AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ. ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ […]

ಒಂದೇ ಕಾಲಿದ್ರೂ ಭೂತಾಯಿ ಸೇವೆ ನಿಂತಿಲ್ಲ, ಉಡುಪಿಯಲ್ಲೊಬ್ಬ ಮಾದರಿ ರೈತ
Guru
Guru| Edited By: ಸಾಧು ಶ್ರೀನಾಥ್​|

Updated on:Jul 04, 2020 | 6:46 PM

Share

ಉಡುಪಿ: ಕೃಷಿ ಅಂದ್ರೆ ಮೂಗು ಮುರಿದು ಹೆಚ್ಚಿನ ಹಣದ ಆಸೆಗೆ ಪಟ್ಟಣ ಸೇರುವವರೇ ಹೆಚ್ಚಿದ್ದಾರೆ. ಅಂಥದ್ರಲ್ಲಿ ಒಂದು ಕಾಲು ಕಳೆದುಕೊಂಡರೂ ಹಠ ಬಿಡದ ದಶರಥನಂತೆ ಒಂದೇ ಕಾಲಿನಲ್ಲಿ ಕೃಷಿ ಹಸಿರನ್ನೇ ಉಸಿರು ಮಾಡಿಕೊಂಡು ಭೂತಾಯಿ ಸೇವೆಯಲ್ಲಿ ತೊಡಗಿರುವ ಅಪರೊಪದ ರೈತರೊಬ್ಬರು ಉಡುಪಿಯಲ್ಲಿ ಜನಮನ ಗೆದ್ದಿದ್ದಾರೆ.

ಹೌದು, ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ನಿವಾಸಿ ನಾರಾಯಣ ತಿಂಗಳಾಯರೇ ಈ ಹಸಿರುನಾಡಿನ ದಶರಥ. 59 ವರ್ಷದ ನಾರಾಯಣ ಕೃಷಿ ಕುಟುಂಬದಲ್ಲಿ ಹುಟ್ಟಿ ಕೃಷಿಯನ್ನೇ ಮೈಗೂಡಿಸಿಕೊಂಡವರು. ತಮ್ಮ ಕುಟುಂಬದೊಡನೆ ಗದ್ದೆಯಲ್ಲಿ ಕೃಷಿ ಕಾಯಕವನ್ನೇ ಮಾಡಿಕೊಂಡಿದ್ದಾರೆ.

ಕೃಷಿಯೇ ಇವರ ಜೀವನಕ್ಕೆ ಆಧಾರ.. ಸಕ್ಕರೆ ಕಾಯಿಲೆಯಿಂದ ಒಂದು ಕಾಲು ಕಳೆದುಕೊಂಡ ದುರ್ದೈವಿ ಆದ್ರೆ ಕೆಲ ವರ್ಷಗಳ ಹಿಂದೆ ವಿಪರೀತ ಸಕ್ಕರೆ ಕಾಯಿಲೆಯಿಂದ ತಮ್ಮ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು. ಪರಿಣಾಮ ಮೂರು ವರ್ಷ ಕೃಷಿ ಕಾರ್ಯದಿಂದ ದೂರವಿರಬೇಕಾಯಿತು. ಆದ್ರೆ ಮನೆಯಲ್ಲಿ ಕೂತು ಜೀವನ ಸಾಗಿಸಲು ಮನಸ್ಸು ಒಪ್ಪಿಲ್ಲ. ಹೀಗಾಗಿ ಕಾಯಕವೇ ಕೈಲಾಸ ಅಂತಾ ಕೃತಕ ಕಾಲು ಜೋಡಿಸಿಕೊಂಡು ಮತ್ತೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತರರಿಗೆ ಮಾದರಿ ಈ ಸ್ವಾವಲಂಬಿ ಕೃಷಿಯ ಮೇಲೆ ಅಪಾರ ಮೋಹ ಹೊಂದಿರುವ ಸ್ವಾಭಿಮಾನಿ ನಾರಾಯಣ ತಿಂಗಳಾಯ ತಮ್ಮ ಒಂದು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಾರೆ. ಹಗಲಿರುಳೆನ್ನದೇ ಭೂತಾಯಿಯ ಸೇವೆ ಮಾಡತ್ತಾರೆ. ಒಂದು ಕಾಲು ಇಲ್ಲ ನಾನ್ಯಾಕೆ ಗದ್ದೆಯಲ್ಲಿ ಕೆಲಸ ಮಾಡಬೇಕು ಎನ್ನದೇ ನಿರಂತರವಾಗಿ ಕಾಯಕದಲ್ಲಿ ತೊಡಗಿ ಸ್ವಾವಲಂಬಿಯಾಗಿ ಇತರರಿಗೆ ಮಾದರಿ ರೈತನಾಗಿದ್ದಾರೆ. -ಹರೀಶ್ ಪಾಲೆಚ್ಚಾರ್

Published On - 6:44 pm, Sat, 4 July 20

Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ