AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೀಮ್ ಬಳಸಿದರೂ ಕೂದಲು ಬೆಳೆಯಲಿಲ್ಲ! ಜಾಹೀರಾತು ಮಾಡೆಲ್​ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಕೇರಳ, ತ್ರಿಶ್ಶೂರ್​ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ, ಕ್ರೀಮ್ ತಯಾರಕ ಸಂಸ್ಥೆ ಧಾತ್ರಿ ಹೇರ್ ಕ್ರೀಮ್ ಹಾಗೂ ನಟ ಅನೂಪ್ ಮೆನನ್​ಗೆ ತಲಾ 10,000 ರೂಪಾಯಿಗಳ ದಂಡ ವಿಧಿಸಿದೆ.

ಕ್ರೀಮ್ ಬಳಸಿದರೂ ಕೂದಲು ಬೆಳೆಯಲಿಲ್ಲ! ಜಾಹೀರಾತು ಮಾಡೆಲ್​ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಮಲಯಾಳಂ ನಟ ಅನೂಪ್ ಮೆನನ್
TV9 Web
| Edited By: |

Updated on:Apr 06, 2022 | 10:57 PM

Share

ತಿರುವನಂತಪುರ: ಕೂದಲಿಗೆ ಸಂಬಂಧಿಸಿದ ಕ್ರೀಮ್ ಉಪಯೋಗದ ಬಗ್ಗೆ ಪ್ರಮಾಣಿಸಿ ನೋಡದೆ, ಸುಳ್ಳು ಅನುಮೋದನೆ ನೀಡಿದ ಆರೋಪದಲ್ಲಿ, ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮಲಯಾಳಂ ನಟ ಅನೂಪ್ ಮೆನನ್​ರನ್ನು ಹೊಣೆಗಾರರನ್ನಾಗಿಸಿ ಕೇರಳದ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಕೇರಳ, ತ್ರಿಶ್ಶೂರ್​ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ, ಕ್ರೀಮ್ ತಯಾರಕ ಸಂಸ್ಥೆ ಧಾತ್ರಿ ಹೇರ್ ಕ್ರೀಮ್ ಹಾಗೂ ನಟ ಅನೂಪ್ ಮೆನನ್​ಗೆ ತಲಾ 10,000 ರೂಪಾಯಿಗಳ ದಂಡ ವಿಧಿಸಿದೆ. ಗ್ರಾಹಕರಿಗೆ ಸುಳ್ಳು ಭರವಸೆ ನೀಡಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಫ್ರಾನ್ಸಿಸ್ ವಡಕ್ಕನ್ ಎಂಬ ಗ್ರಾಹಕ, ಎ-ಒನ್ ಮೆಡಿಕಲ್ಸ್, ಧಾತ್ರಿ ಆಯುರ್ವೇದ ಪ್ರೈವೇಟ್ ಲಿಮಿಟೆಡ್ ಹಾಗೂ ಅನೂಪ್ ಮೆನನ್ ವಿರುದ್ಧ ನೀಡಿದ ದೂರಿನ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ದೂರುದಾರನ ಪರವಾಗಿ ವಾದ ಮಾಡಿದ ವಕೀಲ ಎ.ಡಿ. ಬೆನ್ನಿ, ತಮ್ಮ ಕಕ್ಷೀದಾರ 2012ರ ಜನವರಿಯಲ್ಲಿ, 376 ರೂಪಾಯಿ ನೀಡಿ ಹೇರ್ ಕ್ರೀಮ್ ಖರೀದಿಸಿದ್ದರು. ಜಾಹೀರಾತಿನಲ್ಲಿ ನಟ ಅನೂಪ್ ಮೆನನ್, ಆರು ವಾರಗಳ ಕಾಲ ಕ್ರೀಮ್ ಬಳಸಿದರೆ ಉದ್ದ ಕೂದಲು ಬೆಳೆಯುತ್ತದೆ ಎಂದು ಹೇಳಿದ್ದರು. ಆದ್ದರಿಂದ, ಕ್ರೀಮ್ ಬಳಕೆ ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.

ಕ್ರೀಮ್ ಬಳಸಿದ ಬಳಿಕವೂ ತಲೆಕೂದಲಿನಲ್ಲಿ ಯಾವುದೇ ಬೆಳವಣಿಗೆ ಕಂಡುಬರಲಿಲ್ಲ. ಬಳಿಕ, ಆ ಕ್ರೀಮ್ ಬಳಸಿರುವ ಬಗ್ಗೆ ಕುಟುಂಬದ ಸದಸ್ಯರು ಹಾಗೂ ಗೆಳೆಯರು ಅಪಹಾಸ್ಯ ಮಾಡಿದ್ದರು. ಜಾಹೀರಾತು ನಂಬಿ ಮೋಸ ಹೋಗಿದ್ದಿ ಎಂದು ಹೇಳಿ ತಮಾಷೆ ಮಾಡಿದ್ದರು. ಇದರಿಂದ ನೊಂದ ಬಳಕೆದಾರ, 5 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಕೋರಿ ಬಳಕೆದಾರರ ವೇದಿಕೆಯ ಮೆಟ್ಟಿಲೇರಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನೂಪ್ ಮೆನನ್, ನಾನು ಹೇರ್ ಕ್ರೀಮ್ ಬಳಸಿಲ್ಲ. ತಾಯಿ ತಯಾರಿಸಿದ ಎಣ್ಣೆಯನ್ನು ಮಾತ್ರ ಬಳಸುತ್ತೇನೆ ಎಂದು ಹೇಳಿದ್ದಾರೆ. ಈ ಉತ್ಪನ್ನವನ್ನು ಕೂದಲಿನ ಆರೈಕೆಗೆ ತಯಾರಿಸಲಾಗಿದೆ ಎಂದು ನಾನು ಭಾವಿಸಿದ್ದೆ. ಕೂದಲು ಬೆಳವಣಿಗೆಗೆ ಎಂದು ತಿಳಿದಿರಲಿಲ್ಲ ಎಂದೂ ಅನೂಪ್ ಹೇಳಿಕೆ ನೀಡಿದ್ದಾರೆ.

ಈ ದೂರಿನಲ್ಲಿ ಆಯುರ್ವೇದ ಔಷಧಗಳನ್ನು ಪ್ರಶ್ನಿಸುತ್ತಿಲ್ಲ. ಆದರೆ, ಕ್ರೀಮ್ ಜಾಹೀರಾತಿನಲ್ಲಿ ಭರವಸೆ ನೀಡಿದಂಥಾ ಫಲಿತಾಂಶ ದೊರೆತಿಲ್ಲ ಎಂದು ಬಳಕೆದಾರರ ವೇದಿಕೆ ಆರೋಪಿಸಿದೆ.

ಕಸ ಗುಡಿಸುವ ಕೆಲಸದಿಂದ ಪಂಚಾಯತ್ ಅಧ್ಯಕ್ಷೆ ಹುದ್ದೆಯೇರಿದ ಕೇರಳದ ಮಹಿಳೆ

Published On - 5:24 pm, Tue, 5 January 21

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ