ಜಮೀನಿಗೆ ಹೋದವ ವಿದ್ಯುತ್​ಗೆ ಬಲಿ: ರೈತನ ಸಾವಿಗೆ ಮರುಗಿದ ಜನ

ಹಾವೇರಿ: ಮುಂಗಾರು ಮಳೆ ಶುರುವಾಗಿದೆ. ಆಗಾಗ ಮಳೆರಾಯ ಬರುತ್ತಲೆ ಇದ್ದಾನೆ. ಮಳೆ ಆಗಾಗ ಬರುತ್ತಿರುವುದರಿಂದ ಎಲ್ಲೆಲ್ಲೂ ತೇವಾಂಶವಿದೆ. ಆದರೆ ಜಮೀನಿನಲ್ಲಿದ್ದ ಬೋರ್ ವೆಲ್ ಆನ್​ ಮಾಡಲು ಹೋಗಿದ್ದ ರೈತನೊಬ್ಬನಿಗೆ ಕರೆಂಟ್ ಶಾಕ್ ನೀಡಿದೆ. ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ. ಗ್ರಾಮದ ರೈತ 52 ವರ್ಷದ ಚಂದ್ರಪ್ಪ ಜನಗೇರಿ ಎಂಬಾತ ಬಹಳ ದಿನಗಳ ಕಾಲ ಬೋರ್ ವೆಲ್ ಆನ್​ ಮಾಡದೆ ಬಿಟ್ಟರೆ ತುಕ್ಕು ಹಿಡಿಯುತ್ತದೆ ಎಂದು ಭಾವಿಸಿ ಬೋರ್ ವೆಲ್ ಆನ್​ […]

ಜಮೀನಿಗೆ ಹೋದವ ವಿದ್ಯುತ್​ಗೆ ಬಲಿ: ರೈತನ ಸಾವಿಗೆ ಮರುಗಿದ ಜನ

Updated on: Jul 17, 2020 | 10:16 AM

ಹಾವೇರಿ: ಮುಂಗಾರು ಮಳೆ ಶುರುವಾಗಿದೆ. ಆಗಾಗ ಮಳೆರಾಯ ಬರುತ್ತಲೆ ಇದ್ದಾನೆ. ಮಳೆ ಆಗಾಗ ಬರುತ್ತಿರುವುದರಿಂದ ಎಲ್ಲೆಲ್ಲೂ ತೇವಾಂಶವಿದೆ. ಆದರೆ ಜಮೀನಿನಲ್ಲಿದ್ದ ಬೋರ್ ವೆಲ್ ಆನ್​ ಮಾಡಲು ಹೋಗಿದ್ದ ರೈತನೊಬ್ಬನಿಗೆ ಕರೆಂಟ್ ಶಾಕ್ ನೀಡಿದೆ. ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದಲ್ಲಿ.

ಗ್ರಾಮದ ರೈತ 52 ವರ್ಷದ ಚಂದ್ರಪ್ಪ ಜನಗೇರಿ ಎಂಬಾತ ಬಹಳ ದಿನಗಳ ಕಾಲ ಬೋರ್ ವೆಲ್ ಆನ್​ ಮಾಡದೆ ಬಿಟ್ಟರೆ ತುಕ್ಕು ಹಿಡಿಯುತ್ತದೆ ಎಂದು ಭಾವಿಸಿ ಬೋರ್ ವೆಲ್ ಆನ್​ ಮಾಡಲು ಹೋಗಿದ್ದಾನೆ. ಈ ವೇಳೆ ಬೋರ್ ವೆಲ್​ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿ ತುಂಡಾಗಿ ರೈತನಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಹೀಗಾಗಿ ರೈತ ಚಂದ್ರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೈತನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ರೈತ ಚಂದ್ರಪ್ಪನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕಿದರು. ಸ್ಥಳಕ್ಕೆ ಧಾವಿಸಿದ ಹಾನಗಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

ರೈತರೇ ಎಚ್ಚರಾ ಎಚ್ಚರ
ಈಗ ಮಳೆ ಆಗುತ್ತಿರುವುದರಿಂದ ಭೂಮಿ ತೇವಾಂಶ ಆಗಿರುತ್ತದೆ. ಜೊತೆಗೆ ಮಳೆ ಗಾಳಿಗೆ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುತ್ತವೆ. ಹೀಗಾಗಿ ಮಳೆ ಬರುವ ಸಮಯದಲ್ಲಿ ಬೋರ್ ವೆಲ್ ಸೇರಿದಂತೆ ಜಮೀನಿನಲ್ಲಿರುವ ವಿದ್ಯುತ್ ಉಪಕರಣಗಳನ್ನು ಎಚ್ಚರಿಕೆಯಿಂದ ಮುಟ್ಟಬೇಕಾಗಿದೆ. ಇಲ್ಲದಿದ್ದರೆ ವಿದ್ಯುತ್ ಸ್ಪರ್ಶಿಸಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ರೈತರು ಎಚ್ಚರಿಕೆಯಿಂದ ಜಮೀನಿನಲ್ಲಿ ಕೆಲಸ ಮಾಡಬೇಕಿದೆ.