AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ತನ್ನ ನೋವಿನ ಕಥೆ..

ರಾಮನಗರ: ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಲಾಕ್​ಡೌನ್ ಸಂಪೂರ್ಣವಾಗಿ ತೆರವುಗೊಂಡಿದ್ರು, ಅದರ ಎಫೆಕ್ಟ್ ವ್ಯಾಪಾರಸ್ಥರ ಮೇಲೆ ಈಗಲೂ ಸಹ ಇದೆ. ಅದರಲ್ಲೂ ಚನ್ನಪಟ್ಟಣದ ಬೊಂಬೆ ತಯಾರಕರು ಹಾಗೂ ವ್ಯಾಪಾರಿಗಳ ಪಾಡು ಹೇಳ ತೀರದಾಗಿದೆ. ಕೆಳೋರಿಲ್ಲ ಚನ್ನಪಟ್ಟಣದ ಬೊಂಬೆಗಳನ್ನ ಹೌದು, ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ, ಬೊಂಬೆ ತಯಾರಿಸುವವರು ಹಾಗೂ ಅದರ ಮಾರಾಟ ಮಾಡುವವರ ಬದುಕು […]

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ತನ್ನ ನೋವಿನ ಕಥೆ..
ಸಾಧು ಶ್ರೀನಾಥ್​
|

Updated on:Aug 18, 2020 | 7:38 PM

Share

ರಾಮನಗರ: ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಲಾಕ್​ಡೌನ್ ಸಂಪೂರ್ಣವಾಗಿ ತೆರವುಗೊಂಡಿದ್ರು, ಅದರ ಎಫೆಕ್ಟ್ ವ್ಯಾಪಾರಸ್ಥರ ಮೇಲೆ ಈಗಲೂ ಸಹ ಇದೆ. ಅದರಲ್ಲೂ ಚನ್ನಪಟ್ಟಣದ ಬೊಂಬೆ ತಯಾರಕರು ಹಾಗೂ ವ್ಯಾಪಾರಿಗಳ ಪಾಡು ಹೇಳ ತೀರದಾಗಿದೆ.

ಕೆಳೋರಿಲ್ಲ ಚನ್ನಪಟ್ಟಣದ ಬೊಂಬೆಗಳನ್ನ ಹೌದು, ಚನ್ನಪಟ್ಟಣ ಬೊಂಬೆಗಳು, ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ಧಿ ಪಡೆದಿವೆ. ಮುದ್ದಾದ, ಪುಟಾಣಿ ಬೊಂಬೆಗಳು ಎಂಥವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ, ಬೊಂಬೆ ತಯಾರಿಸುವವರು ಹಾಗೂ ಅದರ ಮಾರಾಟ ಮಾಡುವವರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ ಎಫೆಕ್ಟ್ ನಿಂದಾಗಿ ಬೊಂಬೆಗಳ ಬೇಡಿಕೆ ಕುಸಿದಿದ್ದು ಬದುಕು ಮೂರಾಬಟ್ಟೆಯಾಗಿದೆ.

ಚನ್ನಪಟ್ಟಣದ ಬೊಂಬೆಗಳನ್ನ ಕೇಳುವವರು ಇಲ್ಲದೆ ಬೊಂಬೆ ತಯಾರಿಕರು ಹಾಗೂ ಮಾರಾಟಗಾರರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್​ಡೌನ್​ಗೂ ಮೊದಲು ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದ್ರೆ ಈಗ ಇಡೀ ತಿಂಗಳಲ್ಲಿ ಅಷ್ಟು ವ್ಯಾಪಾರವಾಗುತ್ತಿಲ್ಲ. ಜೊತೆಗೆ ಈಗಾಗಲೇ ಬೇರೆ ಬೇರೆ ಕಡೆಗೆ ರಫ್ತು ಮಾಡಲು ತಯಾರು ಮಾಡಿರುವ ಬೊಂಬೆಗಳಿಗೂ ಕೂಡ ಬೇಡಿಕೆ ಕುಸಿದಿದೆ.

ಖಾಲಿ ಹೊಡೆಯುತ್ತಿವೆ ಬೊಂಬೆ ಅಂಗಡಿಗಳು ಅಂದಹಾಗೆ, ಜಿಲ್ಲೆಯ ಚನ್ನಪಟ್ಟಣದ ಬೊಂಬೆಗಳು ಎಂದರೇ ರಾಜ್ಯ, ದೇಶ, ವಿದೇಶಗಳಲ್ಲು ಕೂಡ ಹೆಸರು ವಾಸಿ. ಹೀಗಾಗಿ, ಚನ್ನಪಟ್ಟಣದ  ಬಳಿಯಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ಬೊಂಬೆ  ಅಂಗಡಿಗಳನ್ನು ನೋಡಬಹುದು.

ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾವಿರಾರು ಜನರು ಬೊಂಬೆಗಳನ್ನ ಖರೀದಿಸಿ ಹೋಗುತ್ತಿದ್ದರು. ಆದ್ರೆ ಈಗ ಕೊರೊನಾ ಕಾಟದಿಂದ  ಅವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಅಂಗಡಿಗಳಲ್ಲಿ ಬೊಂಬೆಗಳನ್ನ ಕೇಳುವವರೇ ಇಲ್ಲದಂತಾಗಿದೆ. ಅಂಗಡಿ ಮಾಲೀಕರು ವ್ಯಾಪಾರವಿಲ್ಲದೆ ಪರದಾಡುತ್ತಿದ್ದಾರೆ.

ಒಟ್ಟಾರೆ, ತಲೆತಲಾಂತರಗಳಿಂದ  ಬೊಂಬೆ ತಯಾರಿಕಾ ಉದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಆಡಿಸಿಯೇ ನೋಡು, ಬೀಳಿಸಿಯೇ ನೋಡು. ಎಂದು ಸೋಲದು, ಸೋತು ತಲೆಯಬಾಗದು ಎನ್ನುತ್ತಿದ್ದ ಚನ್ನಪಟ್ಟಣದ ಬೊಂಬೆ ತಯಾರಿಕಾ ಉದ್ಯಮ ಇದೀಗ ಲಾಕ್​ಡೌನ್​ ಸಂಕಷ್ಟಕ್ಕೆ ತಲೆಬಾಗಿ ಮಣಿಯುವ ಸ್ಥಿತಿ ತಲುಪುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕರಿತು ಆದಷ್ಟು ಬೇಗ ಗಮನ ಹರಿಸಿ ಸೂಕ್ತ ನೆರವು ನೀಡಬೇಕು ಎಂಬು ಇಲ್ಲಿನವರ ಮನವಿ. -ಪ್ರಶಾಂತ್ ಹುಲಿಕೆರೆ

Published On - 7:37 pm, Tue, 18 August 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?