AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs IND 3RD ODI | ಭಾರತೀಯ ಬೌಲರ್​ಗಳ ಸಂಘಟಿತ ದಾಳಿ: ಕೊನೆಗೂ ಗೆದ್ದ ಭಾರತ

ಶಾರ್ದುಲ್ ಠಾಕೂರು, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಟಿ. ನಟರಾಜನ್ ಮತ್ತು ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ತೋರಿದರು.

AUS vs IND 3RD ODI | ಭಾರತೀಯ ಬೌಲರ್​ಗಳ ಸಂಘಟಿತ ದಾಳಿ: ಕೊನೆಗೂ ಗೆದ್ದ ಭಾರತ
ಗೆಲುವಿನ ಖುಷಿಯಲ್ಲಿ ಭಾರತೀಯ ತಂಡ
TV9 Web
| Edited By: |

Updated on:Apr 07, 2022 | 5:42 PM

Share

ಕ್ಯಾನ್​ಬೆರಾ: ಇಂದು ನಡೆದ ಮೂರನೆಯ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಬೀಸಿದ ಭಾರತ ಕೇವಲ 302ರನ್ ಗಳಿಸಲಷ್ಟೇ ಶಕ್ತವಾಯಿತು. ಕಳೆದ ಎರಡು ಪಂದ್ಯದಲ್ಲಿ 350ಕ್ಕೂ ಹೆಚ್ಚು ರನ್ ದಾಖಲಿಸಿದ್ದ ಆಸಿಸ್, ಸುಲಭವಾಗಿ ಈ ಟಾರ್ಗೆಟ್ ಬೆನ್ನಟ್ಟುತ್ತದೆ ಎಂದು ತಿಳಿಯಲಾಗಿತ್ತು. ಭಾರತಕ್ಕೆ ಇಂದು ಕೂಡ ಸೋಲೇ ಗತಿ ಎಂದು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು.

ಆದರೆ ಈ ಎಲ್ಲಾ ಯೋಚನೆಗಳನ್ನು ತಲೆಕೆಳಗೆ ಮಾಡಿದ್ದು ಭಾರತೀಯ ಬೌಲರ್​ಗಳ ಸಂಘಟಿತ ದಾಳಿ. ಶಾರ್ದುಲ್ ಠಾಕೂರು, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಟಿ. ನಟರಾಜನ್ ಮತ್ತು ರವೀಂದ್ರ ಜಡೇಜಾ ತೋರಿದ ಉತ್ತಮ ಪ್ರದರ್ಶನ. ಎಸೆತಗಾರಿಕೆ ವಿಭಾಗದ ಯಶಸ್ಸು ಭಾರತವನ್ನು ಗೆಲುವಿನ ದಡ ಮುಟ್ಟಿಸಿತು.

India vs Australia 2020, 3rd ODI | ಕೊನೆಯ ಪಂದ್ಯವನ್ನು13 ರನ್​ಗಳಿಂದ ಗೆದ್ದ ಭಾರತ

ಈ ಸರಣಿಯಲ್ಲಿ ಮೊದಲ ಪಂದ್ಯವಾಡಿದ ಶಾರ್ದುಲ್ ಠಾಕೂರ್ 10 ಓವರ್ ಎಸೆದು ಕೇವಲ 51 ರನ್ ಬಿಟ್ಟುಕೊಟ್ಟು, 3 ವಿಕೆಟ್ ಪಡೆದರು. ಕಳೆದೆರಡು ಪಂದ್ಯದಲ್ಲಿ ಮಿಂಚಿದ್ದ ಸ್ಟೀವನ್ ಸ್ಮಿತ್ ವಿಕೆಟ್ ಕೂಡ ಶಾರ್ದುಲ್ ಪಾಲಾಯಿತು.

ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಟಿ. ನಟರಾಜನ್ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ನಂಬಿಕೆ ಹುಸಿಯಾಗಲಿಲ್ಲ. ಮಾರ್ನಸ್ ಮತ್ತು ಆಸ್ಟನ್ ಅಗರ್​ರ ಎರಡು ವಿಕೆಟ್ ಪಡೆದು ನಟರಾಜನ್ ಮಿಂಚಿದರು.

ಮ್ಯಾಕ್ಸ್​ವೆಲ್ ಮತ್ತು ಝಂಪಾ ವಿಕೆಟ್ ಪಡೆದ ಬುಮ್ರಾ ಕೊನೆಯ ಕ್ಷಣದ ಹೀರೋ ಎನಿಸಿಕೊಂಡರು. 9.3 ಓವರ್ ಎಸೆದ ಬುಮ್ರಾ ಕೇವಲ 43 ರನ್ ಬಿಟ್ಟುಕೊಟ್ಟು ಉತ್ತಮ ಸ್ಥಿರತೆ ಕಾಯ್ದುಕೊಂಡರು.

ಕ್ಯಾಮರಾನ್ ಗ್ರೀನ್ ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಹಾಗೂ ನಾಯಕ ಫಿಂಚ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಜವಾಬ್ದಾರಿಯುತ ಪ್ರದರ್ಶನ ತೋರಿದರು.

ಆಸಿಸ್ ಪರ ನಾಯಕ ಆರೊನ್ ಫಿಂಚ್ ಹೊರತಾಗಿ ಯಾರೂ ತಂಡ ಗೆಲ್ಲುವ ಪ್ರದರ್ಶನ ತೋರಲಿಲ್ಲ. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಸ್ಮಿತ್ ಮತ್ತು ಮಾರ್ನಸ್ ಆಟ ಇಂದು ನಡೆಯಲಿಲ್ಲ. ಮ್ಯಾಕ್ಸ್​ವೆಲ್ ಬ್ಯಾಟಿಂಗ್ ಅಸ್ತ್ರ ಕೈಸೋತಿತು. ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಈ ಪಂದ್ಯದಲ್ಲಿ ಇಲ್ಲದಿದ್ದದ್ದು ಭಾರತಕ್ಕೆ ವರವಾಗಿ ಪರಿಣಮಿಸಿತು.

ಒಟ್ಟಾರೆ, ಭಾರತೀಯ ಎಸೆತಗಾರರು ತೋರಿದ ಸ್ಥಿರ-ಸಂಘಟಿತ ದಾಳಿಯಿಂದ ತಂಡ ಗೆಲ್ಲುವಂತಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯವನ್ನಾದರೂ ಗೆಲ್ಲುವಂತಾಯಿತು. 2-1 ಅಂತರದ ಮೂಲಕ ಭಾರತ ತನ್ನ ಇರುವು ಪ್ರದರ್ಶಿಸುವಂತಾಯಿತು.

AUS vs IND 3RD ODI | ಭಾರತಕ್ಕೆ ಗೆಲುವಿನ ಬುನಾದಿ ಹಾಕಿಕೊಟ್ಟ ಪಾಂಡ್ಯ-ಜಡೇಜ ಜೋಡಿ

Published On - 6:40 pm, Wed, 2 December 20

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!