AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೇಡನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ ದೂರ ಪ್ರಯಾಣ ಮಾಡಿ: ಸೆಡಾನ್ ಮೇ ಕಾರ್
ಸೆಡಾನ್ ಕಾರ್
guruganesh bhat
|

Updated on: Dec 18, 2020 | 3:26 PM

Share

ಸಿಂಗಲ್ ಚಾರ್ಜ್​ನಲ್ಲಿ ಒಂದು ರಾತ್ರಿಯಿಡೀ ಪ್ರಯಾಣ ಮಾಡಬಹುದಾದಂಥ ಸೆಡಾನ್ ಮೇ ಕಾರುಗಳು 2021ರ ಹೊತ್ತಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಲಭ್ಯವಾಗಲಿವೆ.

ಸಿಂಗಲ್ ಚಾರ್ಜ್​ನಲ್ಲಿ 504 ಕಿ.ಮೀ. ಕ್ರಮಿಸಬಹುದಾದ ಈ ಎಲೆಕ್ಟ್ರಿಕ್ ಕಾರನ್ನು ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯೊಂದು ತಯಾರಿಸಿದೆ. ಒಂದು ತಾಸಿಗೆ 196 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಕಾರು 96 ಕಿಲೋ ವ್ಯಾಟ್ಸ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್, 200 ಬ್ರೇಕ್ ಹಾರ್ಸ್​ ಪವರ್ ಅನ್ನು (ಬಿಎಚ್​ಪಿ) ಹೊಂದಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 508 ಕಿ.ಮೀ ತನಕವೂ ಕಾರಿನಲ್ಲಿ ಕ್ರಮಿಸಬಹುದಾಗಿದೆ. ‘ನಮ್ಮ ಬ್ಯಾಟರಿ ಪ್ಯಾಕ್ ಟೆಸ್ಟಿಂಗ್ ಸಮಯದಲ್ಲಿ 600 ಕಿ.ಮೀ ತನಕವೂ ಓಡಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕ ಸಾಮರ್ಥ್ಯವುಳ್ಳ ಬ್ಯಾಟರಿ ರೂಪಿಸುವಲ್ಲಿ ಬಹಳ ಶ್ರಮಿಸಿದ್ದೇವೆ. ಈ ಬ್ಯಾಟರಿ ಪ್ಯಾಕ್ 5,000 ಸೆಲ್​ಗಳನ್ನು ಹೊಂದಿದ್ದು ವರ್ಲ್ಡ್ ಲೀಡಿಂಗ್ ಸೇಫ್ಟಿ ಸ್ಟ್ಯಾಂಡರ್ಡ್ ಹೊಂದಿದೆ’ ಎನ್ನುತ್ತಾರೆ ಪ್ರವೈಗ್ ಡೈನಮಿಕ್ಸ್​ನ ಸಹಸಂಸ್ಥಾಪಕರಾದ ಸಿದ್ಧಾರ್ಥ ಬಗ್ರಿ.

ಈ ಕಾರಿನ ತಯಾರಿಕೆಗೆ ತುಸು ಹೆಚ್ಚೇ ಖರ್ಚಾಗುತ್ತದೆ ನಿಜ. ಆದರೆ ತಯಾರಿಸುವ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಕಾರಿನಲ್ಲೇ ನೀವು ಆಫೀಸ್ ಕೆಲಸವನ್ನು ಮಾಡಬಹುದು. 15 ಇಂಚಿನ ಲ್ಯಾಪ್​ಟಾಪ್​ಗೆ ಅನುಕೂಲವಾಗುವಂಥ ಡೆಸ್ಕ್, ಪವರ್ ಪಾಯಿಂಟ್, ಎರಡು ಯುಎಸ್​ಬಿ ಪೋರ್ಟ್​ ಹೊಂದಿದ್ದು ಆಫೀಸು ತಲುಪುವ ತನಕವೂ ನಿರಾಯಾಸವಾಗಿ ಕೆಲಸ ಮಾಡಬಹುದಾಗಿದೆ.

Follow Us
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ