AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!

ಧಾರವಾಡ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಬಿಜೆಪಿ ಮುಖಂಡನೊಬ್ಬನ ಜೊತೆ ಸೇರಿ ಪೊಲೀಸರೇ ಜೂಜಾಡಿರುವ ಘಟನೆ ಜಿಲ್ಲೆಯ ಮುಮ್ಮಿಗಟ್ಟಿಯ ಬಳಿ ನಡೆದಿದೆ. ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ ಜೊತೆ ಸೇರಿ ಮುಮ್ಮಿಗಟ್ಟಿಯ ಹೋಟೆಲ್​ವೊಂದರ ಹಿಂಬದಿಯಲ್ಲಿ ಜೂಜಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಜೂಜು ಅಡ್ಡೆಯ ಮೇಲೆ ಗರಗ ಠಾಣೆಯ ಪೊಲೀಸರು ದಾಳಿ ನಡೆಸಿದರು. ಸುತ್ತಮುತ್ತಲ ಮೂರು ಠಾಣೆಗಳ ಪೊಲೀಸರು ಜೂಜಾಟಕ್ಕೆ ಕುಳಿತಿದ್ದರು! DySP ರವಿ ನಾಯ್ಕ್ ನೇತೃತ್ವದಲ್ಲಿ […]

BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!
ಪ್ರಾತಿನಿಧಿಕ ಚಿತ್ರ
KUSHAL V
| Edited By: ಸಾಧು ಶ್ರೀನಾಥ್​|

Updated on: Nov 12, 2020 | 12:32 PM

Share

ಧಾರವಾಡ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಬಿಜೆಪಿ ಮುಖಂಡನೊಬ್ಬನ ಜೊತೆ ಸೇರಿ ಪೊಲೀಸರೇ ಜೂಜಾಡಿರುವ ಘಟನೆ ಜಿಲ್ಲೆಯ ಮುಮ್ಮಿಗಟ್ಟಿಯ ಬಳಿ ನಡೆದಿದೆ.

ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಬಿಜೆಪಿ ಮುಖಂಡ ಅನಿಲ ಉಳವಣ್ಣವರ್ ಜೊತೆ ಸೇರಿ ಮುಮ್ಮಿಗಟ್ಟಿಯ ಹೋಟೆಲ್​ವೊಂದರ ಹಿಂಬದಿಯಲ್ಲಿ ಜೂಜಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಜೂಜು ಅಡ್ಡೆಯ ಮೇಲೆ ಗರಗ ಠಾಣೆಯ ಪೊಲೀಸರು ದಾಳಿ ನಡೆಸಿದರು.

ಸುತ್ತಮುತ್ತಲ ಮೂರು ಠಾಣೆಗಳ ಪೊಲೀಸರು ಜೂಜಾಟಕ್ಕೆ ಕುಳಿತಿದ್ದರು! DySP ರವಿ ನಾಯ್ಕ್ ನೇತೃತ್ವದಲ್ಲಿ ರೇಡ್ ನಡೆಸಲಾಯಿತು. ಅಡ್ಡೆ ಮೇಲೆ ದಾಳಿ ಬೀಳುತ್ತಿದ್ದಂತೆ ಜೂಜಾಡುತ್ತಿದ್ದ ಕೆಲ ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಮತ್ತೆ ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ನಡುವೆ, ಪೊಲೀಸರು ಬಿಜೆಪಿ ಮುಖಂಡ ಅನಿಲ ಉಳವಣ್ಣವರ್​ನ ಅರೆಸ್ಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಸ್ಥಳದಲ್ಲಿದ್ದ 35,050 ರೂಪಾಯಿ ನಗದು ಹಾಗೂ 5 ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.

ದಾಳಿಯಲ್ಲಿ ಸಿಕ್ಕ ಸಿಬ್ಬಂದಿಯೆಲ್ಲಾ ಗರಗ ಠಾಣೆ, ಧಾರವಾಡ ಗ್ರಾಮೀಣ ಠಾಣೆ ಹಾಗೂ DAR ಪಡೆಯ ಪೊಲೀಸರು ಎಂದು ಹೇಳಲಾಗಿದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ