
ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಟೆಸ್ಟಿಂಗ್ ಉಪಕರಣ ಖರೀದಿಯಲ್ಲಿ ಭಾರೀ ಅವ್ಯವವಹಾರ ನಡೆಸಿದೆಯಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮುಖ್ಯಮಂತ್ರಿಗಳ ಆಪ್ತ ಸಚಿವ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಸಂಬಂಧಿ ಅವರಿಗೆ ಉಪಕರಣ ಖರೀದಿ ಕಾಂಟ್ರಾಕ್ಟ್ ಅನ್ನು ನೀಡಲಾಗಿದೆ. ಇದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಸಿದ್ದಾರೆ.
ರಾಜ್ಯ ಸರ್ಕಾರ 630 ವೆಂಟಿಲೇಟರ್ಗಳನ್ನು ಖರೀದಿಸಿದ್ದು, ಇವುಗಳನ್ನು ಬೊಮ್ಮಾಯಿ ಅವರ ಸಂಬಂಧಿ ಮಂಜುವಾಥ್ ಅವರ ಕಂಪನಿಯ ಮೂಲಕ ಖರೀದಿಸಲಾಗಿದೆ. ಆದ್ರೆ ಈ ವೆಂಟಿಲೇಟರ್ಗಳನ್ನು ತಜ್ಞ ಕಂಪನಿಯಿಂದ ಖರೀದಿಸದೇ ಕಳೆದ 40 ವರ್ಷಗಳಿಂದ ಕಾಂಡೋಮ್ ತಯಾರಿಸುತ್ತಿರುವ ಕೇರಳದ ತಿರುವನಂತಪುರಂನ ಎಚ್ ಎಲ್ ಎಲ್ ಆರ್ ಕಂಪನಿಯಿಂದ ಖರೀದಿಸಿದ್ದಾರೆ. ಈ ಕಂಪನಿ ಕೇವಲ ಎರಡು ವರ್ಷಗಳಿಂದ ವೆಂಟಿಲೇಟರ್ಗಳನ್ನು ತಯಾರಿಸುತ್ತಿದೆ ಎನ್ನುವ ಮೂಲಕ ವೆಂಟಿಲೇಟರ್ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಸವರಾಜ್ ಬೊಮ್ಮಾಯಿಯವರು ಮಂಜುನಾಥ್ ತಮ್ಮ ಸಂಬಂಧಿ ಹೌದೋ ಅಲ್ಲವೋ ಎನ್ನುವುದನ್ನ ಸ್ಪಷ್ಟಪಡಿಸಲಿ, ಯಾಕಂದ್ರೆ ಮಂಜುನಾಥ್ ಕೂಡಾ ತಜ್ಞರಲ್ಲ, ಕೇವಲ ಒಬ್ಬ ಲ್ಯಾಬ್ ಟೆಕ್ನಿಶಿಯನ್. ಹೀಗಾಗಿ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ರಾಜ್ಯ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊಟ್ಟ ಲೆಕ್ಕದಲ್ಲಿ ಇದು ನಮೂದು ಆಗಿದೆಯಂದು ಲಕ್ಷ್ಣಣ್ ಆರೋಪಿಸಿದ್ದಾರೆ.