AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಿಂದ ಹಾರಿ ಬರುತಿವೆ ಹಕ್ಕಿಗಳು -ಯಾದಗಿರಿಯ ಲುಂಬಿನಿ ವನದ ಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ

ವಿದೇಶದಿಂದ ವಲಸೆ ಬಂದಿರುವ ಪ್ರಮುಖ ಪಕ್ಷಿಗಳು ಅಂದ್ರೆ ಕಾಮನ್ ಕೂಟ್, ಪರ್ಪಲ್ ಮೋರ್, ಹೆನ್ ಸ್ಟ್ರೋಕ್, ಪೈಡ್ ಕಿಂಗ್ ಪೀಶರ್, ಪೊಂಡ್ ಹಿರೊನ್, ಇಗ್ರೇಟ್, ಡಾರ್ಟರ್, ಕರ್ಮೋರಾಂಟ್ಸ್, ವಾಟರ್ ಹೆನ್, ಬ್ಲಾಕ್ ಹೆಡೆಡ್ ಐಬಿಸ್, ಲಾಪವಿಂಗ್, ರೀವರ್ ಟರ್ನ್ ಹಾಗೂ ವಾಗ್ಟೈಲ್ ಸೇರಿದಂತೆ ನಾನಾ ತಳಿಯ ಹಕ್ಕಿಗಳು ವಲಸೆ ಬರುತ್ತವೆ.

ವಿದೇಶದಿಂದ ಹಾರಿ ಬರುತಿವೆ ಹಕ್ಕಿಗಳು -ಯಾದಗಿರಿಯ ಲುಂಬಿನಿ ವನದ ಕೆರೆಯಲ್ಲಿ ಸಂಭ್ರಮ ಮನೆ ಮಾಡಿದೆ
ಯಾದಗಿರಿಯ ಲುಂಬಿನಿ ವನದ ಕೆರೆಯತ್ತ ಹಾರಿ ಬರುತಿವೆ ವಿದೇಶಿ ಹಕ್ಕಿಗಳು
ಅಮೀನ್​ ಸಾಬ್​
| Edited By: |

Updated on: Feb 19, 2024 | 2:10 PM

Share

ಪ್ರತಿನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವರರ ಮನಕ್ಕೆ ಆ ಸ್ಥಳ ಸಾಕಷ್ಟು ಆನಂದ ನೀಡುತ್ತೆ… ತಣ್ಣನೆಯ ಗಾಳಿಯಲ್ಲಿ ನಿತ್ಯ ವಾಯು ವಿಹಾರಕ್ಕೆ ಬರುವರರನ್ನ ಆ ಕೆರೆಯಲ್ಲಿ ಹಕ್ಕಿಗಳ ಆಟ ಸಳೆಯುತ್ತಿದ್ದೆ.. ಹಕ್ಕಿಗಳ ಚಿಲಿಪಿಲಿ ಸದ್ದು ಅಲ್ಲಿ ಬರುವ ಪ್ರಾವಾಸಿಗರ ಕಿವಿಗಳಿಗೆ ಇಂಪು ನೀಡುತ್ತಿದೆ. ಅದರಲ್ಲೂ ವಿದೇಶಿ ಹಕ್ಕಿಗಳು ಆಗಮನ ಜೋರಾಗಿದ್ದರಿಂದ ವಾಯು ವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಲುಂಬಿನಿ ವನಕ್ಕೆ ಎಂಟ್ರಿ ಕೊಟ್ಟ ವಿದೇಶಿ ಹಕ್ಕಿಗಳು.. ವಾಯು ವಿಹಾರಕ್ಕೆ ಬರುವವರಿಗೆ ಮುದ ನೀಡುತ್ತಿರುವ ಹಕ್ಕಿಗಳ ಕಲರವ.. ಪಾರ್ಕ್ ನಲ್ಲಿ ಹಕ್ಕಿಗಳ ಜೊತೆ ಎಂಜಾಯ್ ಮಾಡುತ್ತಿರುವ ಮಕ್ಕಳು.. ಈ ದೃಶ್ಯಗಳು ಕಂಡು ಬರುವುದು ಗಿರಿನಾಡು ಯಾದಗಿರಿ ನಗರದ ಲುಂಬಿನಿ ವನದ ಕೆರೆಯಲ್ಲಿ.

ಏಳು ವರ್ಷಗಳ ಹಿಂದೆ ನಿರ್ಮಾಣವಾದ ಈ ಲುಂಬಿನ ಉದ್ಯಾನವನ ಬಣ್ಣ ಬಣ್ಣ ಹಕ್ಕಿಗಳ ಪ್ರಸಿದ್ಧ ತಾಣವಾಗಿದೆ.. ವಿಧ ವಿಧವಾದ ಹಕ್ಕಿಗಳು ತುಂಟಾಟ ನೋಡುವುದೆ ಒಂದು ರೀತಿ ಕಣ್ಣಿಗೆ ಆನಂದ ನೀಡುತ್ತೆ. ವಿಶೇಷವಾಗಿ ಈ ಲುಂಬಿನಿ ಕೆರೆಗೆ ಈಗ ಸ್ಥಳೀಯ ಹಕ್ಕಿಗಳಿಗೆ ಸಾಥ್​​ ನೀಡುವುದಕ್ಕೆ ಜೊತೆಗೆ ಫಾರಿನ್ ಹಕ್ಕಿಗಳು ಸಹ ಹಾರುತ್ತಾ ಬಂದಿದೆ. ಹೀಗಾಗಿ ಬೆಳಗ್ಗೆ 5 ಗಂಟೆಯಿಂದಾನೆ ವಾಯು ವಿಹಾರಕ್ಕೆ ಬಂದವರು ಈ ಫಾರಿನ್ ಹಕ್ಕಿಗಳ ತುಂಟಾಟ ನೋಡಿಯೇ ಹೋಗುತ್ತಾರೆ..

ಸುತ್ತಮುತ್ತ ಹಚ್ಚಹಸಿರಿನ ವಾತಾವರಣ ಇರುವುದರಿಂದ ಹಕ್ಕಿಗಳು ಇಲ್ಲಿಯೇ ಆಹಾರ ಸಂಗ್ರಹ ಮಾಡುತ್ತವೆ.. ಇನ್ನು ಈ ಹಕ್ಕಿಗಳ ಕಲರವ ನೋಡಬೇಕಾದ್ರೆ ಲುಂಬಿನಿ ವನಕ್ಕೆ ಸ್ವಲ್ಪ ಬೆಳಗ್ಗೆಯೇ ಬರಬೇಕಾಗುತ್ತೆ. ಬೆಳಗ್ಗೆ ಬಂದ್ರೆ ಸಾಕು ನೂರಾರು ವಿವಿಧ ತಳಿಯ ಬಾನಾಡಿಗಳು ಸ್ವಚ್ಚಂದವಾಗಿ ಆಕಾಶದಲ್ಲಿ ಹಾರುತ್ತಾ ಕೆರೆಯಲ್ಲಿ ಕೂಲ್ ಕೂಲ್ ಆಗಿ ಈಜಾತ್ತಾ ಇರುತ್ತವೆ.

ಹೀಗಾಗಿ ಈ ಮನಮೋಹಕ ದೃಶ್ಯವನ್ನ ನೋಡಿದ್ರೆ ಜೊತೆಗೆ ಈ ಕೆರೆಯಲ್ಲಿ ವಲಸೆ ಬಂದ ವಿದೇಶಿ ಹಕ್ಕಿಗಳನ್ನ ನೋಡಿದ್ರೆ ಪಕ್ಷಿಗಳ ಪ್ರೇಮಿ ಸಲಿಂ ಅಲಿ ಅವರ ನೆನಪಾಗುತ್ತೆ. ಜೊತೆಗೆ ಇಂತಹ ಮನಮೋಹಕ ದೃಶ್ಯ ನೋಡಲು ಕಣ್ಣಿಗೆ ಆನಂದವಾಗುತ್ತೆ ಅಂತಾರೆ ವಾಯು ವಿಹಾರಕ್ಕೆ ಬಂದವರು. ಇನ್ನು ಪ್ರತಿ ವರ್ಷ ನವೆಂಬರನಿಂದ ಪೆಬ್ರುವರಿ ವರೆಗೆ ವಿದೇಶಿ ಹಕ್ಕಿಗಳ ವಲಸೆ ಜೋರಾಗಿರುತ್ತದೆ. ವಿಶೇಷವಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ಹಕ್ಕಿಗಳು ಆಗಮಿಸುತ್ತವೆ. ಇನ್ನು ತಮ್ಮ ಆರೋಗ್ಯದ ದೃಷ್ಟಿಯಿಂದ ಹಾರುತ್ತ ಬರುವ ವಿದೇಶಿ ಹಕ್ಕಿಗಳು ಇಲ್ಲಿನ ಜನರ ಮನಗೆದ್ದಿವೆ.

ಪುಸ್ತಕದಲ್ಲಷ್ಟೇ ನೋಡಲು ಸಿಗುವ ವಿವಿಧ ತಳಿಯ ಹಕ್ಕಿಗಳನ್ನು ತಮ್ಮೂರಿನಲ್ಲಿಯೇ ನೋಡಲು ಸಿಗ್ತಾಯಿದ್ದರಿಂದ ಜನ ಸಂತೋಷ ವ್ಯಕ್ತಪಡಿಸುತ್ತಾರೆ. ಬೆಳಗ್ಗೆ ಒಂದು ರೌಂಡ್ ಈ ಹಕ್ಕಿಗಳು ಆಟ ನೋಡುವುದಕ್ಕೆಂದೇ ಬರುವ ಜನರೂ ಇದ್ದಾರೆ. ವಲಸೆ ಹಕ್ಕಿಗಳು ಕೆರೆಗೆ ಬಂದಿದ್ದರಿಂದ ಲುಂಬಿನಿ ವನಕ್ಕೆ ಪ್ರವಾಸಿಗರು ಬರುವುದು ಸಹ ಹೆಚ್ಚಾಗಿದೆ.. ವಾರದ ರಜೆ ಹಾಗೂ ಭಾನುವಾರಕ್ಕೆ ಕುಟುಂಬ ಸಮೇತ ನೂರಾರು ಮಂದಿ ಬಂದು ಈ ಸುಂದರವಾದ ನೋಟವನ್ನ ವೀಕ್ಷಿಸಿ ಹೋಗುತ್ತಾರೆ. ಇನ್ನು ಯಾದಗಿರಿಯಲ್ಲಿ ಇಂತಹ ಅದ್ಬುತ ದೃಶ್ಯ ನೋಡ ಸಿಗಲು ನಾವು ಅದೃಷ್ಟ ಮಾಡಿದ್ದೇವೆ. ವಿದೇಶಗಳನ್ನ ನೋಡುವುದು ಸಾಧ್ಯವಾಗದಿದ್ದಲ್ಲಿ ಇಲ್ಲೆ ನೋಡಲು ಸಿಕ್ಕಿದ್ದಕ್ಕಾಗಿ ಖುಷಿ ಅನ್ನಿಸುತ್ತೆ ಅಂತಾರೆ ಶಾಲಾ ಮಕ್ಕಳನ್ನ ಕರೆದುಕೊಂಡು ಬಂದ ಶಿಕ್ಷಕರು.

ಒಟ್ನಲ್ಲಿ ಬಾನಾಡಿಗಳ ಕಲರಫುಲ್ ಲುಕ್ ಹಾಗೂ ತುಂಟಾಟ ನೋಡುವುದು ಒಂದು ರೀತಿ ಮನಸಿಗೆ ಸಂತೋಷ. ತಣ್ಣನೆಯ ಗಾಳಿಯಲ್ಲಿ ವಾಯು ವಿಹಾರಕ್ಕೆನಾದರೂ ಈ ವನಕ್ಕೆ ಬಂದ್ರೆ ಇಂತಹ ಮನಮೋಹಕ ದೃಶ್ಯಗಳನ್ನ ನೀವು ಸಹ ಕಣ್ತುಂಬಿಕೊಂಡು ಹೋಗಿ.

Follow Us
Ameen Sab
Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ