ಬಾಬರ್ ಆಝಂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದಾರೆ. 2022 ರಿಂದ ಟೆಸ್ಟ್​ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸದಿದ್ದ ಬಾಬರ್, ಸಿಎ ಬ್ಯಾಟ್​ನೊಂದಿಗೆ ಕಣಕ್ಕಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ 58 ಮತ್ತು 81 ರನ್ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಡೀಲ್ ಬೆನ್ನಲ್ಲೇ ಬಾಬರ್ ಆಝಂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದಾರೆ. 2022 ರಿಂದ ಟೆಸ್ಟ್​ನಲ್ಲಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಸದಿದ್ದ ಬಾಬರ್, ಸಿಎ ಬ್ಯಾಟ್​ನೊಂದಿಗೆ ಕಣಕ್ಕಿಳಿಯುತ್ತಿದ್ದಂತೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ 58 ಮತ್ತು 81 ರನ್ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದ್ದಾರೆ.

4 / 5
ಇನ್ನು ಬಾಬರ್ ಆಝಂ ಜೊತೆಗಿನ ಒಪ್ಪಂದ ಬಳಿಕ ಸಿಎ ಬ್ಯಾಟ್ ಮಾರಾಟದಲ್ಲಿ ಏರಿಕೆ ಕಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಲ್ಲೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಈ ವೇಳೆ ಬಾಬರ್ ಆಝಂ ಬಳಸುವ ಸಿಎ ಬ್ಯಾಟ್ ಪಾಕ್ ತಂಡದ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಬ್ರಾಂಡ್ ಆಗುವ ನಿರೀಕ್ಷೆಯಲ್ಲಿದೆ ಸಿಎ ಸ್ಪೋರ್ಟ್ಸ್​.

ಇನ್ನು ಬಾಬರ್ ಆಝಂ ಜೊತೆಗಿನ ಒಪ್ಪಂದ ಬಳಿಕ ಸಿಎ ಬ್ಯಾಟ್ ಮಾರಾಟದಲ್ಲಿ ಏರಿಕೆ ಕಂಡಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಲ್ಲೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಈ ವೇಳೆ ಬಾಬರ್ ಆಝಂ ಬಳಸುವ ಸಿಎ ಬ್ಯಾಟ್ ಪಾಕ್ ತಂಡದ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಬ್ರಾಂಡ್ ಆಗುವ ನಿರೀಕ್ಷೆಯಲ್ಲಿದೆ ಸಿಎ ಸ್ಪೋರ್ಟ್ಸ್​.

5 / 5
Follow us
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ