
ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಡಾ. ಬಿ. ಸುಧಾ ಅವರ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.
ಏಕಕಾಲದಲ್ಲಿ 6 ಕಡೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಯಲಹಂಕದಲ್ಲಿರುವ ಫ್ಲ್ಯಾಟ್, ಬ್ಯಾಟರಾಯನಪುರ ಮನೆ ಬಿಇಎಂಎಲ್ನಲ್ಲಿರುವ ಮನೆ, ಶಾಂತಿನಗರದಲ್ಲಿರುವ ಕಚೇರಿ, ಉಡುಪಿ ಜಿಲ್ಲೆ ಹೆಬ್ರಿಯ ತೆಂಕಬೆಟ್ಟಿನ ಮನೆ ಮೇಲೆ ದಾಳಿ ಮಾಡಿದ್ದಾರೆ.
ಈ ಹಿಂದೆ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ, ಅವ್ಯವಹಾರ ಆರೋಪ ಕೇಳಿಬಂದಿತ್ತು. ಜೊತೆಗೆ ಡಾ.ಬಿ.ಸುಧಾ ಪರಿಚಯಸ್ಥರ ಮನೆಗಳ ಮೇಲೂ ದಾಳಿ ನಡೆಸಲಾಗಿದ್ದು, ಬೆಂಗಳೂರಿನ ಓರ್ವ ಹಾಗೂ ಮೈಸೂರು, ಉಡುಪಿಯ ಓರ್ವರ ಮನೆ ಮೇಲೂ ದಾಳಿ ನಡೆದಿದೆ.
ಎಸಿಬಿ ದಾಳಿಯ ವೇಳೆ ಡಾ.ಬಿ.ಸುಧಾ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಪತ್ತೆಯಾದ ಚಿನ್ನಾಭರಣ ಒಂದೆಡೆ ಸೇರಿಸಿ ಈ ಬಗ್ಗೆ ಸುಧಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸುಧಾ ಗೋಲ್ಡ್ ಪ್ಯಾಲೆಸ್: ಪತಿರಾಯ ಸಿನಿ ನಿರ್ಮಾಪಕ! ACB ತನಿಖೆಯಿಂದ ಹೊರಬಂದ ಸತ್ಯವೇನು?



Published On - 10:29 am, Sat, 7 November 20