ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಮಗಳ ಮನವಿಗೆ ಸ್ಪಂದಿಸಿದ ರೇಣುಕಾಚಾರ್ಯ

ದಾವಣಗೆರೆ: ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಸಿಎಂಗೆ ಮನವಿ ಮಾಡಿದ್ದ ಬಾಲಕಿಯ ಸಂಕಷ್ಟಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಂದಿಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದ ಎ.ಬಿ.ಹನಮಂತಪ್ಪ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಔಷಧಿಗಾಗಿ ಹನಮಂತಪ್ಪ ಪುತ್ರಿ ನಿಖಿತಾ ಸಿಎಂಗೆ ಮನವಿ ಮಾಡಿದ್ದರು. ಬಾಲಕಿ ಮನವಿ ಹಿನ್ನೆಲೆಯಲ್ಲಿ ಹನಮಂತಪ್ಪ ಮನೆಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಆತ್ಮಸ್ಥೈರ್ಯ ತುಂಬಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ ಮತ್ತು ಔಷಧ ಕೊಡುವಂತೆ ರೇಣುಕಾಚಾರ್ಯ ಸೂಚಿಸಿದ್ದಾರೆ. ನಂತರ ದಾವಣಗೆರೆ ಎಸ್​ಎಸ್ ಆಸ್ಪತ್ರೆಗೆ ಹನಮಂತಪ್ಪಗೆ ಚಿಕಿತ್ಸೆ ನೀಡಲಾಗಿದೆ.

ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಮಗಳ ಮನವಿಗೆ ಸ್ಪಂದಿಸಿದ ರೇಣುಕಾಚಾರ್ಯ
ಸಾಧು ಶ್ರೀನಾಥ್​

Updated on: Apr 18, 2020 | 11:07 AM

ದಾವಣಗೆರೆ: ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಸಿಎಂಗೆ ಮನವಿ ಮಾಡಿದ್ದ ಬಾಲಕಿಯ ಸಂಕಷ್ಟಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಂದಿಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದ ಎ.ಬಿ.ಹನಮಂತಪ್ಪ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಔಷಧಿಗಾಗಿ ಹನಮಂತಪ್ಪ ಪುತ್ರಿ ನಿಖಿತಾ ಸಿಎಂಗೆ ಮನವಿ ಮಾಡಿದ್ದರು.

ಬಾಲಕಿ ಮನವಿ ಹಿನ್ನೆಲೆಯಲ್ಲಿ ಹನಮಂತಪ್ಪ ಮನೆಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಆತ್ಮಸ್ಥೈರ್ಯ ತುಂಬಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ ಮತ್ತು ಔಷಧ ಕೊಡುವಂತೆ ರೇಣುಕಾಚಾರ್ಯ ಸೂಚಿಸಿದ್ದಾರೆ. ನಂತರ ದಾವಣಗೆರೆ ಎಸ್​ಎಸ್ ಆಸ್ಪತ್ರೆಗೆ ಹನಮಂತಪ್ಪಗೆ ಚಿಕಿತ್ಸೆ ನೀಡಲಾಗಿದೆ.

Published On - 11:06 am, Sat, 18 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us