AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?

ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. ಜನವರಿ 31ರವರೆಗಿದ್ದ ಈ ಆಫರ್​ ಅನ್ನು ಇದೀಗ ಫೆಬ್ರುವರಿ 28ವರೆಗೆ ವಿಸ್ತರಣೆ ಮಾಡಲಾಗಿದೆ.

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ವೇಳೆ 700 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Feb 03, 2021 | 3:05 PM

Share

ಬೆಂಗಳೂರು: ಎಲ್​ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಮಾಡಲು 692 ರೂಪಾಯಿ ಬೇಕು. ರೀಫಿಲ್ಲಿಂಗ್ ವೇಳೆ ₹ 700 ಕ್ಯಾಶ್​ಬ್ಯಾಕ್ ಸಿಕ್ಕರೆ…! ಎಷ್ಟು ಖುಷಿ ಅಲ್ವಾ?

ಹೌದು, ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಸಿಗುವ ಆಫರ್ ನೀಡಿದೆ ಪೇಟಿಎಂ. ಜನವರಿ 31ರವರೆಗಿದ್ದ ಈ ಆಫರ್ ಇದೀಗ ಫೆ.28ವರೆಗೆ ವಿಸ್ತರಣೆಯಾಗಿದೆ.

ಕ್ಯಾಶ್​ಬ್ಯಾಕ್ ಪಡೆಯುವುದು ಹೇಗೆ? ಪೇಟಿಎಂ ಆ್ಯಪ್​ ಡೌನ್​ಲೋಡ್ ಮಾಡಿ, ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಮೂಲಕ ₹ 700 ಕ್ಯಾಶ್​ಬ್ಯಾಕ್ ಪಡೆಯಬಹುದಾಗಿದೆ. ಈ ರೀತಿ ಕ್ಯಾಶ್​​ಬ್ಯಾಕ್ ಪಡೆಯಲು ಪೇಟಿಎಂನಲ್ಲಿ ರೀಚಾರ್ಜ್ ಆಯ್ಕೆ ಕ್ಲಿಕ್ ಮಾಡಿ. ಆಮೇಲೆ ಪೇ ಬಿಲ್ಸ್ ಕ್ಲಿಕ್ ಮಾಡಿ, ಸಿಲಿಂಡರ್ ಬುಕ್ ಮಾಡಿ. ಆನಂತರ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಗ್ಗೆ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈ ಮಾಹಿತಿಗಳನ್ನು ತುಂಬಿದ ನಂತರ ಕ್ಯಾಶ್​ಬ್ಯಾಕ್ ಪಡೆಯುವುದಕ್ಕಾಗಿ ಪ್ರೊಮೊ ಕೋಡ್ FIRSTLPG ಎಂದು ನಮೂದಿಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ.

ಗಮನಿಸಿ, ಮೊದಲ ಬಾರಿ ಪೇಟಿಎಂ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಆಫರ್ ಲಭ್ಯ. 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 692 ಇದೆ. ಪೇಟಿಎಂನಲ್ಲಿ ಪ್ರೊಮೊ ಕೋಡ್ ಬಳಸಿ ಮೊದಲ ಬಾರಿ ಸಿಲಿಂಡರ್ ಬುಕ್ ಮಾಡಿದರೆ ಕ್ಯಾಶ್​ಬ್ಯಾಕ್ ಹಣ ನಿಮ್ಮ ಪೇಟಿಎಂ ಖಾತೆಗೆ ಜಮೆ ಆಗುತ್ತದೆ.

ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಏನು ಲಾಭ? ಹೊಸವರ್ಷದಲ್ಲಿ ಮೊದಲ ಬಾರಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಸಿಗಲಿದೆ. ಬುಕಿಂಗ್ ಮೌಲ್ಯ ಕನಿಷ್ಠ ₹500 ಇರಬೇಕು. ಕ್ಯಾಶ್​ಬ್ಯಾಕ್  ಪಡೆಯಬೇಕಾದರೆ ಹಣಪಾವತಿ ಮಾಡುವ ಹೊತ್ತಲ್ಲಿ ಸಿಗುವ ಸ್ಕ್ರ್ಯಾಚ್ ಕೂಪನ್ ತೆರೆಯಬೇಕು. ಬುಕಿಂಗ್ ಮಾಡಿದ 24 ಗಂಟೆಗಳೊಳಗೆಕ್ಯಾಶ್​ಬ್ಯಾಕ್​ಗಿರುವ ಸ್ಕ್ರ್ಯಾಚ್ ಕೂಪನ್ ಸಿಗುತ್ತದೆ. ಒಂದು ವೇಳೆ ನೀವು 24 ಗಂಟೆಗಳೊಳಗೆ ಸ್ಕ್ರ್ಯಾಚ್ ಕಾರ್ಡ್ ತೆರೆಯದೇ ಇದ್ದರೆ, ಕ್ಯಾಶ್ ಬ್ಯಾಕ್ ಮತ್ತು ಆಫರ್ ಸೆಕ್ಷನ್ ಗೆ ಹೋಗಿ ಇದನ್ನು ತೆರೆಯಬಹುದು. ಒಂದೇ ಒಂದು ಬಾರಿ ಮಾತ್ರ ಈ ಆಫರ್ ನ್ನು ಬಳಸಬಹುದು.

ಸೀಮೆಎಣ್ಣೆ ಸಬ್ಸಿಡಿ ರದ್ದು; ಕೇಂದ್ರ ಬಜೆಟ್ ಘೋಷಣೆ

Published On - 2:58 pm, Wed, 3 February 21

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ