Sign In

By signing in or creating an account, you agree with Associated Broadcasting Company's Terms & Conditions and Privacy Policy.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?

ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್​ ಕೇಸ್​​ನಲ್ಲಿ FIR ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?
ಬಿಡಿಎ ಕಚೇರಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Mar 02, 2021 | 10:57 AM

ಬೆಂಗಳೂರು: ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್ ಆಗಿರುವ​ ಕೇಸ್​​ನಲ್ಲಿ ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ (FIR)  ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ. ಎಫ್​ಐಆರ್​ನಲ್ಲಿ ಆ ಹೆಸರು ಕೈ ಬಿಡಲು ಕಾರಣವೇನು? ಹೆಸರು ಕೈ ಬಿಡೋದ್ರ ಹಿಂದಿದ್ಯಾ ಪ್ರಭಾವಿಗಳ ಕೈವಾಡ? ಕೈ ಬಿಟ್ಟಿದ್ದು ಯಾರ ಹೆಸರನ್ನ? ಎಂಬುವುದರ ಮಾಹಿತಿ ಇಲ್ಲಿದೆ ಓದಿ.

ಅನಾಥ ಮಕ್ಕಳ ಆಭಿವೃದ್ದಿ ಸಂಘಕ್ಕೆ ನೀಡಿರೋ BDA ಸೈಟನ್ನು ಅಕ್ರಮವಾಗಿ ಅಲಾಟ್ ಮಾಡಿಕೊಂಡಿದ್ದ ಕೇಸ್​​ಗೆ ಸಂಬಂಧಿಸಿ ಬಿಡಿಎನಲ್ಲಿ ಕೆಲಸ ಮಾಡಿದ್ದ ನಾಲ್ವರು ಅಧಿಕಾರಿಗಳಿಗೆ ಬಿಡಿಎ ಆಯುಕ್ತ H.R.ಮಹದೇವ್ ನೋಟಿಸ್ ನೀಡಿದ್ದರು.

FIRನಲ್ಲಿ ಚಿದಾನಂದ ಹೆಸರಿಲ್ಲ.. ಅನಿಲ್ ಕುಮಾರ್​, ಸುಧಾ, ಭಾಸ್ಕರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದೇ ವಿಚಾರ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಆದ್ರೆ ಈಗ ಪೊಲೀಸರ FIR​​ನಲ್ಲಿ ಒಬ್ಬ ಅಧಿಕಾರಿಯ ಹೆಸರೇ ಇಲ್ಲ. ಕೇವಲ ಮೂವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದಾಖಲಾಗಿರೋ FIRನಲ್ಲಿ ಚಿದಾನಂದ ಹೆಸರಿಲ್ಲ.

ಇನ್ನು ಚಿದಾನಂದ ವಿರುದ್ಧ ನೋಟಿಸ್​​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದವು. ನೋಟಿಸ್​​ನಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಸದ್ಯ ಚಿದಾನಂದ ಹೆಸರು ಮಾಯಾವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆ ದೂರಿನಲ್ಲಿ ಚಿದಾನಂದ ಹೆಸರು ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅಷ್ಟೂ ಅಧಿಕಾರಿಗಳಿಗೆ ನೀಡಿರೋ ನೋಟಿಸ್​ನಲ್ಲಿ ಕ್ರಮ ಜರುಗಿಸೋ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್​ಗೆ ಉತ್ತರ ನೀಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈಗ ಎಲ್ಲರ ವಿರುದ್ಧ FIR ದಾಖಲಾಗಿದ್ರು ಒಬ್ಬರ ಹೆಸರು ಮಿಸ್ ಆಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣ: ಸುಮಾರು 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್..!

ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್