AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲುಪಾಲಾದ ‘ಅಣ್ಣ’​ನ ಜಾಮೀನಿಗಾಗಿ.. ಹಫ್ತಾ ವಸೂಲಿ​ಗೆ ಇಳಿದು.. ಕೊನೆಗೆ ತಾವೇ ಅಂದರ್​ ಆದರು

ಬೆಂಗಳೂರು: ಕೊಲೆ ಕೇಸ್​ನಲ್ಲಿ ಜೈಲಿಪಾಲಾದ ತಮ್ಮ ಗ್ಯಾಂಗ್​ ಲೀಡರ್​ನ ಜಾಮೀನಿನ ಮೇಲೆ ಬಿಡಿಸಲು ಆತನ ಸಹಚರರು ಹಫ್ತಾ ವಸೂಲಿಗೆ ಇಳಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ. ಸದ್ಯ, ಹಫ್ತಾ ವಸೂಲಿಗೆ ಯತ್ನಿಸಿದ್ದ 12 ಆರೋಪಿಗಳನ್ನು ಬಂಧಿಸಲಾಗಿದೆ. ಯಲಹಂಕ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಬಂಧಿತರೆಲ್ಲರೂ ಪಾಲನಹಳ್ಳಿ ಪಾಪಣ್ಣನ ಸಹಚರರು. ಪ್ರಶಾಂತ್ ಕುಮಾರ್, ಸಂಜಯ್, ನವೀನ್, ಮಂಜುನಾಥ ರಮೇಶ್, ಸ್ಯಾಮುಯಲ್, ಉಮೇಶ್, ಸುಬ್ರಮಣಿ, ಮಂಜುನಾಥ, ನಾಗರಾಜ, ರಮೇಶ್, ಸುರೇಶ್ ಬಂಧಿತ ಆರೋಪಿಗಳು. ಏನಿದು ‘ಜಾಮೀನಿಗಾಗಿ ಹಫ್ತಾ ವಸೂಲಿ’ ಪ್ರಕರಣ? ಅಂದ […]

ಜೈಲುಪಾಲಾದ ‘ಅಣ್ಣ’​ನ ಜಾಮೀನಿಗಾಗಿ.. ಹಫ್ತಾ ವಸೂಲಿ​ಗೆ ಇಳಿದು.. ಕೊನೆಗೆ ತಾವೇ ಅಂದರ್​ ಆದರು
KUSHAL V
|

Updated on: Nov 16, 2020 | 6:53 PM

Share

ಬೆಂಗಳೂರು: ಕೊಲೆ ಕೇಸ್​ನಲ್ಲಿ ಜೈಲಿಪಾಲಾದ ತಮ್ಮ ಗ್ಯಾಂಗ್​ ಲೀಡರ್​ನ ಜಾಮೀನಿನ ಮೇಲೆ ಬಿಡಿಸಲು ಆತನ ಸಹಚರರು ಹಫ್ತಾ ವಸೂಲಿಗೆ ಇಳಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ. ಸದ್ಯ, ಹಫ್ತಾ ವಸೂಲಿಗೆ ಯತ್ನಿಸಿದ್ದ 12 ಆರೋಪಿಗಳನ್ನು ಬಂಧಿಸಲಾಗಿದೆ. ಯಲಹಂಕ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಬಂಧಿತರೆಲ್ಲರೂ ಪಾಲನಹಳ್ಳಿ ಪಾಪಣ್ಣನ ಸಹಚರರು. ಪ್ರಶಾಂತ್ ಕುಮಾರ್, ಸಂಜಯ್, ನವೀನ್, ಮಂಜುನಾಥ ರಮೇಶ್, ಸ್ಯಾಮುಯಲ್, ಉಮೇಶ್, ಸುಬ್ರಮಣಿ, ಮಂಜುನಾಥ, ನಾಗರಾಜ, ರಮೇಶ್, ಸುರೇಶ್ ಬಂಧಿತ ಆರೋಪಿಗಳು.

ಏನಿದು ‘ಜಾಮೀನಿಗಾಗಿ ಹಫ್ತಾ ವಸೂಲಿ’ ಪ್ರಕರಣ? ಅಂದ ಹಾಗೆ, ಬಂಧಿತ ಆರೋಪಿಗಳ ಬಾಸ್ ಪಾಲನಹಳ್ಳಿ ಪಾಪಣ್ಣ ಮತ್ತು ಆತನ ಸಹಚರ ಸೈಕೋ ಸೋಮ​ ಕೊಲೆ ಕೇಸ್​ ಒಂದರಲ್ಲಿ ಜೈಲುಪಾಲಾಗಿದ್ದಾರೆ. ಹಾಗಾಗಿ, ತಮ್ಮ ‘ಅಣ್ಣ’ನ ಮತ್ತು ಸೋಮ‌ನನ್ನು ಜಾಮೀನಿನ ಮೇಲೆ ಬಿಡಿಸಲು ಅವರ ಸಹಚರರು ಹಣಕ್ಕಾಗಿ ಹಫ್ತಾ ವಸೂಲಿಗೆ ಇಳಿದಿದ್ದರು. ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದರು. ಅಷ್ಟೇ ಅಲ್ಲ, ಹಣ ನೀಡಲು ಒಪ್ಪದ ರಮೇಶ್ ಎಂಬುವವರಿಗೆ ಚಾಕು ಸಹ ಇರಿದಿದ್ದರು. ಒಟ್ನಲ್ಲಿ, ತಮ್ಮ ‘ಅಣ್ಣ’ನನ್ನ ಬೇಲ್​ ಮೇಲೆ ಬಿಡಿಸಲು ಯತ್ನಿಸಿದ ಆರೋಪಿಗಳು ಇದೀಗ ತಾವೇ ಜೈಲು ಸೇರಲಿದ್ದಾರೆ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ