AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಶುಭಾ ಪೂಂಜಾಗೆ ಕೂಡಿಬಂತು ಕಂಕಣ ಭಾಗ್ಯ!

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನೊಟ್ಟಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೇ ವರ್ಷ ಮದುವೆಗೆ ಸಿದ್ಧತೆ ಮಾಡಿಕೊಂಡಿರೋ ಶುಭಾ, ಕುಟುಂಬಸ್ಥರ ಆಶೀರ್ವಾದದೊಂದಿಗೆ ತಮ್ಮ ನೆಚ್ಚಿನ ಹುಡುಗನನ್ನ ವರಿಸಲಿದ್ದಾರೆ. ಅಂದಹಾಗೆ ಹುಡುಗ ಯಾರು ಗೊತ್ತಾ? ಹೌದು, ನಮ್ಮ ‘ಮೊಗ್ಗಿನ ಮನಸ್ಸಿನ’ ನಟಿಯ ಮನಗೆದ್ದ ಆ ‘ಕಂಠೀರವ’ ಯಾರು ಗೊತ್ತಾ? ಸುಮಂತ್ ಮಹಾಬಲ. ಮಂಗಳೂರು ಮೂಲದ ಬ್ಯುಸಿನೆಸ್​ಮನ್​​ ಆಗಿರುವ ಸುಮಂತ್​ ಜಯಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಂಗ್​ಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ನಟಿ ಶುಭಾ ಪೂಂಜಾಗೆ ಕೂಡಿಬಂತು ಕಂಕಣ ಭಾಗ್ಯ!
ಮದುವೆ ಯಾವಾಗ? ಸುದೀಪ್​ ಎದುರು ಗುಟ್ಟು ಬಿಚ್ಚಿಟ್ಟ ಶುಭಾ ಪೂಂಜಾ
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Jun 15, 2020 | 4:18 PM

Share

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನೊಟ್ಟಿಗೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೇ ವರ್ಷ ಮದುವೆಗೆ ಸಿದ್ಧತೆ ಮಾಡಿಕೊಂಡಿರೋ ಶುಭಾ, ಕುಟುಂಬಸ್ಥರ ಆಶೀರ್ವಾದದೊಂದಿಗೆ ತಮ್ಮ ನೆಚ್ಚಿನ ಹುಡುಗನನ್ನ ವರಿಸಲಿದ್ದಾರೆ.

ಅಂದಹಾಗೆ ಹುಡುಗ ಯಾರು ಗೊತ್ತಾ? ಹೌದು, ನಮ್ಮ ‘ಮೊಗ್ಗಿನ ಮನಸ್ಸಿನ’ ನಟಿಯ ಮನಗೆದ್ದ ಆ ‘ಕಂಠೀರವ’ ಯಾರು ಗೊತ್ತಾ? ಸುಮಂತ್ ಮಹಾಬಲ. ಮಂಗಳೂರು ಮೂಲದ ಬ್ಯುಸಿನೆಸ್​ಮನ್​​ ಆಗಿರುವ ಸುಮಂತ್​ ಜಯಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಂಗ್​ಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Published On - 12:26 pm, Mon, 15 June 20