AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಟ್ಟ ಗಾಯದಿಂದ ತಾಯಿ, ಮಗು ಚೀರಾಟ: ತುರ್ತು ಚಿಕಿತ್ಸೆಗೆ ಸತಾಯಿಸಿದ ಜಿಮ್ಸ್ ವಿರುದ್ಧ ಸಂಬಂಧಿಕರ ಆಕ್ರೋಶ

ಗದಗ: ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಸರ್ಕಾರ ಕೂಡ ಬಡವರಿಗೆ ಒಳ್ಳೆಯ ಚಿಕಿತ್ಸೆ ನೀಡಲಿ ಅಂತ ಕೋಟಿ ಕೋಟಿ ಅನುದಾನ ನೀಡುತ್ತೆ. ಆದ್ರೆ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ನಿನ್ನೆ ನಡೆದುಕೊಂಡ ರೀತಿ ಮಾತ್ರ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ತುರ್ತು ಚಿಕಿತ್ಸೆಗೆ ಅಂತಾ ಆಸ್ಪತ್ರೆಗೆ ಬಂದ ಆ ತಾಯಿ, ಮಗು ನರಳಾಟ ನೋಡಿ ಕೂಡ ಸುಮ್ಮನಿದ್ರೂ ಅಂದ್ರೆ ಅವರಿಗೆ ಮಾನವೀಯತೆ ಅನ್ನೋದೆ ಇಲ್ವಾ ಅನ್ನೋ ಪ್ರಶ್ನೆ ಹುಟ್ಟುತ್ತೆ. ತಾಯಿ ದೇಹದ ತುಂಬೆಲ್ಲಾ ಸುಟ್ಟಿರೋ ಗಾಯ.. […]

ಸುಟ್ಟ ಗಾಯದಿಂದ ತಾಯಿ, ಮಗು ಚೀರಾಟ: ತುರ್ತು ಚಿಕಿತ್ಸೆಗೆ ಸತಾಯಿಸಿದ ಜಿಮ್ಸ್ ವಿರುದ್ಧ ಸಂಬಂಧಿಕರ ಆಕ್ರೋಶ
ಆಯೇಷಾ ಬಾನು
|

Updated on:Oct 30, 2020 | 7:53 AM

Share

ಗದಗ: ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಸರ್ಕಾರ ಕೂಡ ಬಡವರಿಗೆ ಒಳ್ಳೆಯ ಚಿಕಿತ್ಸೆ ನೀಡಲಿ ಅಂತ ಕೋಟಿ ಕೋಟಿ ಅನುದಾನ ನೀಡುತ್ತೆ. ಆದ್ರೆ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ನಿನ್ನೆ ನಡೆದುಕೊಂಡ ರೀತಿ ಮಾತ್ರ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ತುರ್ತು ಚಿಕಿತ್ಸೆಗೆ ಅಂತಾ ಆಸ್ಪತ್ರೆಗೆ ಬಂದ ಆ ತಾಯಿ, ಮಗು ನರಳಾಟ ನೋಡಿ ಕೂಡ ಸುಮ್ಮನಿದ್ರೂ ಅಂದ್ರೆ ಅವರಿಗೆ ಮಾನವೀಯತೆ ಅನ್ನೋದೆ ಇಲ್ವಾ ಅನ್ನೋ ಪ್ರಶ್ನೆ ಹುಟ್ಟುತ್ತೆ.

ತಾಯಿ ದೇಹದ ತುಂಬೆಲ್ಲಾ ಸುಟ್ಟಿರೋ ಗಾಯ.. ಸುಟ್ಟ ಗಾಯದಿಂದ ನರಳಾಡುತ್ತಿರುವ ಮಗು.. ಌಂಬುಲೆನ್ಸ್‌ನಲ್ಲೂ ನರಳಾಟ.. ಸ್ಟ್ರೇಚ್ಚರ್ ಮೇಲೂ ಕಣ್ಣೀರು ಹಾಕುತ್ತಾ ನೋವಿನಿಂದ ನರಳಾಡುತ್ತಿರುವ ತಾಯಿ.

ಇವರ ಈ ಸ್ಥಿತಿಗೆ ಕಾರಣವಾಗಿದ್ದು ನಿನ್ನೆ ಮಧ್ಯಾಹ್ನ ಸಂಭವಿಸಿದ ಬೈಕ್ ಅಪಘಾತ. ಅಂದಹಾಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ರಸ್ತೆಯಲ್ಲಿ ನಾಗರಾಜ್ ಅನ್ನೋರು ತಮ್ಮ ಸಂಬಂಧಿ ಅಕ್ಕಮಹಾದೇವಿ ಹಾಗೂ ಆಕೆಯ ಮಗುವನ್ನು ಕರೆದುಕೊಂಡು ಬೈಕ್‌ನಲ್ಲಿ ಹೊರಟಿದ್ದಾರೆ. ಈ ವೇಳೆ ರಸ್ತೆ ಬದಿಯಲ್ಲಿ ಕಟ್ಟಿಗೆಗೆ ಹಚ್ಚಲಾಗಿದ್ದ ಬೆಂಕಿ ಧಗಧಗಿಸಿ ರಸ್ತೆ ಕಾಣದಷ್ಟು ಹೊಗೆ ಎದ್ದಿದೆ. ಹೀಗಿದ್ರೂ ಅದೇ ರಸ್ತೆಯಲ್ಲಿ ಸಾಗಿದ ಬೈಕ್ ಸ್ಕಿಡ್ ಆಗಿದೆ. ಬೈಕ್ ಸಮೇತ ಮೂವರು ಬೆಂಕಿಯೊಳಗೆ ಬಿದ್ದಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ಌಂಬುಲೆನ್ಸ್ ಬಂದಿದೆ. ತಾಯಿ, ಮಗುವನ್ನು ಕರೆದುಕೊಂಡು ಗದಗ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡದೆ ಸತಾಯಿಸಿದ್ದಾರೆ. ಡಾಕ್ಟರ್ ಇಲ್ಲದೇ ತಾಯಿ, ಮಗು ಇಬ್ಬರು ಆ್ಯಂಬುಲೆನ್ಸ್​ನಲ್ಲೇ ನರಳಾಡಿದ್ದಾರೆ. ತಾಯಿ, ಮಗುವಿಗೆ ಚಿಕಿತ್ಸೆ ನೀಡಿ ಬೇಗ ಎಂದಿದ್ದಕ್ಕೆ ಸಂಬಂಧಿಕರಿಗೆ ವೈದ್ಯ ವಿದ್ಯಾರ್ಥಿಗಳು ಅವಾಜ್ ಹಾಕಿದ್ದಾರೆ. ಕೊನೆಗೆ ಸಂಬಂಧಿಕರೇ ತಾಯಿ ಮಗುವನ್ನ ಸ್ಟ್ರೆಚ್ಚರ್‌ನಲ್ಲಿ ಮಲಗಿಸಿ ತುರ್ತು ಚಿಕಿತ್ಸಾ ಘಟಕಕ್ಕೆ ಶಿಫ್ಟ್ ಮಾಡಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಂಬಂಧಿಕರು ಕಿಡಿಕಾರಿದ್ದಾರೆ.

ಇನ್ನು ಬೆಂಕಿ ದುರಂತದಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ರಸ್ತೆ ಬದಿ ಬೆಂಕಿ ಇಟ್ಟವರು ಯಾರೂ ಅನ್ನೋದು ಇನ್ನೂ ಗೊತ್ತಿಲ್ಲ. ಆದ್ರೆ ಬೆಂಕಿಯಲ್ಲಿ ಬೆಂದು ಮೈ ತುಂಬಾ ಸುಟ್ಟ ಗಾಯಗಳಾಗಿದ್ರೂ ತುರ್ತು ಚಿಕಿತ್ಸೆ ನೀಡಿದೆ ಗದಗ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸಿದಂತೂ ನಿಜಕ್ಕೂ ವಿಪರ್ಯಾಸ.

Published On - 7:15 am, Fri, 30 October 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ