AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರವಾಗಬೇಕಿದ್ದ ಕಾಲುವೆ ರೈತರಿಗೆ ಶಾಪವಾಗಿದೆ, ಅಧಿಕಾರಿಗಳ ಯಡವಟ್ಟಿಂದ ಅನ್ನದಾತ ಉಪವಾಸ

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ. ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ […]

ವರವಾಗಬೇಕಿದ್ದ ಕಾಲುವೆ ರೈತರಿಗೆ ಶಾಪವಾಗಿದೆ, ಅಧಿಕಾರಿಗಳ ಯಡವಟ್ಟಿಂದ ಅನ್ನದಾತ ಉಪವಾಸ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Nov 05, 2020 | 3:20 PM

Share

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ.

ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಆಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ ಕಾಲುವೆಗೆ ನೀರು ಬರುತ್ತದೆ. ಕಾಲುವೆಗಳ ಮೂಲಕ ರೈತರು ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗಲಿ ಅಂತಾ ಕಾಲುವೆಗಳು ನಿರ್ಮಾಣ ಆಗಿವೆ.

ಕಾಲವೆಗಳಲ್ಲಿ ಭರಪೂರ ನೀರು ಬರುತ್ತೆ. ಆದ್ರೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳು ಗ್ರಾಮದ ರೈತರಿಗೆ ಅನುಕೂಲ ಆಗೋ ಬದಲು ಶಾಪವಾಗಿವೆ. ಯಾಕಂದ್ರೆ ಕಾಲುವೆ ನೀರು ಗ್ರಾಮದ ರೈತರ 500 ಕ್ಕೂ ಅಧಿಕ ಎಕರೆ ಜಮೀನಿಗೆ ನುಗ್ಗುತ್ತದೆ. ಇದ್ರಿಂದ ಬಹಳಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಹಾಳಾಗಿ ಹೋಗ್ತಿವೆ.

ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು: ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದ ಐನೂರಕ್ಕೂ ಅಧಿಕ ಎಕರೆ ಜಮೀನಿನ ರೈತರಿಗೆ ಎಲ್ಲಿಲ್ಲದ ಸಂಕಟ ಎದುರಾಗ್ತಿದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕಾಲುವೆ ನೀರು ನಿರಂತರವಾಗಿ ರೈತರ ಜಮೀನಿನಲ್ಲಿ ಹರಿಯುತ್ತದೆ. ಇದ್ರಿಂದ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾಳಾಗ್ತಿವೆ, ಕೊಳೆತು ಹೋಗ್ತಿವೆ. ಮತ್ತೊಂದೆಡೆ ಕೆಲವು ರೈತರ ಜಮೀನುಗಳಲ್ಲಿ ಮೆಕ್ಕೆಜೋಳ,‌ ಕಬ್ಬು ಫಸಲು ಬಂದಿದೆ. ಆದ್ರೆ ಜಮೀನುಗಳು ಕಾಲುವೆ ನೀರಿನಿಂದ ಜಲಾವೃತ ಆಗಿದ್ದರಿಂದ ಫಸಲು ಕೂಡ ಕೈ ಸೇರದಂಥ ಪರಿಸ್ಥಿತಿ ಎದುರಾಗಿದೆ.

ಬಹಳಷ್ಟು ಸಾಲ ಮಾಡಿ ಬೆಳೆದಿರೋ ರೇಷ್ಮೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಕೊಳೆತು ಹಾಳಾಗಿವೆ. ಇತ್ತ ಸಾಲ ಕೊಟ್ಟ ಬ್ಯಾಂಕ್, ಫೈನಾನ್ಸ್​ಗಳು ಸಾಲ ತುಂಬುವಂತೆ ರೈತರ ದುಂಬಾಲು ಬಿದ್ದಿವೆ. ಹೀಗಾಗಿ ಗ್ರಾಮದ ರೈತರು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ತಿಳಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗೆ ಆದ್ರೆ ನಮ್ಮ ಗತಿ ಏನು ಅಂತ ಬೆಳೆ ಹಾನಿಗೊಳಗಾದ ರೈತರು ಕಣ್ಣೀರು ಹಾಕಿದ್ದಾರೆ.

Published On - 3:17 pm, Thu, 5 November 20

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್