ಲಾಕ್ಡೌನ್ ವೇಳೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ, ದೊಡ್ಡ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಲಾಕ್ಡೌನ್ ವೇಳೆ ಪೊಲೀಸರು ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಪೊಲೀಸರ ಶ್ಲಾಘನೀಯ ಕೆಲಸಕ್ಕೆ ಪುರೋಹಿತ ವೃಂದದವರು ವಿಶೇಷ ಪೂಜೆ ಮಾಡಿದ್ದಾರೆ. ಇದೇ ವೇಳೆ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ಆಶೀರ್ವದಿಸಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನಕ್ಕೂ, ನನಗೂ ಬಾಲ್ಯದಿಂದಲೂ ಸಂಬಂಧವಿದೆ. ಕೊರೊನಾ ಗಂಡಾಂತರದ ಒಂದು ಹಂತದಿಂದ ಪಾರು ಆಗಿದ್ದೇವೆ. ಹೀಗಾಗಿ ಪೊಲೀಸರ ಪರವಾಗಿ ಹಾಗೂ ನನ್ನ ಪರವಾಗಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಪೊಲೀಸ್ […]

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಲಾಕ್ಡೌನ್ ವೇಳೆ ಪೊಲೀಸರು ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಪೊಲೀಸರ ಶ್ಲಾಘನೀಯ ಕೆಲಸಕ್ಕೆ ಪುರೋಹಿತ ವೃಂದದವರು ವಿಶೇಷ ಪೂಜೆ ಮಾಡಿದ್ದಾರೆ. ಇದೇ ವೇಳೆ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ಆಶೀರ್ವದಿಸಿದ್ದಾರೆ.
ದೊಡ್ಡ ಗಣಪತಿ ದೇವಸ್ಥಾನಕ್ಕೂ, ನನಗೂ ಬಾಲ್ಯದಿಂದಲೂ ಸಂಬಂಧವಿದೆ. ಕೊರೊನಾ ಗಂಡಾಂತರದ ಒಂದು ಹಂತದಿಂದ ಪಾರು ಆಗಿದ್ದೇವೆ. ಹೀಗಾಗಿ ಪೊಲೀಸರ ಪರವಾಗಿ ಹಾಗೂ ನನ್ನ ಪರವಾಗಿ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.


Follow Us
