AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಿಕುಣಿ ಜಲಾಶಯ ಈಗ ಜನರ ಹಾಟ್ ಫೇವರಿಟ್ ಸ್ಪಾಟ್, ಜಲಧಾರೆ ಅಂದ ಸವಿಯಲು ಯಾದಗಿರಿಗೆ ಬಂತು ಪ್ರವಾಸಿ ದಂಡು

Hattikuni Dam: ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ.

ಹತ್ತಿಕುಣಿ ಜಲಾಶಯ ಈಗ ಜನರ ಹಾಟ್ ಫೇವರಿಟ್ ಸ್ಪಾಟ್, ಜಲಧಾರೆ ಅಂದ ಸವಿಯಲು ಯಾದಗಿರಿಗೆ ಬಂತು ಪ್ರವಾಸಿ ದಂಡು
ಹತ್ತಿಕುಣಿ ಜಲಾಶಯ
TV9 Web
| Edited By: ಆಯೇಷಾ ಬಾನು|

Updated on: Aug 13, 2021 | 8:36 AM

Share

ಯಾದಗಿರಿ: ವರುಣನ ಅಬ್ಬರಕ್ಕೆ ಹಳ್ಳ-ಕೊಳ್ಳಗಳು, ನದಿ ಮತ್ತು ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಮಳೆರಾಯನ ಆರ್ಭಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಗಾರದಂತಹ ಬೆಳೆಯೂ ನೀರು ಪಾಲಾಗಿದೆ. ಆದ್ರೆ, ಇಲ್ಲೊಂದು ಪ್ಲೇಸ್ ಪ್ರವಾಸಿ ತಾಣವಾಗಿ ಬದ್ಲಾಗಿದೆ. ಯಾದಗಿರಿ ಜಿಲ್ಲೆಯ ಜನರ ಹಾಟ್ ಫೇವರಿಟ್ ಸ್ಪಾಟ್ ಆಗಿದೆ.

ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ. ಪ್ರವಾಸಿಗರ ಪಾಲಿಗೆ ಫೇವರಿಟ್ ಸ್ಪಾಟ್ ಆಗಿದೆ. ಸುತ್ತಲು ಗುಡ್ಡಗಾಡು, ನಡುವಲ್ಲಿ ಜಲಾಶಯ ಇರೋದ್ರಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ. ಯುವಕ ಮತ್ತು ಯುವತಿಯರಂತೂ ಫ್ರೆಂಡ್ಸ್ ಜೊತೆ ಇಲ್ಲಿಗೆ ಬರ್ತಿದ್ದಾರೆ. ಡ್ಯಾಂನಲ್ಲಿ ಫೋಟೋಗೆ ಪೋಸ್ ಕೊಟ್ಟು, ಕಾಲ ಕಳೀತಾರೆ. ಇಷ್ಠೇ ಅಲ್ಲ, ಡ್ಯಾಂ ಗೇಟ್ಗಳ ಮೇಲೆ ಹೋಗಲು ನಿರ್ಬಂಧವಿದ್ರೂ ಯುವಕರು ಪಕ್ಕದಲ್ಲೇ ನಿಂತ್ಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದ್ದಾರೆ.

ಇನ್ನು, ಡ್ಯಾಂನತ್ತ ಪ್ರವಾಸಿಗರನ್ನ ಸೆಳೆಯುವುದ್ದಕ್ಕೆ ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಡ್ಯಾಂ ಬಳಿ ಗಾರ್ಡನ್ ರೆಡಿಯಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳನ್ನ ಹೊಸದಾಗಿ ಅಳವಡಿಸಲಾಗಿದೆ. ಜೊತೆಗೆ ಇಲ್ಲಿ ರಾತ್ರಿ ಹೊತ್ತು ಸ್ಟೇ ಮಾಡಲು ಅನುಕೂಲವಿದೆ. ಹೀಗಾಗಿ ಇಲ್ಲಿ ಕಾಲ ಕಳೆಯೋಕೆ ಯಾದಗಿರಿ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರು ಕೂಡ ಬರ್ತಿದ್ದಾರೆ.

ಸದ್ಯ, ಜಲಧಾರೆ, ಜಲಪಾತ ನೋಡಬೇಕಾದ್ರೆ ಮಲೆನಾಡು ಭಾಗಕ್ಕೆ ಹೋಗುತ್ತಿದ್ದ ಪ್ರವಾಸಿಗರು ಈಗ ಹತ್ತಿಕುಣಿ ಜಲಾಶಯಕ್ಕೆ ಬರ್ತಿದ್ದಾರೆ. ಸುಂದರ ತಾಣದಲ್ಲಿ ಕಾಲ ಕಳೆದು ಖುಷಿ ಪಡ್ತಿದ್ದಾರೆ.

hattikuni dam

ಹತ್ತಿಕುಣಿ ಜಲಾಶಯ

hattikuni dam

ಹತ್ತಿಕುಣಿ ಜಲಾಶಯ

ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್​ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ