
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಮಯದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಅನಾರೋಗ್ಯ ಉಂಟಾಗಿದೆ. ನಿನ್ನೆಯಿಂದ ಕೇಜ್ರಿವಾಲ್ಗೆ ಜ್ವರ, ಗಂಟಲು ಕಿರಿಕಿರಿ ಕಾಣಿಸಿಕೊಂಡಿದೆ. ಹೀಗಾಗಿ ನಾಳೆ ಬೆಳಗ್ಗೆ ಅರವಿಂದ ಕೇಜ್ರಿವಾಲ್ಗೆ ಕೊರೊನಾ ಟೆಸ್ಟ್ ಮಾಡಲಾಗುತ್ತೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಮಾಡಿದ್ದಾರೆ. ಜ್ವರ ಕಾಣಿಸಿಕೊಂಡ ನಂತರ ಕೇಜ್ರಿವಾಲ್ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ಸದ್ಯ ಮನೆಯಲ್ಲೇ ಐಸೋಲೇಷನ್ಗೆ ಅರವಿಂದ ಕೇಜ್ರಿವಾಲ್ ಒಳಗಾಗಿದ್ದಾರೆ.
Published On - 1:43 pm, Mon, 8 June 20