AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?

ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. ಜನವರಿ 31ರವರೆಗಿದ್ದ ಈ ಆಫರ್​ ಅನ್ನು ಇದೀಗ ಫೆಬ್ರುವರಿ 28ವರೆಗೆ ವಿಸ್ತರಣೆ ಮಾಡಲಾಗಿದೆ.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Feb 03, 2021 | 3:05 PM

Share

ಬೆಂಗಳೂರು: ಎಲ್​ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಮಾಡಲು 692 ರೂಪಾಯಿ ಬೇಕು. ರೀಫಿಲ್ಲಿಂಗ್ ವೇಳೆ ₹ 700 ಕ್ಯಾಶ್​ಬ್ಯಾಕ್ ಸಿಕ್ಕರೆ…! ಎಷ್ಟು ಖುಷಿ ಅಲ್ವಾ?

ಹೌದು, ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಸಿಗುವ ಆಫರ್ ನೀಡಿದೆ ಪೇಟಿಎಂ. ಜನವರಿ 31ರವರೆಗಿದ್ದ ಈ ಆಫರ್ ಇದೀಗ ಫೆ.28ವರೆಗೆ ವಿಸ್ತರಣೆಯಾಗಿದೆ.

ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ? ಪೇಟಿಎಂ ಆ್ಯಪ್​ ಡೌನ್​ಲೋಡ್ ಮಾಡಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮೂಲಕ ₹ 700 ಕ್ಯಾಶ್​ಬ್ಯಾಕ್ ಪಡೆಯಬಹುದಾಗಿದೆ. ಈ ರೀತಿ ಕ್ಯಾಶ್​​ಬ್ಯಾಕ್ ಪಡೆಯಲು ಪೇಟಿಎಂನಲ್ಲಿ ರೀಚಾರ್ಜ್ ಆಯ್ಕೆ ಕ್ಲಿಕ್ ಮಾಡಿ. ಆಮೇಲೆ ಪೇ ಬಿಲ್ಸ್ ಕ್ಲಿಕ್ ಮಾಡಿ, ಸಿಲಿಂಡರ್ ಬುಕ್ ಮಾಡಿ. ಆನಂತರ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಗ್ಗೆ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈ ಮಾಹಿತಿಗಳನ್ನು ತುಂಬಿದ ನಂತರ ಕ್ಯಾಶ್​ಬ್ಯಾಕ್ ಪಡೆಯುವುದಕ್ಕಾಗಿ ಪ್ರೊಮೊ ಕೋಡ್ FIRSTLPG ಎಂದು ನಮೂದಿಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.

ಗಮನಿಸಿ, ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 692 ಇದೆ. ಪೇಟಿಎಂನಲ್ಲಿ ಪ್ರೊಮೊ ಕೋಡ್ ಬಳಸಿ ಮೊದಲ ಬಾರಿ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಹಣ ನಿಮ್ಮ ಪೇಟಿಎಂ ಖಾತೆಗೆ ಜಮೆ ಆಗುತ್ತದೆ.

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಏನು ಲಾಭ? ಹೊಸವರ್ಷದಲ್ಲಿ ಮೊದಲ ಬಾರಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಸಿಗಲಿದೆ. ಬುಕಿಂಗ್ ಮೌಲ್ಯ ಕನಿಷ್ಠ ₹500 ಇರಬೇಕು. ಕ್ಯಾಶ್​ಬ್ಯಾಕ್  ಪಡೆಯಬೇಕಾದರೆ ಹಣಪಾವತಿ ಮಾಡುವ ಹೊತ್ತಲ್ಲಿ ಸಿಗುವ ಸ್ಕ್ರ್ಯಾಚ್ ಕೂಪನ್ ತೆರೆಯಬೇಕು. ಬುಕಿಂಗ್ ಮಾಡಿದ 24 ಗಂಟೆಗಳೊಳಗೆಕ್ಯಾಶ್​ಬ್ಯಾಕ್​ಗಿರುವ ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಒಂದು ವೇಳೆ ನೀವು 24 ಗಂಟೆಗಳೊಳಗೆ ಸ್ಕ್ರ್ಯಾಚ್ ಕಾರ್ಡ್ ತೆರೆಯದೇ ಇದ್ದರೆ, ಕ್ಯಾಶ್ ಬ್ಯಾಕ್ ಮತ್ತು ಆಫರ್ ಸೆಕ್ಷನ್ ಗೆ ಹೋಗಿ ಇದನ್ನು ತೆರೆಯಬಹುದು. ಒಂದೇ ಒಂದು ಬಾರಿ ಮಾತ್ರ ಈ ಆಫರ್ ನ್ನು ಬಳಸಬಹುದು.

ಸೀಮೆಎಣ್ಣೆ ಸಬ್ಸಿಡಿ ರದ್ದು; ಕೇಂದ್ರ ಬಜೆಟ್ ಘೋಷಣೆ

Published On - 2:58 pm, Wed, 3 February 21

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ