ಸಿಎಂ ಯಡಿಯೂರಪ್ಪ ಏರಿಯಾದಲ್ಲಿ ಮತ್ತೊಬ್ಬ ಕೊರೊನಾ ಶಂಕಿತ ಪತ್ತೆ!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಏರಿಯಾದಲ್ಲಿ ಮತ್ತೊಬ್ಬರು ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಸಂಜಯನಗರದ 80 ಫೀಟ್ ರಸ್ತೆಯಲ್ಲಿ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಕೊರೊನಾ ಶಂಕಿತನನ್ನು ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯರು ಕರೆದೊಯ್ದಿದ್ದಾರೆ. ಈ ಹಿಂದೆ ಸಿಎಂ ನಿವಾಸದ ಬಳಿ ಕೊರೊನಾ ಶಂಕಿತ ಮಹಿಳೆ ಪತ್ತೆಯಾಗಿದ್ದರು. ಹಾಗಾಗಿ ಸಿಎಂ ಭೇಟಿಗೆ ಬರುವವರು ಕೊರೊನಾ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಮಾಸ್ಕ್​ ಧರಿಸುವುದು, ಹ್ಯಾಂಡ್​ ವಾಶ್ ಮಾಡುವುದು ಕಡ್ಡಾಯವಾಗಿದೆ. See more  

ಸಿಎಂ ಯಡಿಯೂರಪ್ಪ ಏರಿಯಾದಲ್ಲಿ ಮತ್ತೊಬ್ಬ ಕೊರೊನಾ ಶಂಕಿತ ಪತ್ತೆ!
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Apr 24, 2020 | 3:12 PM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಏರಿಯಾದಲ್ಲಿ ಮತ್ತೊಬ್ಬರು ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಸಂಜಯನಗರದ 80 ಫೀಟ್ ರಸ್ತೆಯಲ್ಲಿ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಕೊರೊನಾ ಶಂಕಿತನನ್ನು ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯರು ಕರೆದೊಯ್ದಿದ್ದಾರೆ.

ಈ ಹಿಂದೆ ಸಿಎಂ ನಿವಾಸದ ಬಳಿ ಕೊರೊನಾ ಶಂಕಿತ ಮಹಿಳೆ ಪತ್ತೆಯಾಗಿದ್ದರು. ಹಾಗಾಗಿ ಸಿಎಂ ಭೇಟಿಗೆ ಬರುವವರು ಕೊರೊನಾ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಮಾಸ್ಕ್​ ಧರಿಸುವುದು, ಹ್ಯಾಂಡ್​ ವಾಶ್ ಮಾಡುವುದು ಕಡ್ಡಾಯವಾಗಿದೆ.

 

Published On - 2:55 pm, Fri, 24 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us