ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಮಗಳ ಮನವಿಗೆ ಸ್ಪಂದಿಸಿದ ರೇಣುಕಾಚಾರ್ಯ

ದಾವಣಗೆರೆ: ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಸಿಎಂಗೆ ಮನವಿ ಮಾಡಿದ್ದ ಬಾಲಕಿಯ ಸಂಕಷ್ಟಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಂದಿಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದ ಎ.ಬಿ.ಹನಮಂತಪ್ಪ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಔಷಧಿಗಾಗಿ ಹನಮಂತಪ್ಪ ಪುತ್ರಿ ನಿಖಿತಾ ಸಿಎಂಗೆ ಮನವಿ ಮಾಡಿದ್ದರು. ಬಾಲಕಿ ಮನವಿ ಹಿನ್ನೆಲೆಯಲ್ಲಿ ಹನಮಂತಪ್ಪ ಮನೆಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಆತ್ಮಸ್ಥೈರ್ಯ ತುಂಬಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ ಮತ್ತು ಔಷಧ ಕೊಡುವಂತೆ ರೇಣುಕಾಚಾರ್ಯ ಸೂಚಿಸಿದ್ದಾರೆ. ನಂತರ ದಾವಣಗೆರೆ ಎಸ್​ಎಸ್ ಆಸ್ಪತ್ರೆಗೆ ಹನಮಂತಪ್ಪಗೆ ಚಿಕಿತ್ಸೆ ನೀಡಲಾಗಿದೆ.

ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಮಗಳ ಮನವಿಗೆ ಸ್ಪಂದಿಸಿದ ರೇಣುಕಾಚಾರ್ಯ

Updated on: Apr 18, 2020 | 11:07 AM

ದಾವಣಗೆರೆ: ಕ್ಯಾನ್ಸರ್ ಪೀಡಿತ ತಂದೆಯ ಔಷಧಿಗಾಗಿ ಸಿಎಂಗೆ ಮನವಿ ಮಾಡಿದ್ದ ಬಾಲಕಿಯ ಸಂಕಷ್ಟಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಂದಿಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರ ಗ್ರಾಮದ ಎ.ಬಿ.ಹನಮಂತಪ್ಪ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಔಷಧಿಗಾಗಿ ಹನಮಂತಪ್ಪ ಪುತ್ರಿ ನಿಖಿತಾ ಸಿಎಂಗೆ ಮನವಿ ಮಾಡಿದ್ದರು.

ಬಾಲಕಿ ಮನವಿ ಹಿನ್ನೆಲೆಯಲ್ಲಿ ಹನಮಂತಪ್ಪ ಮನೆಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಆತ್ಮಸ್ಥೈರ್ಯ ತುಂಬಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ ಮತ್ತು ಔಷಧ ಕೊಡುವಂತೆ ರೇಣುಕಾಚಾರ್ಯ ಸೂಚಿಸಿದ್ದಾರೆ. ನಂತರ ದಾವಣಗೆರೆ ಎಸ್​ಎಸ್ ಆಸ್ಪತ್ರೆಗೆ ಹನಮಂತಪ್ಪಗೆ ಚಿಕಿತ್ಸೆ ನೀಡಲಾಗಿದೆ.

Published On - 11:06 am, Sat, 18 April 20