AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?

ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್​ ಕೇಸ್​​ನಲ್ಲಿ FIR ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?
ಬಿಡಿಎ ಕಚೇರಿ
ಆಯೇಷಾ ಬಾನು
| Edited By: |

Updated on: Mar 02, 2021 | 10:57 AM

Share

ಬೆಂಗಳೂರು: ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್ ಆಗಿರುವ​ ಕೇಸ್​​ನಲ್ಲಿ ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ (FIR)  ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ. ಎಫ್​ಐಆರ್​ನಲ್ಲಿ ಆ ಹೆಸರು ಕೈ ಬಿಡಲು ಕಾರಣವೇನು? ಹೆಸರು ಕೈ ಬಿಡೋದ್ರ ಹಿಂದಿದ್ಯಾ ಪ್ರಭಾವಿಗಳ ಕೈವಾಡ? ಕೈ ಬಿಟ್ಟಿದ್ದು ಯಾರ ಹೆಸರನ್ನ? ಎಂಬುವುದರ ಮಾಹಿತಿ ಇಲ್ಲಿದೆ ಓದಿ.

ಅನಾಥ ಮಕ್ಕಳ ಆಭಿವೃದ್ದಿ ಸಂಘಕ್ಕೆ ನೀಡಿರೋ BDA ಸೈಟನ್ನು ಅಕ್ರಮವಾಗಿ ಅಲಾಟ್ ಮಾಡಿಕೊಂಡಿದ್ದ ಕೇಸ್​​ಗೆ ಸಂಬಂಧಿಸಿ ಬಿಡಿಎನಲ್ಲಿ ಕೆಲಸ ಮಾಡಿದ್ದ ನಾಲ್ವರು ಅಧಿಕಾರಿಗಳಿಗೆ ಬಿಡಿಎ ಆಯುಕ್ತ H.R.ಮಹದೇವ್ ನೋಟಿಸ್ ನೀಡಿದ್ದರು.

FIRನಲ್ಲಿ ಚಿದಾನಂದ ಹೆಸರಿಲ್ಲ.. ಅನಿಲ್ ಕುಮಾರ್​, ಸುಧಾ, ಭಾಸ್ಕರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದೇ ವಿಚಾರ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಆದ್ರೆ ಈಗ ಪೊಲೀಸರ FIR​​ನಲ್ಲಿ ಒಬ್ಬ ಅಧಿಕಾರಿಯ ಹೆಸರೇ ಇಲ್ಲ. ಕೇವಲ ಮೂವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದಾಖಲಾಗಿರೋ FIRನಲ್ಲಿ ಚಿದಾನಂದ ಹೆಸರಿಲ್ಲ.

ಇನ್ನು ಚಿದಾನಂದ ವಿರುದ್ಧ ನೋಟಿಸ್​​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದವು. ನೋಟಿಸ್​​ನಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಸದ್ಯ ಚಿದಾನಂದ ಹೆಸರು ಮಾಯಾವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆ ದೂರಿನಲ್ಲಿ ಚಿದಾನಂದ ಹೆಸರು ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅಷ್ಟೂ ಅಧಿಕಾರಿಗಳಿಗೆ ನೀಡಿರೋ ನೋಟಿಸ್​ನಲ್ಲಿ ಕ್ರಮ ಜರುಗಿಸೋ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್​ಗೆ ಉತ್ತರ ನೀಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈಗ ಎಲ್ಲರ ವಿರುದ್ಧ FIR ದಾಖಲಾಗಿದ್ರು ಒಬ್ಬರ ಹೆಸರು ಮಿಸ್ ಆಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣ: ಸುಮಾರು 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್..!

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್