AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು. ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ […]

ಟಿ20 ಕ್ರಿಕೆಟ್​ ಒಲಂಪಿಕ್ ಕ್ರೀಡೆ ಯಾಕಾಗಬಾರದು? ರಾಹುಲ್ ದ್ರಾವಿಡ್ : Dravid bats for T20 Cricket to be Olympic sport
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2020 | 10:38 PM

Share

ಭಾರತದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಬ್ಯಾಟ್​ ಮಾಡುವಾಗ ಹೇಗೆ ಸ್ಟ್ರೇಟ್​ಬ್ಯಾಟ್ ಉಪಯೋಗಿಸುತ್ತಿದರೋ ಅವರ ಮಾತುಗಳು ಸ್ಟ್ರೇಟ್ ಫಾರ್ವರ್ಡ್. ನೇರ ಮಾತು ಮತ್ತು ಯಾವುದೇ ವಿಷಯವನ್ನು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನ ಅವರದ್ದು.

ದ್ರಾವಿಡ್ ಸಕ್ರಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದರೂ ಕ್ರೀಡೆಗೆ ಹಲವಾರು ವಿಧಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೋಚ್ ಆಗಿ, ಐಪಿಎಲ್ ಟೀಮುಗಳಿಗೆ ಮೆಂಟರ್ ಅಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರ ವಿಷಯವಾಗಿ ಮಾತಾಡುತ್ತಿರುವುದಕ್ಕೆ ಕಾರಣಗಳೇ ಬೇಕಿಲ್ಲ. ಅದಕ್ಕೆ ಬೇಕಾದಷ್ಟು ಸರಕು ನಮಗೆ ಸಿಗುತ್ತದೆ. ಈಗಿನ ಸಂದರ್ಭವೇನೆಂದರೆ. ಟಿ20 ಕ್ರಿಕೆಟನ್ನು ಒಲಂಪಿಕ್ಸ್​ಗೆ ಸೇರಿಸಬೇಕೆಂದು ದ್ರಾವಿಡ್ ವಾದಿಸುತ್ತಿದ್ದಾರೆ.

ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಲ್ಲೊಬ್ಬರಾಗಿರುವ ಮನೋಜ್ ಬದಾಲೆ ಅವರ, ‘ಎ ನ್ಯೂ ಇನ್ನಿಂಗ್ಸ್’ ಪುಸ್ತಕ ಲಾಂಚಿನ ವರ್ಚುಅಲ್ ಸೆಮಿನಾರ್​ನಲ್ಲಿ ಭಾಗವಹಿಸಿದ್ದ ದ್ರಾವಿಡ್, ‘ಟಿ20 ಫಾರ್ಮಾಟ್ ಕ್ರಿಕೆಟ್ ಒಲಂಪಿಕ್ಸ್​ನಲ್ಲಿ ಒಂದು ಕ್ರೀಡೆಯಾಗಿ ಸೇರ್ಪಡೆಯಾದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಆದರೆ, ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅದಕ್ಕೇ ಆದ ಸವಾಲುಗಳಿವೆ. ಅದಕ್ಕೆ ನಿರ್ದಿಷ್ಟವಾದ ಕೆಲ ಸೌಲಭ್ಯಗಳು ಬೇಕಾಗುತ್ತವೆ,’ ಎಂದು ದ್ರಾವಿಡ್ ಹೇಳಿದರು.

ಮೊನ್ನೆಯಷ್ಟೇ ಸಂಪನ್ನಗೊಂಡ ಐಪಿಎಲ್ ಟೂರ್ನಿಯ ಅಭೂತಪೂರ್ವ ಯಶಸ್ಸಿಗೆ ಕ್ವಾಲಿಟಿ ಪಿಚ್​ಗಳೇ ಕಾರಣವೆಂದು ದ್ರಾವಿಡ್ ಹೇಳಿದರು.

‘‘ಈ ಸಲದ ಐಪಿಎಲ್ ಭರ್ಜರಿ ಯಶ ಕಂಡಿದ್ದು ಬಹಳ ಸಂತೋಷವಾಗಿದೆ. ಈ ಪ್ರಮಾಣದ ಯಶಸ್ಸು ಅದು ಕಾಣಲು ಸಾಧ್ಯವಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿನ ಕ್ವಾಲಿಟಿ ಪಿಚ್​ಗಳಿಂದ. ಸ್ವಲ್ಪ ಯೋಚಿಸಿ ನೋಡಿ, ಯುಎಈಯಂಥ ಪಿಚ್​ಗಳನ್ನು ಒಲಂಪಿಕ್ಸ್ ಆಯೋಜಿಸುವ ದೇಶ ಒದಗಿಸಬಹುದಾದರೆ, ಕ್ರಿಕೆಟ್ ಅನ್ನು ಯಾಕೆ ಸೇರಿಸಬಾರದು? ಕ್ರಿಕೆಟ್ ಹಾಗೆ ವಿಸ್ತರಣೆಯಾಗುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್​ಗೆ ಸಂಬಂಧಪಟ್ಟವರು, ಅದರ ಆಡಳಿತದಲ್ಲಿರುವವರು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಬೇಕು,’’ ಎಂದು ದ್ರಾವಿಡ್ ಹೇಳಿದರು.

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್