AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?

ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. ಜನವರಿ 31ರವರೆಗಿದ್ದ ಈ ಆಫರ್​ ಅನ್ನು ಇದೀಗ ಫೆಬ್ರುವರಿ 28ವರೆಗೆ ವಿಸ್ತರಣೆ ಮಾಡಲಾಗಿದೆ.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Feb 03, 2021 | 3:05 PM

Share

ಬೆಂಗಳೂರು: ಎಲ್​ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಮಾಡಲು 692 ರೂಪಾಯಿ ಬೇಕು. ರೀಫಿಲ್ಲಿಂಗ್ ವೇಳೆ ₹ 700 ಕ್ಯಾಶ್​ಬ್ಯಾಕ್ ಸಿಕ್ಕರೆ…! ಎಷ್ಟು ಖುಷಿ ಅಲ್ವಾ?

ಹೌದು, ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಸಿಗುವ ಆಫರ್ ನೀಡಿದೆ ಪೇಟಿಎಂ. ಜನವರಿ 31ರವರೆಗಿದ್ದ ಈ ಆಫರ್ ಇದೀಗ ಫೆ.28ವರೆಗೆ ವಿಸ್ತರಣೆಯಾಗಿದೆ.

ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ? ಪೇಟಿಎಂ ಆ್ಯಪ್​ ಡೌನ್​ಲೋಡ್ ಮಾಡಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮೂಲಕ ₹ 700 ಕ್ಯಾಶ್​ಬ್ಯಾಕ್ ಪಡೆಯಬಹುದಾಗಿದೆ. ಈ ರೀತಿ ಕ್ಯಾಶ್​​ಬ್ಯಾಕ್ ಪಡೆಯಲು ಪೇಟಿಎಂನಲ್ಲಿ ರೀಚಾರ್ಜ್ ಆಯ್ಕೆ ಕ್ಲಿಕ್ ಮಾಡಿ. ಆಮೇಲೆ ಪೇ ಬಿಲ್ಸ್ ಕ್ಲಿಕ್ ಮಾಡಿ, ಸಿಲಿಂಡರ್ ಬುಕ್ ಮಾಡಿ. ಆನಂತರ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಗ್ಗೆ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈ ಮಾಹಿತಿಗಳನ್ನು ತುಂಬಿದ ನಂತರ ಕ್ಯಾಶ್​ಬ್ಯಾಕ್ ಪಡೆಯುವುದಕ್ಕಾಗಿ ಪ್ರೊಮೊ ಕೋಡ್ FIRSTLPG ಎಂದು ನಮೂದಿಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.

ಗಮನಿಸಿ, ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 692 ಇದೆ. ಪೇಟಿಎಂನಲ್ಲಿ ಪ್ರೊಮೊ ಕೋಡ್ ಬಳಸಿ ಮೊದಲ ಬಾರಿ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಹಣ ನಿಮ್ಮ ಪೇಟಿಎಂ ಖಾತೆಗೆ ಜಮೆ ಆಗುತ್ತದೆ.

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಏನು ಲಾಭ? ಹೊಸವರ್ಷದಲ್ಲಿ ಮೊದಲ ಬಾರಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಸಿಗಲಿದೆ. ಬುಕಿಂಗ್ ಮೌಲ್ಯ ಕನಿಷ್ಠ ₹500 ಇರಬೇಕು. ಕ್ಯಾಶ್​ಬ್ಯಾಕ್  ಪಡೆಯಬೇಕಾದರೆ ಹಣಪಾವತಿ ಮಾಡುವ ಹೊತ್ತಲ್ಲಿ ಸಿಗುವ ಸ್ಕ್ರ್ಯಾಚ್ ಕೂಪನ್ ತೆರೆಯಬೇಕು. ಬುಕಿಂಗ್ ಮಾಡಿದ 24 ಗಂಟೆಗಳೊಳಗೆಕ್ಯಾಶ್​ಬ್ಯಾಕ್​ಗಿರುವ ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಒಂದು ವೇಳೆ ನೀವು 24 ಗಂಟೆಗಳೊಳಗೆ ಸ್ಕ್ರ್ಯಾಚ್ ಕಾರ್ಡ್ ತೆರೆಯದೇ ಇದ್ದರೆ, ಕ್ಯಾಶ್ ಬ್ಯಾಕ್ ಮತ್ತು ಆಫರ್ ಸೆಕ್ಷನ್ ಗೆ ಹೋಗಿ ಇದನ್ನು ತೆರೆಯಬಹುದು. ಒಂದೇ ಒಂದು ಬಾರಿ ಮಾತ್ರ ಈ ಆಫರ್ ನ್ನು ಬಳಸಬಹುದು.

ಸೀಮೆಎಣ್ಣೆ ಸಬ್ಸಿಡಿ ರದ್ದು; ಕೇಂದ್ರ ಬಜೆಟ್ ಘೋಷಣೆ

Published On - 2:58 pm, Wed, 3 February 21

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್