AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್​?

ಬೆಂಗಳೂರು: ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದೆ. ಕಿಯಾರಾ ಡೆಂಟಲ್ ಕ್ಲಿನಿಕ್​ನ ದಂತವೈದ್ಯೆ ಡಾ.ಮೋನಿಕಾ ವಿರುದ್ಧ ಆರೋಪ ಮಾಡಲಾಗಿದೆ. ಡಿ.24ರಂದು ಹಲ್ಲು ನೋವಿನ ಚಿಕಿತ್ಸೆಗೆ ಕಿಯಾರಾ ಡೆಂಟಲ್ ಕ್ಲಿನಿಕ್​ಗೆ 19 ವರ್ಷದ ವೇಣು ತೆರಳಿದ್ದ. ದಂತವೈದ್ಯೆ ಡಾ.ಮೋನಿಕಾ ಅವರು ವೇಣು ದವಡೆಗೆ ಇಂಜೆಕ್ಷನ್​ ಕೊಟ್ಟು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೇಣು ಗಂಟಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಊತದಿಂದ ಆಹಾರ ಸೇವಿಸಲು, ಮಾತನಾಡಲು ಆಗತ್ತಿರಲಿಲ್ಲ. ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೇಣುಗೆ 3 […]

ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್​?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 10, 2020 | 5:12 PM

Share

ಬೆಂಗಳೂರು: ದಂತವೈದ್ಯೆ ಎಡವಟ್ಟಿನಿಂದ ಯುವಕನಿಗೆ ಮೂರು ಬಾರಿ ಆಪರೇಷನ್ ಮಾಡಿರುವ ಆರೋಪ ಕೇಳಿಬಂದಿದೆ. ಕಿಯಾರಾ ಡೆಂಟಲ್ ಕ್ಲಿನಿಕ್​ನ ದಂತವೈದ್ಯೆ ಡಾ.ಮೋನಿಕಾ ವಿರುದ್ಧ ಆರೋಪ ಮಾಡಲಾಗಿದೆ.

ಡಿ.24ರಂದು ಹಲ್ಲು ನೋವಿನ ಚಿಕಿತ್ಸೆಗೆ ಕಿಯಾರಾ ಡೆಂಟಲ್ ಕ್ಲಿನಿಕ್​ಗೆ 19 ವರ್ಷದ ವೇಣು ತೆರಳಿದ್ದ. ದಂತವೈದ್ಯೆ ಡಾ.ಮೋನಿಕಾ ಅವರು ವೇಣು ದವಡೆಗೆ ಇಂಜೆಕ್ಷನ್​ ಕೊಟ್ಟು ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ವೇಣು ಗಂಟಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಊತದಿಂದ ಆಹಾರ ಸೇವಿಸಲು, ಮಾತನಾಡಲು ಆಗತ್ತಿರಲಿಲ್ಲ. ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೇಣುಗೆ 3 ಆಪರೇಶನ್ ಮಾಡಲಾಗಿದೆ.

ಡೆಂಟಲ್ ಡಾಕ್ಟರ್​ ಮೋನಿಕಾ ನೀಡಿದ್ದ ಚಿಕಿತ್ಸೆಯಲ್ಲಿ ಎಡವಟ್ಟು ಆಗಿದೆ ಎಂದು ವೇಣು ತಂದೆ ಶ್ರೀನಿವಾಸ್‌ ಗಂಭೀರವಾಗಿ ಆರೋಪಿಸಿದ್ದಾರೆ. ಡಾ.ಮೋನಿಕಾ ವಿರುದ್ಧ ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು