Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!
ದಿವ್ಯಾ-ಬ್ರೋ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on: Mar 08, 2021 | 6:00 PM

 ಬಿಗ್​ ಬಾಸ್​ ಮನೆಯಲ್ಲಿ ಅಭ್ಯರ್ಥಿಗಳು ಮೊದಲ ವಾರವನ್ನು ಕಳೆದಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಧನುಶ್ರೀ ಎಲಿಮಿನೇಷ್​ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಮೊದಲ ವಾರದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದರಲ್ಲಿ ಹೈಲೈಟ್​ ಆಗಿದ್ದು ಲವ್​​ ಸ್ಟೋರಿ ವಿಚಾರ. ದಿವ್ಯಾ ಮೇಲೆ ಬ್ರೋ ಗೌಡ ಹಾಗೂ ಲ್ಯಾಗ್​ ಮಂಜ ಭಾವನೆ ಹೊಂದಿದ್ದರು ಎನ್ನುವ ವಿಚಾರ ಮೊದಲ ವಾರವೇ ಬಹಿರಂಗವಾಗಿತ್ತು. ಈಗ ದಿವ್ಯಾ ಮೇಲಿದ್ದ ಭಾವನೆಗಳನ್ನು ಬ್ರೋ ಗೌಡ ಸುಟ್ಟು ಹಾಕಿದರಂತೆ! ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ. ದಿವ್ಯಾ ಜತೆ ಕೇವಲ ಫ್ರೆಂಡ್​ಶಿಪ್​ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ! ಈ ಬಗ್ಗೆ ಖುದ್ದು ಬ್ರೋ ಗೌಡ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯವರು ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ಬ್ರೋ ಗೌಡ ಕೂತಿದ್ದರು. ದಿವ್ಯಾ ಸುರೇಶ್​ ಮೌನವಾಗಿರುವುದನ್ನು ನೋಡಿದ ದಿವ್ಯಾ ಉರುಡುಗ ಒಂದಷ್ಟು ಬುದ್ಧಿವಾದ ಹೇಳಿದರು. ಬ್ರೋ ಗೌಡ ಜತೆ ಮಾತನಾಡಿ. ಅವರಿಗೆ ನಿಮ್ಮ ಮೇಲೆ ಕ್ರಶ್​​ ಬೇರೆ ಇದೆ. ನೀವು ಮಾತನಾಡಿಲ್ಲ ಎಂದರೆ ಅವರು ಬೇಜಾರ್​ ಮಾಡಿಕೊಳ್ತಾರೆ ಎಂದರು.

ಇದಕ್ಕೆ ಉತ್ತರಿಸಿದ ಬ್ರೋ ಗೌಡ, ದಿವ್ಯಾ ಮೇಲೆ ನನಗೆ ಕ್ರಶ್​ ಇತ್ತು. ಆದರೆ, ಈಗ ಇಲ್ಲ. ಈ ವಿಚಾರವಂತೂ ಸ್ಪಷ್ಟ ಎಂದು ಹೇಳಿದರು. ಈ ಮೂಲಕ ದಿವ್ಯಾ ಬಗ್ಗೆ ಯಾವುದೇ ಭಾವನೆ ಹೊಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಆಗ, ದಿವ್ಯಾ ಸುರೇಶ್​, ಫ್ರೆಂಡ್ಸ್​ ಎಂದು ಬ್ರೋ ಗೌಡಗೆ ಹ್ಯಾಂಡ್​ ಶೇಕ್​ ಮಾಡಿದರು. ಬ್ರೋ ಗೌಡ ಕೂಡ ಹ್ಯಾಂಡ್​ ಶೇಕ್​ ಮಾಡಿದರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ನಿಂದ ಧನುಶ್ರೀ ಔಟ್​! ಎಲಿಮಿನೇಟ್​ ಆಗಿದ್ದಕ್ಕೆ ಇಲ್ಲಿದೆ ಬಲವಾದ ಕಾರಣ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ