AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ತಂಡದ ಸ್ವರೂಪವನ್ನು ನಿರ್ಧರಿಸಿಬಿಟ್ಟಿದ್ದಾರೆ!

ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ತಂಡದ ಸ್ವರೂಪವನ್ನು ನಿರ್ಧರಿಸಿಬಿಟ್ಟಿದ್ದಾರೆ!
ರಿಷಭ್ ಪಂತ್ ಮತ್ತು ಕೆ ಎಲ್ ರಾಹುಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 10, 2021 | 7:08 PM

ಐಸಿಸಿ ಟಿ20 ವಿಶ್ವಕಪ್ ಇದೇ ವರ್ಷದ ಅಂತ್ಯದಲ್ಲಿ ಭಾರತ ಆಯೋಜಿಸಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿರದ ವಿಷಯವೆಂದರೆ, ಟೂರ್ನಿ ಆಯೋಜನೆಗೊಳ್ಳಲು ಇನ್ನೂ ಕೆಲ ದಿನಗಳು ಬಾಕಿಯಿರುವಂತೆಯೇ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಭಾರತದ ಪರ ಯಾರು ಆಡಲಿದ್ದಾರೆ ಎನ್ನುವುದನ್ನು ಹೆಚ್ಚು ಕಡಿಮೆ ನಿರ್ಧರಿಸಿಬಿಟ್ಟಿದ್ದಾರೆ. ಟೀಮಿನ ಅಯ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ಸಂಬಂಧಿಸಿರುವ ವಿಷಯವಾದರೂ ಟೂರ್ನಿಯಲ್ಲಿ ಆಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಅವರ ತಲೆಯಲ್ಲಿ ಸಿದ್ಧಗೊಂಡಿದೆ. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯಲಿರುವ 2021 ಟಿ20 ವಿಶ್ವಕಪ್ ಅಸಲಿಗೆ ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್-19 ಪಿಡುಗುನಿಂದಾಗಿ ಅದನ್ನು ಮುಂದೂಡಿ ಭಾರತದಲ್ಲಿ ಆಯೋಜಿಸಲು ಐಸಿಸಿ ನಿರ್ಧರಿಸಿತು. ರಾಠೋಡ್ ಅವರ ಪ್ರಕಾರ ಇಂಗ್ಲೆಂಡ್ ವಿರುದ್ಧ 5-ಪಂದ್ಯಗಳ ಸರಣಿಯಲ್ಲಿ ಆಡುವ ಆಟಗಾರರರೇ ವಿಶ್ವಕಪ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

‘ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ನಾನು ಬ್ಯಾಟಿಂಗ್​ ಕೋಚ್ ಆಗಿರುವುದರಿಂದ, ಟೂರ್ನಿಗೆ ಮೊದಲು ಭಾರತದ ಬ್ಯಾಟಿಂಗ್ ಲೈನಪ್ ಸೆಟ್ಲ್ ಅಗಲಿ ಅಂತ ಆಶಿಸುತ್ತೇನೆ. ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿ ಮುಗಿಯುವ ಹೊತ್ತಿಗೆ ಇದೇ ಆಟಗಾರರ ಸೆಟ್ ವಿಶ್ವಕಪ್​ನಲ್ಲಿ ಆಡಲಿದೆ ಎನ್ನುವುದು ನಮಗೆ ಖಾತ್ರಿಯಾಗಬೇಕು,’ ಎಂದು ಕ್ರಿಕೆಟ್ ವೆಬ್​ಸೈಟೊಂದರ ಜೊತೆ ಮಾತಾಡುವಾಗ ರಾಠೋಡ್ ಹೇಳಿದರು.

‘ನಾನಂದುಕೊಳ್ಳುವ ಹಾಗೆ, ಇಂಗ್ಲೆಂಡ್​ ವಿರುದ್ಧದ ಸರಣಿ ಮುಗಿಯುವ ಹೊತ್ತಿಗೆ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಈ ಸರಣಿಯಲ್ಲಿ ಆಡುತ್ತಿರುವ ಟೀಮಿನ ಸದಸ್ಯರಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಪ್ರಮೇಯವೇನೂ ಉದ್ಭವಿಸದು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಫಾರ್ಮ್ ಕಳೆದುಕೊಂಡರೆ, ಅಥವಾ ಗಾಯಗೊಂಡರೆ ಮಾತ್ರ ಬದಲಾವಣೆಗಳು ಬೇಕಾಗುತ್ತವೆ. ಬ್ಯಾಟಿಂಗ್ ಯುನಿಟ್​ ದೃಷ್ಟಿಯಿಂದ ಹೇಳಿವುದಾದರೆ, ಅದು ವಿಶ್ವಕಪ್​ಗೆ ಮೊದಲು ಸೆಟ್ಲ್ ಆಗಿರಬೇಕು,’ ಎಂದು ರಾಠೋಡ್ ಹೇಳಿದ್ದಾರೆ.

Vikram Rathour

ಟೀಮ್ ಇಂಡಿಯಾ ಬ್ಯಾಟಿಂಗ್​  ಕೋಚ್ ವಿಕ್ರಮ್ ರಾಠೋಡ್

ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಮತ್ತು ವಿಶ್ವಕಪ್​ಗೆ ಮೊದಲು ಭಾರತದ ಮುಂದಿರುವ ಸಮಸ್ಯೆಯೆಂದರೆ ಯಾರಿಗೆ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಜವಾಬ್ದಾರಿಯನ್ನು ವಹಿಸಬೇಕೆನ್ನುವುದು. ಆಸ್ಟ್ರೇಲಿಯಾದಲ್ಲಿ ಅದನ್ನು ಕರ್ನಾಟಕದ ಕೆ ಎಲ್ ರಾಹುಲ್ ಬಹಳ ಸೊಗಸಾಗಿ ನಿಭಾಯಿಸಿದರು. ಹಾಗೆ ನೋಡಿದರೆ ಅವರಿಗೆ 2020ರಿಂದ ಸದರಿ ಜವಾಬ್ದಾರಿಯನ್ನು ನಿಭಾಯಿಸಲು ಹೇಳಲಾಗುತ್ತಿದೆ. ಆದರೆ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್​ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆ ವಿಕೆಟ್ ಹಿಂದೆಯೂ ಉಲ್ಲೇಖನೀಯ ಪ್ರದರ್ಶಗಳನ್ನು ನೀಡಿದ ರಿಷಭ್ ಪಂತ್ ಟಿ20 ತಂಡಕ್ಕೆ ವಾಪಸ್ಸಾಗಿರುವುದರಿಂದ ಸವಾಲು ಎದುರಾಗಿದೆ ಎಂದು ರಾಠೋಡ್ ಹೇಳಿದ್ದಾರೆ.

‘ವಿಕೆಟ್​ಕೀಪರ್/ಬ್ಯಾಟ್ಸ್​ಮನ್​ ಆಗಿ ರಾಹುಲ್ ಉತ್ತಮ ಪ್ರದರ್ಶಗಳನ್ನು ನೀಡಿದ್ದಾರೆ. ನಿಸ್ಸಂದೇಹವಾಗಿ ಅವರೊಬ್ಬ ಅಪ್ರತಿಮ ಕ್ರಿಕಟರ್. ಉತ್ತಮವಾಗಿ ಬ್ಯಾಟ್​ ಮಾಡುವುದಲ್ಲದೆ ವಿಕೆಟ್​ಗಳ ಹಿಂದೆಯೂ ಯಾರಿಗೂ ಕಮ್ಮಿಯಲ್ಲದಂಥ ಪ್ರದರ್ಶನ ನೀಡಿದರು. ಈಗ ಪಂತ್ ಫಾರ್ಮ್​ಗೆ ಮರಳಿದ್ದಾರೆ ಮತ್ತು ಎರಡೂ ವಿಭಾಗಗಳಲ್ಲಿ ಕಳಂಕರಹಿತ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಮುಂದೆ ಇದು ಹೇಗೆ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕು. ಇಂಥ ಪರಿಸ್ಥಿತಿ ಎದುರಾದಾಗ ಟೀಮ್ ಮ್ಯಾನೇಜ್ಮೆಂಟ್ ಟೀಮಿನ ಸ್ವರೂಪ ಹೇಗಿರಬೇಕೆಂದು ಬಯಸುತ್ತದೆಯೋ ಅದೇ ಆಧಾರದ ಮೇಲೆ ಆಡುವ ಇಲೆವನ್ ಅಂತಿಮಗೊಳಿಸಲಾಗುತ್ತದೆ,’ ಎಂದು ರಾಠೋಡ್ ಹೇಳಿದರು.

ಅವರು ಹೇಳಿದಂತೆ ಆಗಲಿದೆಯೇ ಎನ್ನುವುದನ್ನು ಕಾಡು ನೋಡಬೇಕು.

ಇದನ್ನೂ ಓದಿIndia vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ