Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಿಕುಣಿ ಜಲಾಶಯ ಈಗ ಜನರ ಹಾಟ್ ಫೇವರಿಟ್ ಸ್ಪಾಟ್, ಜಲಧಾರೆ ಅಂದ ಸವಿಯಲು ಯಾದಗಿರಿಗೆ ಬಂತು ಪ್ರವಾಸಿ ದಂಡು

Hattikuni Dam: ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ.

ಹತ್ತಿಕುಣಿ ಜಲಾಶಯ ಈಗ ಜನರ ಹಾಟ್ ಫೇವರಿಟ್ ಸ್ಪಾಟ್, ಜಲಧಾರೆ ಅಂದ ಸವಿಯಲು ಯಾದಗಿರಿಗೆ ಬಂತು ಪ್ರವಾಸಿ ದಂಡು
ಹತ್ತಿಕುಣಿ ಜಲಾಶಯ
Follow us
TV9 Web
| Updated By: ಆಯೇಷಾ ಬಾನು

Updated on: Aug 13, 2021 | 8:36 AM

ಯಾದಗಿರಿ: ವರುಣನ ಅಬ್ಬರಕ್ಕೆ ಹಳ್ಳ-ಕೊಳ್ಳಗಳು, ನದಿ ಮತ್ತು ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಮಳೆರಾಯನ ಆರ್ಭಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಗಾರದಂತಹ ಬೆಳೆಯೂ ನೀರು ಪಾಲಾಗಿದೆ. ಆದ್ರೆ, ಇಲ್ಲೊಂದು ಪ್ಲೇಸ್ ಪ್ರವಾಸಿ ತಾಣವಾಗಿ ಬದ್ಲಾಗಿದೆ. ಯಾದಗಿರಿ ಜಿಲ್ಲೆಯ ಜನರ ಹಾಟ್ ಫೇವರಿಟ್ ಸ್ಪಾಟ್ ಆಗಿದೆ.

ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ. ಪ್ರವಾಸಿಗರ ಪಾಲಿಗೆ ಫೇವರಿಟ್ ಸ್ಪಾಟ್ ಆಗಿದೆ. ಸುತ್ತಲು ಗುಡ್ಡಗಾಡು, ನಡುವಲ್ಲಿ ಜಲಾಶಯ ಇರೋದ್ರಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ. ಯುವಕ ಮತ್ತು ಯುವತಿಯರಂತೂ ಫ್ರೆಂಡ್ಸ್ ಜೊತೆ ಇಲ್ಲಿಗೆ ಬರ್ತಿದ್ದಾರೆ. ಡ್ಯಾಂನಲ್ಲಿ ಫೋಟೋಗೆ ಪೋಸ್ ಕೊಟ್ಟು, ಕಾಲ ಕಳೀತಾರೆ. ಇಷ್ಠೇ ಅಲ್ಲ, ಡ್ಯಾಂ ಗೇಟ್ಗಳ ಮೇಲೆ ಹೋಗಲು ನಿರ್ಬಂಧವಿದ್ರೂ ಯುವಕರು ಪಕ್ಕದಲ್ಲೇ ನಿಂತ್ಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದ್ದಾರೆ.

ಇನ್ನು, ಡ್ಯಾಂನತ್ತ ಪ್ರವಾಸಿಗರನ್ನ ಸೆಳೆಯುವುದ್ದಕ್ಕೆ ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಡ್ಯಾಂ ಬಳಿ ಗಾರ್ಡನ್ ರೆಡಿಯಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳನ್ನ ಹೊಸದಾಗಿ ಅಳವಡಿಸಲಾಗಿದೆ. ಜೊತೆಗೆ ಇಲ್ಲಿ ರಾತ್ರಿ ಹೊತ್ತು ಸ್ಟೇ ಮಾಡಲು ಅನುಕೂಲವಿದೆ. ಹೀಗಾಗಿ ಇಲ್ಲಿ ಕಾಲ ಕಳೆಯೋಕೆ ಯಾದಗಿರಿ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರು ಕೂಡ ಬರ್ತಿದ್ದಾರೆ.

ಸದ್ಯ, ಜಲಧಾರೆ, ಜಲಪಾತ ನೋಡಬೇಕಾದ್ರೆ ಮಲೆನಾಡು ಭಾಗಕ್ಕೆ ಹೋಗುತ್ತಿದ್ದ ಪ್ರವಾಸಿಗರು ಈಗ ಹತ್ತಿಕುಣಿ ಜಲಾಶಯಕ್ಕೆ ಬರ್ತಿದ್ದಾರೆ. ಸುಂದರ ತಾಣದಲ್ಲಿ ಕಾಲ ಕಳೆದು ಖುಷಿ ಪಡ್ತಿದ್ದಾರೆ.

hattikuni dam

ಹತ್ತಿಕುಣಿ ಜಲಾಶಯ

hattikuni dam

ಹತ್ತಿಕುಣಿ ಜಲಾಶಯ

ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್​ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ