AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ತಂಡದ ಸ್ವರೂಪವನ್ನು ನಿರ್ಧರಿಸಿಬಿಟ್ಟಿದ್ದಾರೆ!

ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ತಂಡದ ಸ್ವರೂಪವನ್ನು ನಿರ್ಧರಿಸಿಬಿಟ್ಟಿದ್ದಾರೆ!
ರಿಷಭ್ ಪಂತ್ ಮತ್ತು ಕೆ ಎಲ್ ರಾಹುಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 10, 2021 | 7:08 PM

Share

ಐಸಿಸಿ ಟಿ20 ವಿಶ್ವಕಪ್ ಇದೇ ವರ್ಷದ ಅಂತ್ಯದಲ್ಲಿ ಭಾರತ ಆಯೋಜಿಸಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿರದ ವಿಷಯವೆಂದರೆ, ಟೂರ್ನಿ ಆಯೋಜನೆಗೊಳ್ಳಲು ಇನ್ನೂ ಕೆಲ ದಿನಗಳು ಬಾಕಿಯಿರುವಂತೆಯೇ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಭಾರತದ ಪರ ಯಾರು ಆಡಲಿದ್ದಾರೆ ಎನ್ನುವುದನ್ನು ಹೆಚ್ಚು ಕಡಿಮೆ ನಿರ್ಧರಿಸಿಬಿಟ್ಟಿದ್ದಾರೆ. ಟೀಮಿನ ಅಯ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ಸಂಬಂಧಿಸಿರುವ ವಿಷಯವಾದರೂ ಟೂರ್ನಿಯಲ್ಲಿ ಆಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಅವರ ತಲೆಯಲ್ಲಿ ಸಿದ್ಧಗೊಂಡಿದೆ. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

‘ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ನಾನು ಬ್ಯಾಟಿಂಗ್​ ಕೋಚ್ ಆಗಿರುವುದರಿಂದ, ಟೂರ್ನಿಗೆ ಮೊದಲು ಭಾರತದ ಬ್ಯಾಟಿಂಗ್ ಲೈನಪ್ ಸೆಟ್ಲ್ ಅಗಲಿ ಅಂತ ಆಶಿಸುತ್ತೇನೆ. ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿ ಮುಗಿಯುವ ಹೊತ್ತಿಗೆ ಇದೇ ಆಟಗಾರರ ಸೆಟ್ ವಿಶ್ವಕಪ್​ನಲ್ಲಿ ಆಡಲಿದೆ ಎನ್ನುವುದು ನಮಗೆ ಖಾತ್ರಿಯಾಗಬೇಕು,’ ಎಂದು ಕ್ರಿಕೆಟ್ ವೆಬ್​ಸೈಟೊಂದರ ಜೊತೆ ಮಾತಾಡುವಾಗ ರಾಠೋಡ್ ಹೇಳಿದರು.

‘ನಾನಂದುಕೊಳ್ಳುವ ಹಾಗೆ, ಇಂಗ್ಲೆಂಡ್​ ವಿರುದ್ಧದ ಸರಣಿ ಮುಗಿಯುವ ಹೊತ್ತಿಗೆ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಈ ಸರಣಿಯಲ್ಲಿ ಆಡುತ್ತಿರುವ ಟೀಮಿನ ಸದಸ್ಯರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಪ್ರಮೇಯವೇನೂ ಉದ್ಭವಿಸದು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಫಾರ್ಮ್ ಕಳೆದುಕೊಂಡರೆ, ಅಥವಾ ಗಾಯಗೊಂಡರೆ ಮಾತ್ರ ಬದಲಾವಣೆಗಳು ಬೇಕಾಗುತ್ತವೆ. ಬ್ಯಾಟಿಂಗ್ ಯುನಿಟ್​ ದೃಷ್ಟಿಯಿಂದ ಹೇಳಿವುದಾದರೆ, ಅದು ವಿಶ್ವಕಪ್​ಗೆ ಮೊದಲು ಸೆಟ್ಲ್ ಆಗಿರಬೇಕು,’ ಎಂದು ರಾಠೋಡ್ ಹೇಳಿದ್ದಾರೆ.

Vikram Rathour

ಟೀಮ್ ಇಂಡಿಯಾ ಬ್ಯಾಟಿಂಗ್​  ಕೋಚ್ ವಿಕ್ರಮ್ ರಾಠೋಡ್

ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಮತ್ತು ವಿಶ್ವಕಪ್​ಗೆ ಮೊದಲು ಭಾರತದ ಮುಂದಿರುವ ಸಮಸ್ಯೆಯೆಂದರೆ ಯಾರಿಗೆ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಜವಾಬ್ದಾರಿಯನ್ನು ವಹಿಸಬೇಕೆನ್ನುವುದು. ಆಸ್ಟ್ರೇಲಿಯಾದಲ್ಲಿ ಅದನ್ನು ಕರ್ನಾಟಕದ ಕೆ ಎಲ್ ರಾಹುಲ್ ಬಹಳ ಸೊಗಸಾಗಿ ನಿಭಾಯಿಸಿದರು. ಹಾಗೆ ನೋಡಿದರೆ ಅವರಿಗೆ 2020ರಿಂದ ಸದರಿ ಜವಾಬ್ದಾರಿಯನ್ನು ನಿಭಾಯಿಸಲು ಹೇಳಲಾಗುತ್ತಿದೆ. ಆದರೆ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್​ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆ ವಿಕೆಟ್ ಹಿಂದೆಯೂ ಉಲ್ಲೇಖನೀಯ ಪ್ರದರ್ಶಗಳನ್ನು ನೀಡಿದ ರಿಷಭ್ ಪಂತ್ ಟಿ20 ತಂಡಕ್ಕೆ ವಾಪಸ್ಸಾಗಿರುವುದರಿಂದ ಸವಾಲು ಎದುರಾಗಿದೆ ಎಂದು ರಾಠೋಡ್ ಹೇಳಿದ್ದಾರೆ.

‘ವಿಕೆಟ್​ಕೀಪರ್/ಬ್ಯಾಟ್ಸ್​ಮನ್​ ಆಗಿ ರಾಹುಲ್ ಉತ್ತಮ ಪ್ರದರ್ಶಗಳನ್ನು ನೀಡಿದ್ದಾರೆ. ನಿಸ್ಸಂದೇಹವಾಗಿ ಅವರೊಬ್ಬ ಅಪ್ರತಿಮ ಕ್ರಿಕಟರ್. ಉತ್ತಮವಾಗಿ ಬ್ಯಾಟ್​ ಮಾಡುವುದಲ್ಲದೆ ವಿಕೆಟ್​ಗಳ ಹಿಂದೆಯೂ ಯಾರಿಗೂ ಕಮ್ಮಿಯಲ್ಲದಂಥ ಪ್ರದರ್ಶನ ನೀಡಿದರು. ಈಗ ಪಂತ್ ಫಾರ್ಮ್​ಗೆ ಮರಳಿದ್ದಾರೆ ಮತ್ತು ಎರಡೂ ವಿಭಾಗಗಳಲ್ಲಿ ಕಳಂಕರಹಿತ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಮುಂದೆ ಇದು ಹೇಗೆ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕು. ಇಂಥ ಪರಿಸ್ಥಿತಿ ಎದುರಾದಾಗ ಟೀಮ್ ಮ್ಯಾನೇಜ್ಮೆಂಟ್ ಟೀಮಿನ ಸ್ವರೂಪ ಹೇಗಿರಬೇಕೆಂದು ಬಯಸುತ್ತದೆಯೋ ಅದೇ ಆಧಾರದ ಮೇಲೆ ಆಡುವ ಇಲೆವನ್ ಅಂತಿಮಗೊಳಿಸಲಾಗುತ್ತದೆ,’ ಎಂದು ರಾಠೋಡ್ ಹೇಳಿದರು.

ಅವರು ಹೇಳಿದಂತೆ ಆಗಲಿದೆಯೇ ಎನ್ನುವುದನ್ನು ಕಾಡು ನೋಡಬೇಕು.

ಇದನ್ನೂ ಓದಿIndia vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ