AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!
ದಿವ್ಯಾ-ಬ್ರೋ ಗೌಡ
ರಾಜೇಶ್ ದುಗ್ಗುಮನೆ
|

Updated on: Mar 08, 2021 | 6:00 PM

Share

 ಬಿಗ್​ ಬಾಸ್​ ಮನೆಯಲ್ಲಿ ಅಭ್ಯರ್ಥಿಗಳು ಮೊದಲ ವಾರವನ್ನು ಕಳೆದಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಧನುಶ್ರೀ ಎಲಿಮಿನೇಷ್​ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಮೊದಲ ವಾರದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದರಲ್ಲಿ ಹೈಲೈಟ್​ ಆಗಿದ್ದು ಲವ್​​ ಸ್ಟೋರಿ ವಿಚಾರ. ದಿವ್ಯಾ ಮೇಲೆ ಬ್ರೋ ಗೌಡ ಹಾಗೂ ಲ್ಯಾಗ್​ ಮಂಜ ಭಾವನೆ ಹೊಂದಿದ್ದರು ಎನ್ನುವ ವಿಚಾರ ಮೊದಲ ವಾರವೇ ಬಹಿರಂಗವಾಗಿತ್ತು. ಈಗ ದಿವ್ಯಾ ಮೇಲಿದ್ದ ಭಾವನೆಗಳನ್ನು ಬ್ರೋ ಗೌಡ ಸುಟ್ಟು ಹಾಕಿದರಂತೆ! ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ. ದಿವ್ಯಾ ಜತೆ ಕೇವಲ ಫ್ರೆಂಡ್​ಶಿಪ್​ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ! ಈ ಬಗ್ಗೆ ಖುದ್ದು ಬ್ರೋ ಗೌಡ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯವರು ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ಬ್ರೋ ಗೌಡ ಕೂತಿದ್ದರು. ದಿವ್ಯಾ ಸುರೇಶ್​ ಮೌನವಾಗಿರುವುದನ್ನು ನೋಡಿದ ದಿವ್ಯಾ ಉರುಡುಗ ಒಂದಷ್ಟು ಬುದ್ಧಿವಾದ ಹೇಳಿದರು. ಬ್ರೋ ಗೌಡ ಜತೆ ಮಾತನಾಡಿ. ಅವರಿಗೆ ನಿಮ್ಮ ಮೇಲೆ ಕ್ರಶ್​​ ಬೇರೆ ಇದೆ. ನೀವು ಮಾತನಾಡಿಲ್ಲ ಎಂದರೆ ಅವರು ಬೇಜಾರ್​ ಮಾಡಿಕೊಳ್ತಾರೆ ಎಂದರು.

ಇದಕ್ಕೆ ಉತ್ತರಿಸಿದ ಬ್ರೋ ಗೌಡ, ದಿವ್ಯಾ ಮೇಲೆ ನನಗೆ ಕ್ರಶ್​ ಇತ್ತು. ಆದರೆ, ಈಗ ಇಲ್ಲ. ಈ ವಿಚಾರವಂತೂ ಸ್ಪಷ್ಟ ಎಂದು ಹೇಳಿದರು. ಈ ಮೂಲಕ ದಿವ್ಯಾ ಬಗ್ಗೆ ಯಾವುದೇ ಭಾವನೆ ಹೊಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಆಗ, ದಿವ್ಯಾ ಸುರೇಶ್​, ಫ್ರೆಂಡ್ಸ್​ ಎಂದು ಬ್ರೋ ಗೌಡಗೆ ಹ್ಯಾಂಡ್​ ಶೇಕ್​ ಮಾಡಿದರು. ಬ್ರೋ ಗೌಡ ಕೂಡ ಹ್ಯಾಂಡ್​ ಶೇಕ್​ ಮಾಡಿದರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ನಿಂದ ಧನುಶ್ರೀ ಔಟ್​! ಎಲಿಮಿನೇಟ್​ ಆಗಿದ್ದಕ್ಕೆ ಇಲ್ಲಿದೆ ಬಲವಾದ ಕಾರಣ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!