
ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರವಾಹದಿಂದಾಗಿ, ನದಿಯ ಮಧ್ಯೆ ನಿನ್ನೆಯಿಂದ ಸಿಲುಕಿಕೊಂಡಿದ್ದ ಮಂಗಗಳನ್ನು ಜೀವದ ಹಂಗು ತೊರೆದು ರಕ್ಷಣಾ ತಂಡ ಸುರಕ್ಷಿತವಾಗಿ ದಡ ಸೇರಿಸಿದೆ.
ಈ ಕಾರ್ಯಾಚರಣೆ ವೇಳೆ ಭಯಭೀತಗೊಂಡಿದ್ದ ಕೋತಿಗಳು ರಕ್ಷಣಾ ತಂಡದ ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿವೆ. ಆದರೂ ಸಹ ತಮ್ಮ ಛಲ ಬಿಡದ ರಕ್ಷಣಾ ತಂಡ ನಾಲ್ಕು ತೆಪ್ಪಗಳ ಮೂಲಕ ಯಶಸ್ವಿ ಕಾರ್ಯಚರಣೆ ನಡೆಸಿ ಕೋತಿಗಳನ್ನು ದಡಕ್ಕೆ ಸೇರಿಸಿವೆ.