AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಹೆಂಡ ಆಮಿಷ ತೋರಿಸಲ್ಲ.. ಪಕ್ಷ ಭೇದ ಮರೆತು ಗ್ರಾಮ ದೇವರ ಮುಂದೆ ಸಾಮೂಹಿಕ ಪ್ರಮಾಣ ಮಾಡಿದ ಅಭ್ಯರ್ಥಿಗಳು

ಎಲ್ಲಾ ಪಕ್ಷದ ಅಭ್ಯರ್ಥಿಗಳು ಭೇದಭಾವ ಮರೆತು ಪ್ರತಿಜ್ಞೆ ಮಾಡಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಸೋತರೂ, ಗೆದ್ದರೂ ಮತದಾರರೊಂದಿಗೆ ಸಂಬಂಧ ಹಾಳುಮಾಡಿಕೊಳ್ಳದೇ ಮೊದಲಿನಂತೆಯೇ ಇರಿ ಎಂದು ಊರಿನವರು ಸಲಹೆ ನೀಡಿದ್ದಾರೆ.

ಹಣ ಹೆಂಡ ಆಮಿಷ ತೋರಿಸಲ್ಲ.. ಪಕ್ಷ ಭೇದ ಮರೆತು ಗ್ರಾಮ ದೇವರ ಮುಂದೆ ಸಾಮೂಹಿಕ ಪ್ರಮಾಣ ಮಾಡಿದ ಅಭ್ಯರ್ಥಿಗಳು
ಗ್ರಾಮ ದೇಗುಲದಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಅಭ್ಯರ್ಥಿಗಳು
Skanda
| Edited By: |

Updated on:Dec 21, 2020 | 6:15 PM

Share

ಶಿವಮೊಗ್ಗ: ಚುನಾವಣೆ ಬಂದರೆ ಹಣ ಹೆಂಡದ ಹೊಳೆ ಹರಿಯುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯ ಎನ್ನುವ ದುಃಸ್ಥಿತಿಗೆ ನಮ್ಮ ದೇಶ ಬಂದು ನಿಂತಿದೆ. ಹಣ, ಹೆಂಡ ಹಂಚಿ ಜನರಿಗೆ ಆಮಿಷ ತೋರಿಸಿ ವೋಟು ಗಿಟ್ಟಿಸಿಕೊಳ್ಳುವವರ ನಡುವೆ ಪ್ರಾಮಾಣಿಕತೆ ಎಂದು ಹೋದರೆ ಸೋಲು ನಿಶ್ಚಿತ ಎನ್ನುವ ಪರಿಸ್ಥಿತಿ ಇದೆ.

ಇದಕ್ಕೆ ಅಪವಾದ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿಯ ದೋಣಿಹಕ್ಲು ಮತ್ತು ಹೊಸೂರು-ಗುಡ್ಡೇಕೇರಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳು ಪಕ್ಷಭೇದ ಮರೆತು ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವ ಪ್ರತಿಜ್ಞೆ ತೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.

ಹಣ, ಹೆಂಡ ಅಥವಾ ಯಾವುದೇ ರೀತಿಯ ಆಮಿಷ ತೋರದೆ ಚುನಾವಣೆ ಎದುರಿಸುತ್ತೇವೆ. ಯಾವ ಕಾರಣಕ್ಕೂ ಅಡ್ಡದಾರಿ ತುಳಿಯುವುದಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನದಿಂದಷ್ಟೇ ಮತಯಾಚಿಸುತ್ತೇವೆ ಎಂದು ಎರಡೂ ಬೂತ್​ಗಳ ಒಟ್ಟು 8 ಅಭ್ಯರ್ಥಿಗಳು ಹೊಸೂರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಒಂದಾಗಿ ಹೋಗಿ ದೇವರ ಮುಂದೆ ನಿಂತು ಪ್ರಸಾದ ಸ್ವೀಕರಿಸಿ ವಾಗ್ದಾನ ನೀಡಿದ್ದಾರೆ.

ಎಲ್ಲಾ ಪಕ್ಷದ ಅಭ್ಯರ್ಥಿಗಳು ಭೇದಭಾವ ಮರೆತು ಪ್ರತಿಜ್ಞೆ ಮಾಡಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ. ಸೋತರೂ, ಗೆದ್ದರೂ ಮತದಾರರೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳದೇ ಮೊದಲಿನಂತೆಯೇ ಇರಿ ಎಂದು ಊರಿನವರು ಸಲಹೆ ನೀಡಿದ್ದಾರೆ.

ಈ ಹಿಂದೆಯೂ ಬೇರೆ ಬೇರೆ ಚುನಾವಣೆ ಸಂದರ್ಭದಲ್ಲಿ ಊರಿನ ಎಲ್ಲಾ ಪಕ್ಷದವರು ಒಂದಾಗಿ ಹಣ ಹಂಚದೇ ಊರಿನ ರಸ್ತೆ, ಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಶ್ರಮ ಹಾಕುವ ನಿರ್ಧಾರ ಮಾಡಿ ಮನಗೆದ್ದಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆ: ಕಲಬುರಗಿಯಲ್ಲಿ ಒಂದೇ ಕುಟುಂಬದ ನಾಲ್ವರ ಸ್ಪರ್ಧೆ

Published On - 5:05 pm, Mon, 21 December 20

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್