ಆಪ್ತನಿಗೆ ಕೊರೊನಾ, 3ನೇ ಬಾರಿಗೆ ಸಚಿವ ಡಾ. ಸುಧಾಕರ್ ಕ್ವಾರಂಟೈನ್​

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರನ್ನು ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದ್ದು, ಮತ್ತೆ ಮೂರನೇ ಬಾರಿಗೆ ಕ್ವಾರ‌ಂಟೈನ್ ಆಗಬೇಕಾದ ಅನಿವಾರ್ಯತೆಯಲ್ಲಿ ಡಾ. ಸುಧಾಕರ್ ಇದ್ದಾರೆ ಎನ್ನಲಾಗಿದೆ. ಸಚಿವ ಸುಧಾಕರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಕಾರಣದಿಂದಾಗಿ ಸಚಿವರು ಕ್ವಾರ‌ಂಟೈನ್ ಆಗಲಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವರ ಕಾರ್ಯ ಕ್ಷೇತ್ರವಾದ ವಿಧಾನಸೌಧದ ಮೂರನೇ ಮಹಡಿಯ ಕಚೇರಿ 339 ನ್ನು ಸೀಲ್ ಡೌನ್‌‌‌‌‌ ಮಾಡಲಾಗಿದೆ. ಹಾಗೆಯೇ ಸಚಿವರ ಆಪ್ತ ಸಿಬ್ಬಂದಿ ಇದ್ದ ಕೊಠಡಿ 339 […]

ಆಪ್ತನಿಗೆ ಕೊರೊನಾ, 3ನೇ ಬಾರಿಗೆ ಸಚಿವ ಡಾ. ಸುಧಾಕರ್ ಕ್ವಾರಂಟೈನ್​
ಆರೋಗ್ಯ ಸಚಿವ ಡಾ. ಸುಧಾಕರ್
ಸಾಧು ಶ್ರೀನಾಥ್​ Edited By:

Updated on: Jul 30, 2020 | 2:44 PM

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರನ್ನು ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದ್ದು, ಮತ್ತೆ ಮೂರನೇ ಬಾರಿಗೆ ಕ್ವಾರ‌ಂಟೈನ್ ಆಗಬೇಕಾದ ಅನಿವಾರ್ಯತೆಯಲ್ಲಿ ಡಾ. ಸುಧಾಕರ್ ಇದ್ದಾರೆ ಎನ್ನಲಾಗಿದೆ.

ಸಚಿವ ಸುಧಾಕರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಈ ಕಾರಣದಿಂದಾಗಿ ಸಚಿವರು ಕ್ವಾರ‌ಂಟೈನ್ ಆಗಲಿದ್ದಾರೆ ಎನ್ನಲಾಗಿದೆ. ಜೊತೆಗೆ ಸಚಿವರ ಕಾರ್ಯ ಕ್ಷೇತ್ರವಾದ ವಿಧಾನಸೌಧದ ಮೂರನೇ ಮಹಡಿಯ ಕಚೇರಿ 339 ನ್ನು ಸೀಲ್ ಡೌನ್‌‌‌‌‌ ಮಾಡಲಾಗಿದೆ. ಹಾಗೆಯೇ ಸಚಿವರ ಆಪ್ತ ಸಿಬ್ಬಂದಿ ಇದ್ದ ಕೊಠಡಿ 339 (A) ಕೂಡ ಸೀಲ್ ಡೌನ್‌‌‌‌‌ ಮಾಡಲಾಗಿದೆ.

ಈ ಹಿಂದೆ ಸಚಿವ ಸುಧಾಕರ್ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಿಂದ ಸಚಿವರು ಕ್ವಾರ‌ಂಟೈನ್ ಆಗಿದ್ದರು. ಅದಕ್ಕೂ ಹಿಂದೆ ಅವರ ಆಪ್ತ ವಲಯದಲ್ಲಿ ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ಡಾ. ಸುಧಾಕರ್ ಕ್ವಾರ‌ಂಟೈನ್ ಆಗಿದ್ದರು ಎನ್ನಲಾಗಿದೆ.

Published On - 4:19 pm, Tue, 28 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us