Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಪಕ್ಷದವರು ಸಂಭ್ರಮಿಸಿದರೆ, ಸಮಾವೇಶ ನಡೆಸಲಿಚ್ಛಿಸಿದರೆ ಬೇಡ ಅನ್ನಲಾದೀತೇ? ಡಿಕೆ ಸುರೇಶ್

ಜೆಡಿಎಸ್ ಪಕ್ಷದವರು ಸಂಭ್ರಮಿಸಿದರೆ, ಸಮಾವೇಶ ನಡೆಸಲಿಚ್ಛಿಸಿದರೆ ಬೇಡ ಅನ್ನಲಾದೀತೇ? ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 15, 2024 | 1:09 PM

ಕಾಂಗ್ರೆಸ್ ಪಕ್ಷದವರು ಸಂಭ್ರಮಾಚರಣೆ ಮಾಡೋದಿಕ್ಕೆ ಇನ್ನೂ ಟೈಮಿದೆ ಎಂದು ಹೇಳಿದ ಸುರೇಶ್ ಜೆಡಿಎಸ್ ಆಗಲೇ ಸಂಭ್ರಮಿಸುತ್ತಿರುವ ವಿಚಾರ ಅವರಿಗೆ ಬಿಟ್ಟಿದ್ದು, ಅವರು ಸಂಭ್ರಮಿಸಲು ಮತ್ತು ಸಮಾವೇಶ ನಡೆಸಲು ಯಾರೂ ಬೇಡ ಅನ್ನಲಾಗಲ್ಲ, ಮತದಾರ ಈಗಾಗಲೇ ತೀರ್ಪು ನೀಡಿದ್ದಾನೆ, ಕಾದು ನೋಡಬೇಕು ಎಂದು ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಕೆ ಸುರೇಶ್ ನಿನ್ನೆ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಬಗ್ಗೆ ನಿರಾಶಾದಾಯಕ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರತಿಯಾಗಿ ಸ್ಪಷ್ಟ ಉತ್ತರಗಳನ್ನು ನೀಡಲಿಲ್ಲ. ಕಾಂಗ್ರೆಸ್ ನಾಯಕರು ಹೆಚ್​ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಕುರಿತು ಮಾಡಿದ ಕಾಮೆಂಟ್​ಗಳು ಪಕ್ಷಕ್ಕೆ ಮುಳ್ಳಾದವೇ ಅಂತ ಕೇಳಿದ್ದಕ್ಕೆ ಅವರು, ತನಗೆ ಗೊತ್ತಿಲ್ಲ, ವಿಷಯವನ್ನು ಮಾಧ್ಯಮದವರು ವಿಶ್ಲೇಷಣೆ ಮಾಡುವ ರೀತಿಯೇ ಬೇರೆ ತಾನು ವಿಶ್ಲೇಷಿಸುವ ರೀತಿ ಬೇರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ದೇವೇಗೌಡ ಮತ್ತು ಕುಮಾರಸ್ವಾಮಿಯವರ ಪ್ರಯತ್ನ ಮತ್ತು ಹಠ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ: ಯೋಗೇಶ್ವರ್