AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ. ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ […]

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ
Guru
| Edited By: |

Updated on:Jul 04, 2020 | 6:46 PM

Share

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ.

ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ ಕೃಷಿ ಕಾಯಕವನ್ನೇ ಮಾಡಿಕೊಂಡಿದ್ದಾರೆ.

ಕೃಷಿಯೇ ಇವರ ಜೀವನಕ್ಕೆ ಆಧಾರ.. ಸಕ್ಕರೆ ಕಾಯಿಲೆಯಿಂದ ಒಂದು ಕಾಲು ಕಳೆದುಕೊಂಡ ದುರ್ದೈವಿ ಆದ್ರೆ ಕೆಲ ವರ್ಷಗಳ ಹಿಂದೆ ವಿಪರೀತ ಸಕ್ಕರೆ ಕಾಯಿಲೆಯಿಂದ ತಮ್ಮ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಪರಿಣಾಮ ಮೂರು ವರ್ಷ ಕೃಷಿ ಕಾರ್ಯದಿಂದ ದೂರವಿರಬೇಕಾಯಿತು. ಆದ್ರೆ ಮನೆಯಲ್ಲಿ ಕೂತು ಜೀವನ ಸಾಗಿಸಲು ಮನಸ್ಸು ಒಪ್ಪಿಲ್ಲ. ಹೀಗಾಗಿ ಕಾಯಕವೇ ಕೈಲಾಸ ಅಂತಾ ಕೃತಕ ಕಾಲು ಜೋಡಿಸಿಕೊಂಡು ಮತ್ತೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತರರಿಗೆ ಮಾದರಿ ಈ ಸ್ವಾವಲಂಬಿ ಕೃಷಿಯ ಮೇಲೆ ಅಪಾರ ಮೋಹ ಹೊಂದಿರುವ ಸ್ವಾಭಿಮಾನಿ ನಾರಾಯಣ ತಿಂಗಳಾಯ ತಮ್ಮ ಒಂದು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಾರೆ. ಹಗಲಿರುಳೆನ್ನದೇ ಭೂತಾಯಿಯ ಸೇವೆ ಮಾಡತ್ತಾರೆ. ಒಂದು ಕಾಲು ಇಲ್ಲ ನಾನ್ಯಾಕೆ ಗದ್ದೆಯಲ್ಲಿ ಕೆಲಸ ಮಾಡಬೇಕು ಎನ್ನದೇ ನಿರಂತರವಾಗಿ ಕಾಯಕದಲ್ಲಿ ತೊಡಗಿ ಸ್ವಾವಲಂಬಿಯಾಗಿ ಇತರರಿಗೆ ಮಾದರಿ ರೈತನಾಗಿದ್ದಾರೆ. -ಹರೀಶ್ ಪಾಲೆಚ್ಚಾರ್

Published On - 6:44 pm, Sat, 4 July 20

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು