AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರವಾಗಬೇಕಿದ್ದ ಕಾಲುವೆ ರೈತರಿಗೆ ಶಾಪವಾಗಿದೆ, ಅಧಿಕಾರಿಗಳ ಯಡವಟ್ಟಿಂದ ಅನ್ನದಾತ ಉಪವಾಸ

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ. ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ […]

ವರವಾಗಬೇಕಿದ್ದ ಕಾಲುವೆ ರೈತರಿಗೆ ಶಾಪವಾಗಿದೆ, ಅಧಿಕಾರಿಗಳ ಯಡವಟ್ಟಿಂದ ಅನ್ನದಾತ ಉಪವಾಸ
ಆಯೇಷಾ ಬಾನು
| Edited By: |

Updated on:Nov 05, 2020 | 3:20 PM

Share

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ.

ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಆಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ ಕಾಲುವೆಗೆ ನೀರು ಬರುತ್ತದೆ. ಕಾಲುವೆಗಳ ಮೂಲಕ ರೈತರು ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗಲಿ ಅಂತಾ ಕಾಲುವೆಗಳು ನಿರ್ಮಾಣ ಆಗಿವೆ.

ಕಾಲವೆಗಳಲ್ಲಿ ಭರಪೂರ ನೀರು ಬರುತ್ತೆ. ಆದ್ರೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳು ಗ್ರಾಮದ ರೈತರಿಗೆ ಅನುಕೂಲ ಆಗೋ ಬದಲು ಶಾಪವಾಗಿವೆ. ಯಾಕಂದ್ರೆ ಕಾಲುವೆ ನೀರು ಗ್ರಾಮದ ರೈತರ 500 ಕ್ಕೂ ಅಧಿಕ ಎಕರೆ ಜಮೀನಿಗೆ ನುಗ್ಗುತ್ತದೆ. ಇದ್ರಿಂದ ಬಹಳಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಹಾಳಾಗಿ ಹೋಗ್ತಿವೆ.

ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು: ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದ ಐನೂರಕ್ಕೂ ಅಧಿಕ ಎಕರೆ ಜಮೀನಿನ ರೈತರಿಗೆ ಎಲ್ಲಿಲ್ಲದ ಸಂಕಟ ಎದುರಾಗ್ತಿದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕಾಲುವೆ ನೀರು ನಿರಂತರವಾಗಿ ರೈತರ ಜಮೀನಿನಲ್ಲಿ ಹರಿಯುತ್ತದೆ. ಇದ್ರಿಂದ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾಳಾಗ್ತಿವೆ, ಕೊಳೆತು ಹೋಗ್ತಿವೆ. ಮತ್ತೊಂದೆಡೆ ಕೆಲವು ರೈತರ ಜಮೀನುಗಳಲ್ಲಿ ಮೆಕ್ಕೆಜೋಳ,‌ ಕಬ್ಬು ಫಸಲು ಬಂದಿದೆ. ಆದ್ರೆ ಜಮೀನುಗಳು ಕಾಲುವೆ ನೀರಿನಿಂದ ಜಲಾವೃತ ಆಗಿದ್ದರಿಂದ ಫಸಲು ಕೂಡ ಕೈ ಸೇರದಂಥ ಪರಿಸ್ಥಿತಿ ಎದುರಾಗಿದೆ.

ಬಹಳಷ್ಟು ಸಾಲ ಮಾಡಿ ಬೆಳೆದಿರೋ ರೇಷ್ಮೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಕೊಳೆತು ಹಾಳಾಗಿವೆ. ಇತ್ತ ಸಾಲ ಕೊಟ್ಟ ಬ್ಯಾಂಕ್, ಫೈನಾನ್ಸ್​ಗಳು ಸಾಲ ತುಂಬುವಂತೆ ರೈತರ ದುಂಬಾಲು ಬಿದ್ದಿವೆ. ಹೀಗಾಗಿ ಗ್ರಾಮದ ರೈತರು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ತಿಳಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗೆ ಆದ್ರೆ ನಮ್ಮ ಗತಿ ಏನು ಅಂತ ಬೆಳೆ ಹಾನಿಗೊಳಗಾದ ರೈತರು ಕಣ್ಣೀರು ಹಾಕಿದ್ದಾರೆ.

Published On - 3:17 pm, Thu, 5 November 20

Follow Us
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್