AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಯೂಟ (ರಗಳೆ) ಇದ್ದಿದ್ದೇ.. ಇವತ್ತು ಸಹಭೋಜನ ಮಾಡೋಣಾ ಬನ್ನಿ: ಇದು ಬಾಗಲಗುಂಟೆ ಪೊಲೀಸರ ವಿಶೇಷ ಆತಿಥ್ಯ!

ಬೆಂಗಳೂರು: ಬಿಸಿಯೂಟ (ರಗಳೆ) ದಿನಾ ಇದ್ದಿದ್ದೇ.. ಇವತ್ತು ಒಂದು ದಿನ ಸಹಭೋಜನ ಮಾಡೋಣಾ ಬನ್ನಿ ಎಂದು ರಾಜಧಾನಿಯ ಉತ್ತರ ವಿಭಾಗದಲ್ಲಿ ಬಾಗಲಗುಂಟೆ ಪೊಲೀಸ್​ ಠಾಣೆಯ ಆರಕ್ಷಕರು ಆ ಮಹಿಳೆಯರಿಗೆ ಆತ್ಮೀಯ ಆಹ್ವಾನ ನೀಡಿ, ಸಂತೈಸಿದ್ದಾರೆ. ಹಾಗಂತ ಅವರೇನೂ ಅತಿಥಿಗಳು ಅಂತೇನೂ ಅಲ್ಲ. ಪೊಲೀಸರು ಬಯಸದೇ ಬಂದ ಅತಿಥಿಗಳು. ಆದರೂ ಅವರಿಗೆ ಆತಿಥ್ಯ ನೀಡಿ, ಕಳುಹಿಸಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರು ಕನಿಷ್ಠ ಕೂಲಿ ನೀಡುವುದು, ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನಗರದಲ್ಲಿ ಪ್ರತಿಭಟನೆ ಮಾಡಲು […]

ಬಿಸಿಯೂಟ (ರಗಳೆ) ಇದ್ದಿದ್ದೇ.. ಇವತ್ತು ಸಹಭೋಜನ ಮಾಡೋಣಾ ಬನ್ನಿ: ಇದು ಬಾಗಲಗುಂಟೆ ಪೊಲೀಸರ ವಿಶೇಷ ಆತಿಥ್ಯ!
ಸಾಧು ಶ್ರೀನಾಥ್​
|

Updated on:Feb 03, 2020 | 5:31 PM

Share

ಬೆಂಗಳೂರು: ಬಿಸಿಯೂಟ (ರಗಳೆ) ದಿನಾ ಇದ್ದಿದ್ದೇ.. ಇವತ್ತು ಒಂದು ದಿನ ಸಹಭೋಜನ ಮಾಡೋಣಾ ಬನ್ನಿ ಎಂದು ರಾಜಧಾನಿಯ ಉತ್ತರ ವಿಭಾಗದಲ್ಲಿ ಬಾಗಲಗುಂಟೆ ಪೊಲೀಸ್​ ಠಾಣೆಯ ಆರಕ್ಷಕರು ಆ ಮಹಿಳೆಯರಿಗೆ ಆತ್ಮೀಯ ಆಹ್ವಾನ ನೀಡಿ, ಸಂತೈಸಿದ್ದಾರೆ. ಹಾಗಂತ ಅವರೇನೂ ಅತಿಥಿಗಳು ಅಂತೇನೂ ಅಲ್ಲ. ಪೊಲೀಸರು ಬಯಸದೇ ಬಂದ ಅತಿಥಿಗಳು. ಆದರೂ ಅವರಿಗೆ ಆತಿಥ್ಯ ನೀಡಿ, ಕಳುಹಿಸಿದ್ದಾರೆ.

ಬಿಸಿಯೂಟ ಕಾರ್ಯಕರ್ತೆಯರು ಕನಿಷ್ಠ ಕೂಲಿ ನೀಡುವುದು, ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನಗರದಲ್ಲಿ ಪ್ರತಿಭಟನೆ ಮಾಡಲು ಬಂದಿದ್ದರು. ಧರಣಿಗೆ ಆಗಮಿಸಿದ್ದ ಕಾರ್ಯಕರ್ತೆಯರನ್ನ ನಿಯಂತ್ರಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಾರ್ಯಕರ್ತೆಯರ ಜೊತೆ ಪೊಲೀಸ್ ಸಿಬ್ಬಂದಿ ಕೂತು ಊಟ ಸವಿದಿದ್ದಾರೆ.

ಏನಾಯಿತು ಅಂದ್ರೆ.. ಪ್ರತಿಭಟನೆಯಲ್ಲಿ ತೊಡಗಿದ್ದ ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರಗಿ, ಬಾಗಲಕೋಟೆ ಕಡೆಯ ಬಿಸಿಯೂಟ ಕಾರ್ಯಕರ್ತೆಯರನ್ನು ಬಾಗಲಗುಂಟೆ ಮಹಿಳಾ ಪೊಲೀಸರು ವಶಕ್ಕೆ ಪಡೆದರು. ಕರ್ತವ್ಯಕ್ಕೆ ಅನುಗುಣವಾಗಿ ಬಾಗಲಗುಂಟೆ ಮಹಿಳಾ ಪೊಲೀಸ್ ಸಿಬ್ಬಂದಿ ಒಂದಷ್ಟು ಪೊಲೀಸ್​ ಉಪಚಾರದ ನಂತರ ಬಿಸಿಯೂಟ ಕಾರ್ಯಕರ್ತೆಯರ ಜೊತೆ ಉಭಯ ಕುಶಲೋಪರಿಯಲ್ಲಿ ತೊಡಗಿದರು.

ಅವರೊಟ್ಟಿಗೆ ಕೂತು ರೊಟ್ಟಿ ಊಟ ಮಾಡಿದರು. ತಮಾಷೆ ಮಾಡುತ್ತಾ ರೊಟ್ಟಿ, ಚಟ್ನಿ ಪುಡಿ, ಹೋಳಿಗೆ ಊಟವನ್ನು ಹಂಚಿ ತಿನ್ನುತ್ತಾ ಮನಸಾರೆ ಹಗುರವಾದರು. ಅಲ್ಲಾ ಸರ್ಕಾರವಂತೂ ನಮ್ಮ ಮಾತು ಕೇಳೋಮಾತೇ ಇಲ್ಲ. ಆದ್ರೆ ಬೆಂಗಳೂರಿನಲ್ಲಿ ನಮಗೇ ಊಟೋಪಚಾರ ಮಾಡುತ್ತಿದ್ದಾರಲ್ಲಾ, ಅದೂ ಪೊಲೀಸರು! ಎಂದು ಬಿಸಿಯೂಟ ಕಾರ್ಯಕರ್ತೆಯರು ಆಶ್ಚರ್ಯ ಪಡುತ್ತಿರುವಾಗಲೇ ತಿಳಿದುಬಂದ ವಿಷಯ ಅಂದ್ರೆ ಈ ಬಾಗಲಗುಂಟೆ ಮಹಿಳಾ ಪೊಲೀಸರು ಬೇರೆ ಯಾರೋ ಅಲ್ಲ. ಅಲ್ಲಿಂದಲೇ.. ಅಂದ್ರೆ ಅದೇ ಉತ್ತರ ಕರ್ನಾಟಕ ಭಾಗದವರು. ಹಾಗಾಗಿ ಸ್ವಂತ ಊರಿನವರಿಗೆ ಸಹಭೋಜನದ ಸವಿತುತ್ತು ತಿನ್ನಿಸಿ, ಕಳುಹಿಸಿದ್ದಾರೆ.

ಇಷ್ಟಕ್ಕೂ ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳು ಏನೇನು ಅಂದ್ರೆ.. -ಬಿಸಿಯೂಟ ಯೋಜನೆ ಖಾಸಗೀಕರಣ ಬೇಡ -ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡುವ ಆದೇಶವನ್ನ ಸರ್ಕಾರ ಮಾಡಬೇಕು -ನಿವೃತ್ತಿ ವೇತನ ನೀಡಬೇಕು -ಬಿಸಿಯೂಟ ನೌಕರರನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ಖಾಯಂ ಮಾಡಬೇಕು -ಮಕ್ಕಳ ಹಾಜರಾತಿ ಆಧಾರದ ಮೇಲೆ ಅಡುಗೆ ಕೆಲಸದವರನ್ನ ಕೆಲಸದಿಂದ ಕೈ ಬೀಡಬಾರದು -ಬಿಸಿಯೂಟ ನೌಕರರನ್ನ ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು -ಬಿಸಿಯೂಟ ಯೋಜನೆಯನ್ನ 12ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು -ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು -ವಿಶೇಷ ಸಂಧರ್ಭದಲ್ಲಿನ‌ ಕೆಲಸಕ್ಕೆ ವಿಶೇಷ ಭತ್ಯ ನೀಡಬೇಕು -ಸುರಕ್ಷಾ ಭತ್ಯ ಹಾಗೂ ಸ್ವಚ್ಛತಾ ಭತ್ಯ ಒದಗಿಸಬೇಕು -ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನ ಶಿಕ್ಷಕರಿಗೆ ಬಿಡಿಸಿ ಕಾರ್ಯಕರ್ತೆಯರಿಗೆ ನೀಡಬೇಕು -ಹೆರಿಗೆ ರಜಾ ಹೆರಿಗೆ ಭತ್ಯೆ ನೀಡಬೇಕು -ಸಾಮಾಜಿಕ ಭದ್ರತೆಗಾಗಿ ರಾಷ್ಟ್ರೀಯ ಭೀಮಾ ಯೋಜನೆ ಜಾರಿ ಮಾಡಬೇಕು -ಎಲ್ಲ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು.

Published On - 4:44 pm, Mon, 3 February 20

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್