ಚಮಕ್​ ನೀಡಿ ಎಸ್ಕೇಪ್​ ಆಗ್ತಿದ್ದ ತ್ರಿಬಲ್​ ರೈಡಿಂಗ್ ಪುಂಡರ ಬೆನ್ನಟ್ಟಿದ BBMP Marshals

ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್​ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್​ ಕೇರ್​ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು […]

ಚಮಕ್​ ನೀಡಿ ಎಸ್ಕೇಪ್​ ಆಗ್ತಿದ್ದ ತ್ರಿಬಲ್​ ರೈಡಿಂಗ್ ಪುಂಡರ ಬೆನ್ನಟ್ಟಿದ BBMP Marshals
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 15, 2020 | 4:20 PM

ಬೆಂಗಳೂರು: ದೇಶಾದ್ಯಂತ ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರಿಸಿದೆ. ಹಾಗಾಗಿ ಈ ಮಹಾಮಾರಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲರೂ ಮಾಸ್ಕ್​ ಧರಿಸಿಕೊಂಡು ಓಡಾಡಬೇಕೆಂದು ನಿಯಮ ಕೂಡ ಜಾರಿ ಮಾಡಿದೆ. ಹಾಗಿದ್ರೂ ಕೂಡ ಕೆಲವರು ಇದಕ್ಕೆ ಡೋಂಟ್​ ಕೇರ್​ ಅನ್ನುತ್ತಾ ಓಡಾಡ್ತಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಇಂಥವರನ್ನು ಹಿಡಿದು ದಂಡ ವಿಧಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಆಶ್ಚರ್ಯವೆಂದರೆ ಕೆಲವು ರಾಜ್ಯಗಳಲ್ಲಿ ಜಮೆಯಾದ ದಂಡದ ಮೊತ್ತ ಕೋಟ್ಯಂತರ ರೂಪಾಯಿಗಳಾಗಿವೆ. ಉದಾಹರಣೆಗೆ ಚಂಡೀಗಢದಲ್ಲಿ 3 ಕೋಟಿ, ಓಡಿಶಾದಲ್ಲಿ 1 ಕೋಟಿ ರೂಪಾಯಿಯಷ್ಟು ದಂಡ ಪಾವತಿಸಿರುವ ಬಗ್ಗೆ ವರದಿಯಾಗಿದೆ.

ತ್ರಿಬಲ್ ರೈಡಿಂಗ್ ಮಾಡ್ತಿದ್ದ ಪುಂಡರ ಹಿಂದೆ ಚೇಸ್​!
ಬೆಂಗಳೂರಿನಲ್ಲೂ ನಮ್ಮ ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್​ ಹಾಕದವರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಹಾಗೆಯೇ ಇಂದೂ ಸಹ ಬ್ಯಾರಿಕೇಡ್​ ಹಾಕಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದರು. ಇದೆ ವೇಳೆ ಬೈಕ್​ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಮೂವರು ಪುಂಡ ಮಹಾಶಯರು ಅಲ್ಲಿಗೆ ಬಂದರು. ಮುಂದಕ್ಕೆ ಸಾಗಿದರೆ ನಮ್ಮನೂ ಹಿಡಿದು ಫೈನ್ ಜಡೀತಾರೆ ಅಂತಾ ಯೋಚಿಸಿ ಹೇಗಾದ್ರೂ ಮಾಡಿ ತಪ್ಪಿಸಿಕೊಳ್ಬೇಕು ಅಂತಾ ಅಲ್ಲೇ ಪ್ಲಾನ್​ ಮಾಡಿದ್ರು. ಬ್ಯಾರಿಕೇಡ್​ ಬಳಿ ಬಂದ ಪುಂಡರನ್ನು ತಡೆಯಲು ಮುಂದಾದ ಮಾರ್ಷಲ್​ಗಳಿಗೆ ಚಮಕ್​ ಕೊಟ್ಟು ಎಸ್ಕೇಪ್​ ಆದರು. ಆದರೆ ತಪ್ಪಿಸಿಕೊಂಡ್ವಿ ಅಂತಾ ಅಂದುಕೊಂಡವರಿಗೆ ಶಾಕ್​ ಕಾದಿತ್ತು. ತಕ್ಷಣವೇ ಮಾರ್ಷಲ್​ಗಳು ಅವರನ್ನು ಬೆನ್ನಟ್ಟಿ ಹಿಡಿದರು.

 

Published On - 1:37 pm, Mon, 15 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us