ರಾಗಿಹಳ್ಳಿ ಬಳಿ ಬೈಕ್ ಚಾಲಕನ ಮೇಲೆ ಆನೆ ದಾಳಿ.. ಗಾಯಾಳು ಆಸ್ಪತ್ರೆಗೆ ದಾಖಲು

ಬೈಕ್ ಸವಾರನ ಮೇಲೆ ಆನೆ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ‌ ಜಿಲ್ಲೆ ಆನೇಕಲ್ ತಾಲೂಕಿನ ರಾಗಿಹಳ್ಳಿಯಲ್ಲಿ ನಡೆದಿದೆ.

ರಾಗಿಹಳ್ಳಿ ಬಳಿ ಬೈಕ್ ಚಾಲಕನ ಮೇಲೆ ಆನೆ ದಾಳಿ.. ಗಾಯಾಳು ಆಸ್ಪತ್ರೆಗೆ ದಾಖಲು
ಗಣೇಶ್ ಮೇಲೆ ಆನೆ ದಾಳಿ
ಆಯೇಷಾ ಬಾನು

Updated on: Dec 06, 2020 | 9:36 AM

ಆನೇಕಲ್: ಬೈಕ್ ಸವಾರನ ಮೇಲೆ ಆನೆ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ‌ ಜಿಲ್ಲೆ ಆನೇಕಲ್ ತಾಲೂಕಿನ ರಾಗಿಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಕೊರಟಗೆರೆ ನಿವಾಸಿ ಗಣೇಶ್ ಎಂಬಾತನ ಕೈ, ಕಾಲಿಗೆ ಗಾಯಗಳಾಗಿವೆ.

ರಾಗಿಹಳ್ಳಿ ಬಹುತೇಕ ಕಾಡು ಪ್ರದೇಶವಾಗಿದೆ. ಹೀಗಾಗಿ ಆಗಾಗ ಅಲ್ಲಿ ಆನೆಗಳ‌ ಎಂಟ್ರಿ ಸರ್ವೇ ಸಾಮಾನ್ಯ. ಅಂದು ಕೂಡ ರಾತ್ರಿ 8ಗಂಟೆಯ ಸಮಯಕ್ಕೆ ಗಜ ರಾಜ ಕತ್ತಲಲ್ಲಿ ಬೈಕ್ ಚಲಾಯಿಸುತ್ತಿದ್ದ ಗಣೇಶ್ ಮೇಲೆ ಒಂದೇ ಸಮನೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಗಣೇಶ್ ಈಗ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆನೆ ದಾಳಿ: ಅರಣ್ಯ ಇಲಾಖೆಯ ಗೂಡ್ಸ್ ಟೆಂಪೋ ಜಖಂ, ಡ್ರೇವರ್​ ಬಚಾವ್!

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us