AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ಮುಖಂಡನ ಮೋಸದಾಟಕ್ಕೆ ಬಲಿಯಾದ ಮಹಿಳೆ, ಕಳಕೊಂಡ ಹಣವೆಷ್ಟು?

ಹುಬ್ಬಳ್ಳಿ: ತನ್ನ ಹೆಂಡತಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ, ಈಗಾಗಲೆ ಮದುವೆಯಾಗಿದ್ದ ಮಹಿಳೆಯಿಂದ ಆಕೆಯ ಗಂಡನಿಗೆ ಡೈವೋರ್ಸ್ ಕೊಡಿಸಿ. ಎರಡನೇ ಮದುವೆಯಾಗಿ ಹೇಳಿ, ಮದುವೆಯಾದವಳ ಬಳಿ ಲಕ್ಷ ಲಕ್ಷ ಹಣ ಲಪಟಾಯಿಸಿದ. ವಂಚನೆ ತಿಳಿದು ಹಣ ವಾಪಸ್ ಕೇಳಿದಾಗ ಆತ ಮತ್ತು ಆತನ ಮೊದಲನೇ ಹೆಂಡತಿಯ ಮಕ್ಕಳು ಸೇರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿರುವ ಆರೋಪ  ಹುಬ್ಬಳ್ಳಿ ನಗರದ ಬಿಜೆಪಿ ಮುಖಂಡನ ಮೇಲೆ ಕೇಳಿಬಂದಿದೆ. ಮಹಿಳೆಯನ್ನು ನೆಲಕ್ಕೆ ಬೀಳಿಸಿ, ಕೂದಲು ಎಳೆದು ಥಳಿತ ಹುಬ್ಬಳ್ಳಿಯ ವಿದ್ಯಾನಗರದ ಅಕ್ಷಯ ಕಾಲೋನಿಯ ಬಸವರಾಜ್ […]

ರಾಜಕೀಯ ಮುಖಂಡನ ಮೋಸದಾಟಕ್ಕೆ ಬಲಿಯಾದ ಮಹಿಳೆ, ಕಳಕೊಂಡ ಹಣವೆಷ್ಟು?
ಸಾಧು ಶ್ರೀನಾಥ್​
| Edited By: |

Updated on:Jul 26, 2020 | 2:00 AM

Share

ಹುಬ್ಬಳ್ಳಿ: ತನ್ನ ಹೆಂಡತಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ, ಈಗಾಗಲೆ ಮದುವೆಯಾಗಿದ್ದ ಮಹಿಳೆಯಿಂದ ಆಕೆಯ ಗಂಡನಿಗೆ ಡೈವೋರ್ಸ್ ಕೊಡಿಸಿ. ಎರಡನೇ ಮದುವೆಯಾಗಿ ಹೇಳಿ, ಮದುವೆಯಾದವಳ ಬಳಿ ಲಕ್ಷ ಲಕ್ಷ ಹಣ ಲಪಟಾಯಿಸಿದ. ವಂಚನೆ ತಿಳಿದು ಹಣ ವಾಪಸ್ ಕೇಳಿದಾಗ ಆತ ಮತ್ತು ಆತನ ಮೊದಲನೇ ಹೆಂಡತಿಯ ಮಕ್ಕಳು ಸೇರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿರುವ ಆರೋಪ  ಹುಬ್ಬಳ್ಳಿ ನಗರದ ಬಿಜೆಪಿ ಮುಖಂಡನ ಮೇಲೆ ಕೇಳಿಬಂದಿದೆ.

ಮಹಿಳೆಯನ್ನು ನೆಲಕ್ಕೆ ಬೀಳಿಸಿ, ಕೂದಲು ಎಳೆದು ಥಳಿತ ಹುಬ್ಬಳ್ಳಿಯ ವಿದ್ಯಾನಗರದ ಅಕ್ಷಯ ಕಾಲೋನಿಯ ಬಸವರಾಜ್ ಕೆಲಗೇರಿ ಎಂಬಾತ ಈಗಾಗಲೇ ಮದುವೆಯಾಗಿದ್ದು, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತವಾಗಿದ್ದರೂ ಸಹ ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುವುದಾಗಿ ನಂಬಿಸಿ, ತನ್ನ ಹೆಂಡತಿ ಈಗಾಗಲೇ ಮೃತಪಟ್ಟಿದ್ದು ನಿನ್ನನ್ನು ಎರಡನೇ ಮದುವೆಯಾಗುವುದಾಗಿ ಹೇಳಿ ಆಕೆಯಿಂದ ಲಕ್ಷ ಲಕ್ಷ ಹಣವನ್ನು ಲಪಟಾಯಿಸಿ, ಹಣವನ್ನು ವಾಪಸ್ ಕೇಳಲು ಹೋದಾಗ ಬಸವರಾಜ್ ಕೆಲಗೇರಿ ಹಾಗೂ ಆತನ ಮಕ್ಕಳು ಸೇರಿ ಈ ಮಹಿಳೆಯನ್ನು ಥಳಿಸಿದ್ದಾರೆ.

ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬಂಧಿಸದ ಆರೋಪ ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಬಸವರಾಜ್ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು, ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಆರೋಪಿಯನ್ನು ಇನ್ನು ಬಂಧಿಸಿಲ್ಲವೆಂದು ನೊಂದ ಮಹಿಳೆ ಪೊಲೀಸರ ಮೇಲೆ ಆರೋಪಿಸಿದ್ದಾರೆ.

2012ರಲ್ಲಿ ಮನೆಯಲ್ಲಿಯೇ ಸಂತ್ರಸ್ತ ಮಹಿಳೆಯನ್ನ 2ನೇ ಮದುವೆಯಾಗಿದ್ದ ಬಸವರಾಜನ ಮೋಸದಾಟವನ್ನು ಅರಿಯದ ಮಹಿಳೆ ತನ್ನ ಬಳಿ ಇದ್ದ ಸೈಟ್ ಮಾರಿ 25 ಲಕ್ಷ ಹಣವನ್ನು ಆತನಿಗೆ ನೀಡಿ ಈಗ ವಂಚನೆಗೊಳಗಾಗಿದ್ದಾಳೆ. ಜೊತೆಗೆ ಈಗಾಗಲೇ ಮದುವೆಯಾಗಿದ್ದ ಗಂಡನಿಗೆ ಡೈವೋರ್ಸ್ ಕೊಟ್ಟಿದ್ದ ಈ ಮಹಿಳೆ ಈತನಿಗಾಗಿ ಗಂಡನನ್ನು ದೂರ ಮಾಡಿಕೊಂಡಿದ್ದು ಈಗ ದಿಕ್ಕು ತೋಚದ ಸ್ಥಿತಿಯಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

Published On - 6:30 pm, Sat, 25 July 20

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ