AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!

ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ.

Bigg Boss Kannada | ದಿವ್ಯಾ ಸುರೇಶ್​ ಬಗ್ಗೆ ಇದ್ದ ಭಾವನೆಗಳನ್ನು ಸುಟ್ಟು ಹಾಕಿದ್ರಂತೆ ಬ್ರೋ ಗೌಡ!
ದಿವ್ಯಾ-ಬ್ರೋ ಗೌಡ
ರಾಜೇಶ್ ದುಗ್ಗುಮನೆ
|

Updated on: Mar 08, 2021 | 6:00 PM

Share

 ಬಿಗ್​ ಬಾಸ್​ ಮನೆಯಲ್ಲಿ ಅಭ್ಯರ್ಥಿಗಳು ಮೊದಲ ವಾರವನ್ನು ಕಳೆದಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದ ಧನುಶ್ರೀ ಎಲಿಮಿನೇಷ್​ ಆಗಿ ಮನೆಯಿಂದ ಹೊರ ಹೋಗಿದ್ದಾರೆ. ಮೊದಲ ವಾರದಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದರಲ್ಲಿ ಹೈಲೈಟ್​ ಆಗಿದ್ದು ಲವ್​​ ಸ್ಟೋರಿ ವಿಚಾರ. ದಿವ್ಯಾ ಮೇಲೆ ಬ್ರೋ ಗೌಡ ಹಾಗೂ ಲ್ಯಾಗ್​ ಮಂಜ ಭಾವನೆ ಹೊಂದಿದ್ದರು ಎನ್ನುವ ವಿಚಾರ ಮೊದಲ ವಾರವೇ ಬಹಿರಂಗವಾಗಿತ್ತು. ಈಗ ದಿವ್ಯಾ ಮೇಲಿದ್ದ ಭಾವನೆಗಳನ್ನು ಬ್ರೋ ಗೌಡ ಸುಟ್ಟು ಹಾಕಿದರಂತೆ! ದಿವ್ಯಾ ಮೇಲೆ ನನಗೆ ಕ್ರಶ್​ ಆಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದರು. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆಗೆ ಬಂದಿತ್ತು. ಇದಾದ ಮರುದಿನ ಅಂದರೆ ಸೋಮವಾರ ಬ್ರೋ ಗೌಡ ತಮ್ಮ ನಿರ್ಧಾರ ಬದಲಿಸಿದ್ದಾರೆ. ದಿವ್ಯಾ ಜತೆ ಕೇವಲ ಫ್ರೆಂಡ್​ಶಿಪ್​ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದಾರೆ! ಈ ಬಗ್ಗೆ ಖುದ್ದು ಬ್ರೋ ಗೌಡ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯವರು ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ಬ್ರೋ ಗೌಡ ಕೂತಿದ್ದರು. ದಿವ್ಯಾ ಸುರೇಶ್​ ಮೌನವಾಗಿರುವುದನ್ನು ನೋಡಿದ ದಿವ್ಯಾ ಉರುಡುಗ ಒಂದಷ್ಟು ಬುದ್ಧಿವಾದ ಹೇಳಿದರು. ಬ್ರೋ ಗೌಡ ಜತೆ ಮಾತನಾಡಿ. ಅವರಿಗೆ ನಿಮ್ಮ ಮೇಲೆ ಕ್ರಶ್​​ ಬೇರೆ ಇದೆ. ನೀವು ಮಾತನಾಡಿಲ್ಲ ಎಂದರೆ ಅವರು ಬೇಜಾರ್​ ಮಾಡಿಕೊಳ್ತಾರೆ ಎಂದರು.

ಇದಕ್ಕೆ ಉತ್ತರಿಸಿದ ಬ್ರೋ ಗೌಡ, ದಿವ್ಯಾ ಮೇಲೆ ನನಗೆ ಕ್ರಶ್​ ಇತ್ತು. ಆದರೆ, ಈಗ ಇಲ್ಲ. ಈ ವಿಚಾರವಂತೂ ಸ್ಪಷ್ಟ ಎಂದು ಹೇಳಿದರು. ಈ ಮೂಲಕ ದಿವ್ಯಾ ಬಗ್ಗೆ ಯಾವುದೇ ಭಾವನೆ ಹೊಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು. ಆಗ, ದಿವ್ಯಾ ಸುರೇಶ್​, ಫ್ರೆಂಡ್ಸ್​ ಎಂದು ಬ್ರೋ ಗೌಡಗೆ ಹ್ಯಾಂಡ್​ ಶೇಕ್​ ಮಾಡಿದರು. ಬ್ರೋ ಗೌಡ ಕೂಡ ಹ್ಯಾಂಡ್​ ಶೇಕ್​ ಮಾಡಿದರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ನಿಂದ ಧನುಶ್ರೀ ಔಟ್​! ಎಲಿಮಿನೇಟ್​ ಆಗಿದ್ದಕ್ಕೆ ಇಲ್ಲಿದೆ ಬಲವಾದ ಕಾರಣ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ