AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧನ ಬೆನ್ನಲ್ಲೇ ರೋಷನ್ ಮನೆ ಮೇಲೆ CBI ರೇಡ್, ಪುತ್ರ ರುಮಾನ್ ಕಚೇರಿ ಮೇಲೂ ದಾಳಿ

ಬೆಂಗಳೂರು: ಮಾಜಿ ಸಚಿವ ರೋಷನ್‌ಬೇಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ. ಇದೇ ಬೆನ್ನಲ್ಲೇ ಇಂದು ದೆಹಲಿ ಮೂಲದ ಸಿಬಿಐನ 7 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ರೋಷನ್ ಬೇಗ್ ಪತ್ನಿಗೆ ಅಧಿಕಾರಿಗಳು ರೇಡ್ ಸಂಬಂಧ ಮಾಹಿತಿ ನೀಡ್ತಿದ್ದು ಬೆಂಗಳೂರಿನ ಪುಲಿಕೇಶಿನಗರದ ಕೋಲ್ಸ್‌ ಪಾರ್ಕ್ ಬಳಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರೋಷನ್‌ಬೇಗ್ ಮನೆಯ ಎರಡನೇ ಮಹಡಿಯ ಕೋಣೆಗಳಲ್ಲಿ […]

ಬಂಧನ ಬೆನ್ನಲ್ಲೇ ರೋಷನ್ ಮನೆ ಮೇಲೆ CBI ರೇಡ್, ಪುತ್ರ ರುಮಾನ್ ಕಚೇರಿ ಮೇಲೂ ದಾಳಿ
ಆಯೇಷಾ ಬಾನು
| Edited By: |

Updated on:Nov 23, 2020 | 9:44 AM

Share

ಬೆಂಗಳೂರು: ಮಾಜಿ ಸಚಿವ ರೋಷನ್‌ಬೇಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ.

ಇದೇ ಬೆನ್ನಲ್ಲೇ ಇಂದು ದೆಹಲಿ ಮೂಲದ ಸಿಬಿಐನ 7 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ರೋಷನ್ ಬೇಗ್ ಪತ್ನಿಗೆ ಅಧಿಕಾರಿಗಳು ರೇಡ್ ಸಂಬಂಧ ಮಾಹಿತಿ ನೀಡ್ತಿದ್ದು ಬೆಂಗಳೂರಿನ ಪುಲಿಕೇಶಿನಗರದ ಕೋಲ್ಸ್‌ ಪಾರ್ಕ್ ಬಳಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ರೋಷನ್‌ಬೇಗ್ ಮನೆಯ ಎರಡನೇ ಮಹಡಿಯ ಕೋಣೆಗಳಲ್ಲಿ ಸಿಬಿಐ ಅಧಿಕಾರಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಮನೆಯ ಸದಸ್ಯರಿಗೆ ಕೋಣೆಯೊಂದರಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು ಮನೆಗೆಲಸದವರಿಂದ ಕಚೇರಿ ಕೀ ಪಡೆದ ಸಿಬಿಐ ಅಧಿಕಾರಿಗಳು ಬೇಗ್ ಮನೆಯ ಸೆಲ್ಲರ್​ನಲ್ಲಿರುವ ಕಚೇರಿಯಲ್ಲಿ ಪರಿಶೀಲನೆಯನ್ನು ಮುಂದುವರೆಸಿದ್ದಾರೆ.

ರೋಷನ್  ಪುತ್ರ ರುಮಾನ್ ಕಚೇರಿ ಮೇಲೂ ದಾಳಿ:  IMA ಯಿಂದ ಗ್ರಾಹಕರಿಗೆ ಬಹುಕೋಟಿ ರೂ. ವಂಚನೆ ಕೇಸ್​ನಲ್ಲಿ ರೋಷನ್ ಬೇಗ್ ಪುತ್ರ ರುಮಾನ್ ಕಚೇರಿ ಮೇಲೂ 2 ದಿನಗಳ ಹಿಂದೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿ ರುಮಾನ್ ಬೇಗ್ ಕಚೇರಿ ಇದೆ.

ಇದನ್ನೂ ಓದಿ: ರೋಷನ್​ ಬೇಗ್​ಗೆ 14 ದಿನ ನ್ಯಾಯಾಂಗ​ ಬಂಧನ

Published On - 8:02 am, Mon, 23 November 20

Follow Us
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು