AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?

ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್​ ಕೇಸ್​​ನಲ್ಲಿ FIR ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?
ಬಿಡಿಎ ಕಚೇರಿ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Mar 02, 2021 | 10:57 AM

Share

ಬೆಂಗಳೂರು: ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್ ಆಗಿರುವ​ ಕೇಸ್​​ನಲ್ಲಿ ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ (FIR)  ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ. ಎಫ್​ಐಆರ್​ನಲ್ಲಿ ಆ ಹೆಸರು ಕೈ ಬಿಡಲು ಕಾರಣವೇನು? ಹೆಸರು ಕೈ ಬಿಡೋದ್ರ ಹಿಂದಿದ್ಯಾ ಪ್ರಭಾವಿಗಳ ಕೈವಾಡ? ಕೈ ಬಿಟ್ಟಿದ್ದು ಯಾರ ಹೆಸರನ್ನ? ಎಂಬುವುದರ ಮಾಹಿತಿ ಇಲ್ಲಿದೆ ಓದಿ.

ಅನಾಥ ಮಕ್ಕಳ ಆಭಿವೃದ್ದಿ ಸಂಘಕ್ಕೆ ನೀಡಿರೋ BDA ಸೈಟನ್ನು ಅಕ್ರಮವಾಗಿ ಅಲಾಟ್ ಮಾಡಿಕೊಂಡಿದ್ದ ಕೇಸ್​​ಗೆ ಸಂಬಂಧಿಸಿ ಬಿಡಿಎನಲ್ಲಿ ಕೆಲಸ ಮಾಡಿದ್ದ ನಾಲ್ವರು ಅಧಿಕಾರಿಗಳಿಗೆ ಬಿಡಿಎ ಆಯುಕ್ತ H.R.ಮಹದೇವ್ ನೋಟಿಸ್ ನೀಡಿದ್ದರು.

FIRನಲ್ಲಿ ಚಿದಾನಂದ ಹೆಸರಿಲ್ಲ.. ಅನಿಲ್ ಕುಮಾರ್​, ಸುಧಾ, ಭಾಸ್ಕರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದೇ ವಿಚಾರ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಆದ್ರೆ ಈಗ ಪೊಲೀಸರ FIR​​ನಲ್ಲಿ ಒಬ್ಬ ಅಧಿಕಾರಿಯ ಹೆಸರೇ ಇಲ್ಲ. ಕೇವಲ ಮೂವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದಾಖಲಾಗಿರೋ FIRನಲ್ಲಿ ಚಿದಾನಂದ ಹೆಸರಿಲ್ಲ.

ಇನ್ನು ಚಿದಾನಂದ ವಿರುದ್ಧ ನೋಟಿಸ್​​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದವು. ನೋಟಿಸ್​​ನಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಸದ್ಯ ಚಿದಾನಂದ ಹೆಸರು ಮಾಯಾವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆ ದೂರಿನಲ್ಲಿ ಚಿದಾನಂದ ಹೆಸರು ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅಷ್ಟೂ ಅಧಿಕಾರಿಗಳಿಗೆ ನೀಡಿರೋ ನೋಟಿಸ್​ನಲ್ಲಿ ಕ್ರಮ ಜರುಗಿಸೋ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್​ಗೆ ಉತ್ತರ ನೀಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈಗ ಎಲ್ಲರ ವಿರುದ್ಧ FIR ದಾಖಲಾಗಿದ್ರು ಒಬ್ಬರ ಹೆಸರು ಮಿಸ್ ಆಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣ: ಸುಮಾರು 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್..!

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!