
ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಗಲಭೆ ಕೇಸ್ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಗಲಭೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸುವ ಮುನ್ನ ಸಂಪತ್ ರಾಜ್, ಆರೋಪಿಗಳ ಜತೆ ಸಂಪರ್ಕದಲ್ಲಿದ್ದ ಬಗ್ಗೆ ಸುಳಿವು ಸಿಕ್ಕಿದೆ. ಸಂಪತ್ರಾಜ್ ಮತ್ತು ಆರೋಪಿಗಳ ಕರೆ ವಿವರ ಬಹಿರಂಗಗೊಂಡಿದೆ.
ಘಟನೆ ದಿನ ಸಂಜೆ 6ರಿಂದ ತಡರಾತ್ರಿ 2ರವರೆಗೂ ಆರೋಪಿಗಳಾದ ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ, ಅರುಣ್ ಜತೆ ‘ಕೈ’ ಮುಖಂಡ ಸಂಪತ್ರಾಜ್ ದೂರವಾಣಿ ಸಂಪರ್ಕದಲ್ಲಿದ್ದರು. ಇದೇ ಆರೋಪಿಗಳು ಘಟನಾ ಸ್ಥಳದಲ್ಲಿದ್ದದ್ದು ಎಂದು ಟವರ್ ಲೊಕೇಶನ್ ಮೂಲಕ ಸಾಬೀತಾಗಿದೆ.
ಕಾಲ್ ಡಿಟೇಲ್ಸ್ ಹೀಗಿದೆ.
ಕಾಲ್ 1:-
ಸಂಪತ್ ರಾಜ್ ಗಲಭೆ ದಿನ ಸಂಜೆ 6.50ಕ್ಕೆ ಮೊದಲ ಕರೆ ಮಾಡಿದ್ದಾರೆ. ಕಾರು ಚಾಲಕನ ಜತೆ 66 ಸೆಕೆಂಡ್ ಮಾತನಾಡಿದ್ದಾರೆ.
ಕಾಲ್ 2 :-
ಸಂಜೆ 7.8ಕ್ಕೆ ಅದೇ ಕಾರು ಚಾಲಕ ಸಂತೋಷ್ಗೆ ಕರೆ ಮಾಡಿದ್ದಾನೆ. ಚಾಲಕ ಹಾಗೂ ಸಂತೋಷ್ ಮಧ್ಯೆ 148 ಸೆಕೆಂಡ್ ಮಾತುಕತೆ ನಡೆದಿದೆ.
ಕಾಲ್ 3 :-
ಬಳಿಕ 7.17ಕ್ಕೆ ಮುಜಾಹಿದ್ ಪಾಷಾಗೆ ಸಂತೋಷ್ ಕರೆ. ಮುಜಾಹಿದ್ ಪಾಷಾ ಜತೆ ಸಂತೋಷ್ 53 ಸೆಕೆಂಡ್ ಮಾತು.
ಕಾಲ್ 4 :-
7.49ಕ್ಕೆ ಮತ್ತೆ ಚಾಲಕನಿಗೆ ಕರೆ ಮಾಡಿದ್ದ ಸಂಪತ್ ರಾಜ್. ಚಾಲಕನ ಜೊತೆ ಮತ್ತೆ 59 ಸೆಕೆಂಡ್ ಸಂಪತ್ ರಾಜ್ ಮಾತು.
ಕಾಲ್ 5 :-
7.53ಕ್ಕೆ ಯಾಸಿನ್ ಜಾಕೀರ್ಗೆ ಶಫಿ ಉಲ್ಲಾ ಕರೆ. ಯಾಸೀನ್ ಜತೆ 47 ಸೆಕೆಂಡ್ ಮಾತಾಡಿದ್ದ ಶಫಿ ಉಲ್ಲಾ.
ಕಾಲ್ 6 :-
ಬಳಿಕ ವಾಜಿದ್ ಪಾಷಾಗೆ ಕರೆ ಮಾಡಿದ್ದ ಶಫಿ ಉಲ್ಲಾ. ಇವರಿಬ್ಬರು 25 ಸೆಕೆಂಡ್ ಮಾತನಾಡಿದ್ದಾರೆ.
ಕರೆ ನಂ. 7: ಬಳಿಕ ಶಫಿ ಉಲ್ಲಾಗೆ ಜಾಕೀರ್ ಕರೆ ಮಾಡಿದ್ದ. ಜಾಕೀರ್ ಜತೆ ಮಾತಾಡಿ ವಾಜಿದ್ಗೆ ಶಫಿ ಉಲ್ಲಾ ಕರೆ ಈ ಮೂವರ ಮಧ್ಯೆ ಎರಡೆರಡು ಬಾರಿ ಪದೇ ಪದೇ ಕರೆ.
ಕಾಲ್ 8 :-
ರಾತ್ರಿ 8.10ಕ್ಕೆ ಶಫಿ ಉಲ್ಲಾನಿಂದ ವಾಜಿದ್ಗೆ ಕರೆ. ಇಬ್ಬರೂ ಮಾತಾಡಿದ ಒಂದೇ ನಿಮಿಷದ ಬಳಿಕ ಸಂಪತ್ಗೆ ಕರೆ ಮಾಡಿದ್ದಾರೆ. 59 ಸೆಕೆಂಡ್ ಸಂಪತ್ ರಾಜ್ ಜೊತೆ ಶಫಿ ಉಲ್ಲಾ ಮಾತನಾಡಿದ್ದಾನೆ. ಬಳಿಕ ಶಫಿ ಉಲ್ಲಾ, ವಾಜಿದ್, ಜಾಕೀರ್ ಮಧ್ಯೆ ಮತ್ತೆ ಮಾತುಕತೆ ನಡೆದಿದೆ.
ಕಾಲ್ 9 :-
ರಾತ್ರಿ ಎಂಟೂವರೆ ಬಳಿಕ ಜಾಕೀರ್ಗೆ ಮೂರು ಕರೆ
ರಾತ್ರಿ 8.48 ರಿಂದ 9:09 ರ ನಡುವೆ ಮೂರು ಬಾರಿ ಜಾಕೀರ್ಗೆ ಕರೆ ಮಾಡಿ ಸಂಪತ್ ರಾಜ್ 149 ಸೆಕೆಂಡ್ ಮಾತಾಡಿದ್ದರು. ರಾತ್ರಿ 9.9ಕ್ಕೆ 56 ಸೆಕೆಂಡ್ ಮಾತನಾಡಿದ್ದಾರೆ.